ಸರಿ ಮಾಡಿದ್ದಾರೆ: ಸಿಧು ರಾಜೀನಾಮೆ ಬೆಂಬಲಸಿದ ಶತ್ರು!

By Web DeskFirst Published Jul 14, 2019, 9:59 PM IST
Highlights

‘ಸಿಧು ಅನಿಸಿದ್ದನ್ನೇ ಮಾಡುವ ದಿಟ್ಟ ನಾಯಕ’|ನವಜೋತ್ ಸಿಂಗ್ ಸಿಧು ರಾಜೀನಾಮೆ ಬೆಂಬಲಿಸಿದ ಶತ್ರುಘ್ನ ಸಿನ್ಹಾ| ಸಿಧು ರಾಜೀನಾಮೆ ನಿಡಿದ್ದು ಸರಿಯಾದ ನಿರ್ಧಾರ ಎಂದ ಕಾಂಗ್ರೆಸ್ ನಾಯಕ| ಪಂಜಾಬ್ ಸಿಎಂ ಕ್ಯಾ.ಅಮರೀಂದರ್ ಸಿಂಗ್ ಜೊತೆ ವೈಮನಸ್ಸು|

ನವದೆಹಲಿ(ಜು.14): ಪಂಜಾಬ್ ಸಂಪುಟಕ್ಕೆ ರಾಜೀನಾಮೆ ನೀಡಿರುವ ನವಜೋತ್ ಸಿಂಗ್ ಸಿಧು ನಸೆಯನ್ನು, ಮತ್ತೋರ್ವ ಕಾಂಗ್ರೆಸ್ ನಾಯಕ ಶತ್ರುಘ್ನ ಸಿನ್ಹಾ ಶ್ಲಾಘಿಸಿದ್ದಾರೆ.

ಸಿಧು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಸರಿಯಾದ ನಿರ್ಧಾರ ಎಂದಿರುವ ಸಿನ್ಹಾ, ಅವರು ಯಾವಾಗಲೂ ತಮ್ಮ ಮನಸ್ಸಿಗೆ ಅನಿಸಿದ್ದನ್ನು ಮಾಡುತ್ತಾರೆ ಎಂದು ಪ್ರಶಂಸಿದ್ದಾರೆ.

ಪಂಜಾಬ್ ಸಿಎಂ ಕ್ಯಾ. ಅಮರೀಂದರ್ ಸಿಂಗ್ ಅವರೊಂದಿಗಿನ ವೈಮನಸ್ಸಿನ ಹಿನ್ನೆಲೆಯಲ್ಲಿ, ಸಿಧು ಇಂದು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಹುಲ್ ಗಾಂಧಿ ಅವರಿಗೆ ಪತ್ರ ರವಾನಿಸಿದ್ದರು.

click me!