
ಉಡುಪಿ (ಜ.28): ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಪ್ರಸಿದ್ಧ ಅತ್ತೂರು ಜಾತ್ರೆಯಲ್ಲಿ ಓರ್ವ ಗೋಲ್ಡ್ ಮ್ಯಾನ್ ಕಾಣಿಸಿಕೊಂಡಿದ್ದಾನೆ.
ಮುಂಬೈನ ಕುರ್ಲಾದ ಲೂಯಿಸ್ ಎಂಬವರು ತನ್ನ ಮೈಮೇಲೆ ಧರಿಸಿದ್ದ ಆಭರಣಗಳಿಂದಾಗಿ ಅತ್ತೂರು ಜಾತ್ರೆಯಲ್ಲಿ ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾದ ಘಟನೆ ನಡೆದಿದೆ.
ಲೂಯಿಸ್ ವೃತ್ತಿಯಲ್ಲಿ ಟೆಲಿವಿಷನ್ ಕೇಬಲ್ ನೆಟ್ ವರ್ಕ್ ನ ಮುಖ್ಯಸ್ಥ, ಮುಂಬೈ ನಲ್ಲಿ ಡೆನ್ ನೆಟ್ ವರ್ಕ್ ನಡೆಸುತ್ತಾರೆ. ಅತ್ತೂರಿನ ಚರ್ಚ್ ನ ಮಹಿಮೆಗಳನ್ನು ತಿಳಿದು ಅವರು ಇಲ್ಲಿಗೆ ಬಂದಿದ್ದಾರೆ.
ಇವರ ಮೈ ಮೇಲೆ ಏನಿಲ್ಲಾ ಅಂದ್ರೂ ಎರಡು ಕೆ.ಜಿ ಚಿನ್ನ ಇದೆ. ಆದರೆ ಎಲ್ಲವೂ ಕಾನೂನುಬದ್ದ ಖರೀದಿ ಅನ್ನೋದು ಇಲ್ಲಿ ಮುಖ್ಯ.
ಇವರ ಮನೆಯಲ್ಲಿ ಯಾರಿಗೂ ಚಿನ್ನದ ಮೋಹವಿಲ್ಲ. ಲೂಯಿಸ್ ಕಳೆದ 25 ವರ್ಷಗಳಿಂದ ಇದೇ ರೀತಿ ಚಿನ್ನ ಧರಿಸಿಕೊಂಡು ಎಲ್ಲರ ಗಮನಸೆಳೆದಿದ್ದಾರೆ. ಜಾತ್ರೆಯಲ್ಲಿ ಜನ ತಾಮುಂದು ನಾಮುಂದು ಅಂತ ಮುಗಿಬಿದ್ದು ಲೂಯಿಸ್ ಸೆಲ್ಫೀ ತಗೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.