
ಸತಾರಾ[ಅ.20]: ಎನ್ಸಿಪಿ (ರಾಷ್ಟ್ರವಾದಿ ಕಾಂಗ್ರೆಸ್ ಪಕ) ಮುಖ್ಯಸ್ಥ ಶರದ್ ಪವಾರ್ (78) ಅವರು ಶುಕ್ರವಾರ ರಾತ್ರಿ ಇಲ್ಲಿ ಸುರಿಯುತ್ತಿರುವ ಮಳೆಯಲ್ಲೇ ಪ್ರಚಾರ ಭಾಷಣ ಮಾಡಿ ಗಮನ ಸೆಳೆದರು.
ಅ.21ರ ವಿಧಾನಸಭಾ ಚುನಾವಣೆ ಹಾಗೂ ಸತಾರಾ ಲೋಕಸಭಾ ಉಪಚುನಾವಣೆ ನಿಮಿತ್ತ ಇಲ್ಲಿ ನಡೆದ ಎನ್ಸಿಪಿ ಪ್ರಚಾರ ರಾರಯಲಿಯಲ್ಲಿ ಪವಾರ್ ಅವರು ವೇದಿಕೆಯನ್ನೇರಿ ಮಾತನಾಡುತ್ತಿರುವಾಗ ಮಳೆ ಸುರಿಯಲು ಆರಂಭಿಸಿತು. ಆದರೆ ಅವರು ಭಾಷಣ ನಿಲ್ಲಿಸಲಿಲ್ಲ. ಪೂರ್ತಿ ತೋಯ್ದು ತೊಪ್ಪೆಯಾದರೂ, ಭಾಷಣ ಮುಂದುವರಿಸಿದರು. ಆಗ ಅವರ ಪರ ಕಾರ್ಯಕರ್ತರ ಜೈಘೋಷಗಳು ಮೊಳಗಿದವು. ಅವರ ಈ ವಿಡಿಯೋ ವೈರಲ್ ಆಗಿದೆ.
ಈ ವೇಳೆ ಪವಾರ್ ಅವರು, ‘ಕಳೆದ ಲೋಕಸಭೆ ಚುನಾವಣೆಯಲ್ಲಿ ಶಿವಾಜಿ ಮಹಾರಾಜರ ವಂಶಸ್ಥ ಉದಯನ್ರಾಜೆ ಭೋಂಸ್ಲೆ ಅವರನ್ನು ಕಣಕ್ಕಿಳಿಸಿ ತಪ್ಪು ಮಾಡಿದೆ. ಆದರೆ ಈಗ ವರುಣ ದೇವನ ಆಗಮನವು ನಮ್ಮನ್ನು ಆಶೀರ್ವದಿಸುತ್ತಿದೆ ಎಂಬುದರ ಸಂಕೇತ’ ಎಂದು ಹೇಳಿದರು.
ಭೋಂಸ್ಲೆ ಅವರು 2018ರಲ್ಲಿ ಎನ್ಸಿಪಿಯಿಂದ ಗೆದ್ದಿದ್ದರೂ ಇತ್ತೀಚೆಗೆ ಬಿಜೆಪಿ ಸೇರಿ ಈಗ ಆ ಪಕ್ಷದಿಂದಲೇ ಉಪಚುನಾವಣೆ ಅಭ್ಯರ್ಥಿಯಾಗಿದ್ದಾರೆ. ಭೋಂಸ್ಲೆ ಅವರ ಕ್ರಮ ಪವಾರ್ರನ್ನು ಸಿಟ್ಟಿಗೆಬ್ಬಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.