
ಬೆಳಗಾವಿ : ಶನಿದೇವರ, ವಿಘ್ನೇಶ್ವರ ಇಬ್ಬರೂ ಪತ್ರಕರ್ತರೇ! ಹೀಗೆಂದು ಮಾಧ್ಯಮ ಪ್ರತಿನಿಧಿಗಳಿಗೆ ಎರಡೂ ಕೈಮುಗಿದು, ಜೋರಾಗಿ ನಗುತ್ತಾ ಹೇಳಿದವರು ಮಾತಿನ ಮಲ್ಲ, ಪರಿಷತ್ ಸದಸ್ಯ ಸಿ.ಎಂ. ಇಬ್ರಾಹಿಂ.
ವಿಧಾನ ಪರಿಷತ್ ಕಲಾಪ ಆರಂಭಕ್ಕೂ ಮುನ್ನ ಬಿಜೆಪಿ ಸದಸ್ಯ ಕೆ.ಪಿ.ನಂಜುಂಡಿ ಅವರ ಜೊತೆ ಮಾತನಾಡಿ, ಸಮೀಪದಲ್ಲಿರುವ ಪತ್ರಕರ್ತರ ಗ್ಯಾಲರಿ ಬಳಿ ಬಂದ ಅವರು, ‘ಶನಿದೇವರಿಗೆ, ವಿಘ್ನೇಶ್ವರನಿಗೆ ನಮಸ್ಕಾರಗಳು...’ ಎಂದು ಹೇಳತೊಡಗಿದರು.
ಯಾಕೆ ಸಾರ್ ಎಂದು ಕೇಳುತ್ತಿದ್ದಂತೆ, ಯಾವುದೇ ಕೆಲಸ ಸರಿಯಾಗಿ ಆಗಬೇಕಾದರೆ ಮೊದಲು ವಿಘ್ನೇಶ್ವರನಿಗೆ ನಮಸ್ಕಾರ ಮಾಡಬೇಕು, ಅದಕ್ಕೇ ನಿಮಗೆ ನಮಸ್ಕಾರ ಮಾಡಿದೆ.
ಅದೇ ರೀತಿ ನಮ್ಮನ್ನು ಕಾಡಬೇಡಿ, ನಮ್ಮನ್ನು ಬಿಟ್ಟುಬಿಡಿ ಎಂದು ಶನಿದೇವರನ್ನು ಕೇಳಬೇಕು. ವಿಘ್ನೇಶ್ವರ ಹಾಗೂ ಶನಿದೇವರು ಎರಡೂ ನೀವೇ ಎಂದು ದೊಡ್ಡ ದನಿಯಲ್ಲಿ ನಗುತ್ತ ತಮ್ಮ ಆಸನದತ್ತ ತೆರಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.