
ಶಿವಮೊಗ್ಗ(ಡಿ.17): ನಮ್ಮತ್ರ ಕಪ್ಪು ಹಣ ಇದೆ..? ನಿಮಗೆ ಲಕ್ಷಕ್ಕಿಷ್ಟು ಅಂತ ಕಮಿಷನ್ ಕೊಡ್ತೇವೆ, ನೀವು ಕಪ್ಪು ಹಣವನ್ನು ವೈಟ್ ಮಾಡಿ ಲಕ್ಷ ಲಕ್ಷ ಕಮಿಷನ್ ಪಡೆಯಿರಿ. ಹೀಗಂತ ಬಣ್ಣದ ಮಾತುಗಳನ್ನ ಆಡಿ ನಂಬಿಸಿ, ಬ್ಲಾಕ್ ಮನಿಗೆ ಬದಲಾಗಿ ಹೊಸ ನೋಟುಗಳನ್ನು ಕೊಡುತ್ತಾರೆ. ಬಳಿಕ ಹೊಸ ನೋಟುಗಳನ್ನ ತೆಗೆದುಕೊಂಡು ಹೋದವರನ್ನು ಅಡ್ಡಗಟ್ಟಿ ಮಚ್ಚು- ಲಾಂಗ್ ತೋರಿಸಿ ಹಣ ದರೋಡೆ ಮಾಡುತ್ತಾರೆ. ಇಂತಹ ಖತರ್ನಾಕ್ ಜಾಲವನ್ನ ಶಿವಮೊಗ್ಗ ಪೊಲೀಸರು ಬಂಧಿಸಿದ್ದಾರೆ.
15 ಲಕ್ಷ ರೂಪಾಯಿ ದರೋಡೆ ನಡೆಸಿದ 9 ನಟೋರಿಯಸ್ ರೌಡಿಗಳ ಗ್ಯಾಂಗೊಂದನ್ನ ಡಿಸಿಐಬಿ ಮತ್ತು ಭದ್ರಾವತಿಯ ನ್ಯೂಟೌನ್ ಪೋಲಿಸರು ಜಂಟಿ ಕಾರ್ಯಾಚರಣೆ ನಡೆಸಿ ಖೆಡ್ಡಾಗೆ ಕೆಡವಿದ್ದಾರೆ. ಬಂಧಿತರನ್ನ ನಟೋರಿಯಸ್ ರೌಡಿ ಬಂಕ್ ಬಾಲು, ಕಾರ್ತಿಕ್, ರಘುನಾಥ ಶೆಟ್ಟಿ, ಅಜಯ ಅಲಿಯಾಸ್ ಕರೆಂಟ್, ಅರುಣ್ ಅಲಿಯಾಸ್ ಗೂನು, ರವಿಕಿರಣ, ಫಾರೂಕ್, ಮತ್ತು ಕಿರಣ್ ಎಂದು ಗುರ್ತಿಸಲಾಗುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.