
ಬೆಂಗಳೂರು (ಮಾ. 17): ಆಕಾಶ್ ಮೆಡಿಕಲ್ ಇನ್ಸ್ಟಿಟ್ಯೂಟ್ ಮಾಲಿಕ ಮುನಿರಾಜ್’ನಿಂದ ಮಹಿಳೆಗೆ ಲೈಂಗಿಕ ದೌರ್ಜನ್ಯ ಹಾಗೂ ಪ್ರಾಣ ಬೆದರಿಕೆ ಬಂದಿದೆ.
ಆಕಾಶ್ ಇನ್ಸ್ಟಿಟ್ಯೂಟ್ ಮಾಲಿಕ ಮುನಿರಾಜು ಮತ್ತು ಪುಷ್ಪ ಮುನಿರಾಜ್ ಎಂಬುವರ ವಿರುದ್ದ ಎಫ್ ಐ ಆರ್ ದಾಖಲಾಗಿದೆ.
ಕಳೆದ ನಾಲ್ಕು ವರ್ಷಗಳಿಂದ ಆಕಾಶ್ ಇನ್ಸ್ಟಿಟ್ಯೂಟ್’ನಲ್ಲಿ ಮಹಿಳೆ ಕೆಲಸ ಮಾಡುತಿದ್ದರು. ಎಂಸಿಐ ಇನ್ಸ್ ಸ್ಪೆಕ್ಷನ್ ವೇಳೆ ನಕಲಿ ರೋಗಿಗಳನ್ನು ಆಸ್ಪತ್ರೆಗೆ ಕರೆಸಲಾಗುತಿತ್ತು. ಈ ಕೆಲಸವನ್ನು ದೂರುದಾರೆ ಸಂತ್ರಸ್ಥೆ ಆಕಾಶ್ ಇನ್ಸ್ಟಿಟ್ಯೂಟ್ ಮಾಲಿಕರ ಸೂಚನೆಯಂತೆ ಮಾಡುತಿದ್ದರು. ಸಂತ್ರಸ್ತ ಮಹಿಳೆ ಮಾಡುತಿದ್ದ ಕೆಲಸ ಎಂಸಿಐ ರೂಲ್ಸ್’ಗೆ ವಿರುದ್ದ ಎಂದು ತಿಳಿದು ಬಂದಿತ್ತು. ಈ ವಿಚಾರವಾಗಿ ಸಂತ್ರಸ್ಥೆ ನಕಲಿ ರೋಗಿಗಳನ್ನು ಎಂಸಿಐ ಇನ್ಸ್ ಸ್ಪೆಕ್ಷನ್’ಗೆ ಕರೆತರುವುದನ್ನು ನಿಲ್ಲಿಸಿದ್ದರು. ಇದರಿಂದ ಕೋಪಗೊಂಡ ಮುನಿರಾಜು ಮಹಿಳೆಗೆ ಲೈಂಗಿಕ ದೌರ್ಜನ್ಯ ಹಾಗೂ ಜೀವ ಬೆದರಿಕೆ ಹಾಕಿದ್ದಾರೆ. ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.