ಸಿದ್ದರಾಮಯ್ಯ ವಿರುದ್ಧ ಶಾಮನೂರು ಗರಂ

Published : Dec 25, 2018, 11:35 AM IST
ಸಿದ್ದರಾಮಯ್ಯ ವಿರುದ್ಧ ಶಾಮನೂರು ಗರಂ

ಸಾರಾಂಶ

ಸಚಿವ ಸಂಪುಟ ವಿಸ್ತರಣೆಯಾದ ಬೆನ್ನಲ್ಲೇ ಹಲವರಿಂದ ಅಸಮಾಧಾನ ವ್ಯಕ್ತವಾಗಿದ್ದು ಈ ಸಾಲಿಗೆ ಇದೀಗ ಶಾಮನೂರು ಶಿವಶಂಕರಪ್ಪ ಕೂಡ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ. 

ದಾವ​ಣ​ಗೆರೆ: ಮಾಜಿ ಮುಖ್ಯಮಂತ್ರಿ ಸಿದ್ದ​ರಾ​ಮಯ್ಯ, ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ವೇಣು​ಗೋ​ಪಾಲ್‌ ಅವರ ಬಾಲ​ಬ​ಡು​ಕ​ರಿ​ಗಷ್ಟೇ ಸಚಿವ ಸ್ಥಾನ ನೀಡಲಾಗಿದೆ ಎಂದು ಹಿರಿಯ ಕಾಂಗ್ರೆಸ್‌ ಮುಖಂಡ ಶಾಮನೂರು ಶಿವಶಂಕರಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನನಗೆ ಸಚಿವ ಸ್ಥಾನವೇ ಬೇಡ, ಅದರ ಅಪ್ಪ​ನಂತೆಯೇ ನಾನಿ​ದ್ದೇ​ನೆ ಎಂದು ಇದೇ ವೇಳೆ ಗುಡುಗಿದ್ದಾರೆ.

ನಗ​ರದ ತಮ್ಮ ನಿವಾ​ಸ​ದಲ್ಲಿ ಸೋಮ​ವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಸಿದ್ದ​ರಾ​ಮಯ್ಯ ಅಥವಾ ವೇಣು​ಗೋ​ಪಾಲ್‌ ಬಾಲ​ಬಡು​ಕ​ನಲ್ಲ. ಈ ಕಾರ​ಣಕ್ಕೆ ನನ್ನನ್ನು ಸಚಿವ ಸ್ಥಾನಕ್ಕೆ ಪರಿ​ಗ​ಣಿ​ಸಿಲ್ಲ. ರಾಮ​ಲಿಂಗಾ​ರೆಡ್ಡಿ, ಬಿ.ಸಿ.​ಪಾ​ಟೀ​ಲ್‌ಗೆ ಸಚಿವ ಸ್ಥಾನ ನೀಡದಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.

ಸಂಪುಟ ಪುನಾರಚನೆ ವೇಳೆ ಹಿರಿಯರಾದ ಮಲ್ಲಿ​ಕಾ​ರ್ಜುನ ಖರ್ಗೆ ಮಾತನ್ನೂ ಕಡೆ​ಗ​ಣಿಸಲಾಗಿದೆ. ದುಡ್ಡಿದ್ದ​ವ​ರಿ​ಗಷ್ಟೇ ಸಚಿವ ಸ್ಥಾನ ಸಿಕ್ಕಿದೆ. ಸದ್ಯ​ದಲ್ಲೇ ರಾಮ​ಲಿಂಗಾ​ರೆಡ್ಡಿ ಸೇರಿ ಅನೇಕ ಪ್ರಮುಖ ನಾಯ​ಕರು ಬೆಂಗ​ಳೂ​ರಿ​ನಲ್ಲಿ ಸಭೆ ನಡೆಸಿ ಅನ್ಯಾ​ಯ ಖಂಡಿ​ಸು​ತ್ತೇವೆ. ಅವ​ಕಾಶ ವಂಚಿತ ಶಾಸ​ಕ​ರಾರ‍ಯರೂ ನನ್ನನ್ನು ಸಂಪರ್ಕಿಸಿಲ್ಲ. ಸಂಪುಟ ವಿಸ್ತ​ರ​ಣೆ​ಯಲ್ಲಿ ಆಗಿ​ರುವ ಅನ್ಯಾ​ಯದ ಬಗ್ಗೆ ನಾವೆಲ್ಲರೂ ಧ್ವನಿ​ಯ​ನ್ನಂತೂ ಎತ್ತು​ತ್ತೇವೆ ಎಂದರು.

ಲಿಂಗಾ​ಯತ ಪ್ರತ್ಯೇಕ ಧರ್ಮಕ್ಕೆ ಮರುಜೀವ ಯತ್ನ:

ಲಿಂಗಾ​ಯತ ಪ್ರತ್ಯೇಕ ಧರ್ಮದ ವಿಚಾರ ಮುಕ್ತಾ​ಯ​ವಾಯಿತು ಅಂದು​ಕೊಂಡಿದ್ದೆ. ಆದರೆ, ಅದಕ್ಕೆ ಮರುಜೀವ ನೀಡುವ ಕೆಲ​ಸವೂ ನಡೆ​ದಿದೆ. ಕಾಂಗ್ರೆಸ್‌ ಪಕ್ಷ​ದಲ್ಲಿ ಸಿದ್ದ​ರಾ​ಮಯ್ಯ ಆಪ್ತ​ನೆಂದೇ ಗುರು​ತಿ​ಸಿ​ಕೊಂಡ ಎಂ.ಬಿ.​ ಪಾ​ಟೀ​ಲ್‌ಗೆ ಸಚಿವ ಸ್ಥಾನ ನೀಡುವ ಮೂಲಕ ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾ​ರ​ವನ್ನು ಜೀವಂತ​ವಾ​ಗಿಡುವ ಹುನ್ನಾರ ನಡೆ​ದಿದೆ. ಮತ್ತೆ ಇದು ವೀರ​ಶೈವ ಲಿಂಗಾ​ಯತ ಧರ್ಮ​ದಲ್ಲಿ ಸಂಘ​ರ್ಷಕ್ಕೆ ನಾಂದಿ ಹಾಡಿ​ದಂತಾ​ಗಿದೆ ಎಂದು ಅಖಿಲ ಭಾರತ ​ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯ​ಕ್ಷರೂ ಆದ ಶಾಮ​ನೂ​ರು ಆತಂಕ ವ್ಯಕ್ತ​ಪ​ಡಿ​ಸಿ​ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬಾಬ್ರಿ ಮಸೀದಿಗೆ ಅಡಿಗಲ್ಲು ವಿವಾದ ಬೆನ್ನಲ್ಲೇ ಬಂಗಾಳದಲ್ಲಿ 5 ಲಕ್ಷ ಹಿಂದೂಗಳಿಂದ ಭಗವದ್ಗೀತೆ ಪಠಣ
ಕಾಂಗ್ರೆಸ್ ಸರ್ಕಾರ ಶೇ.60ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ: ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಪ