
ನವದೆಹಲಿ: ರಾಷ್ಟ್ರಗೀತೆಯಲ್ಲಿ ಬರುವ ‘ಸಿಂಧ್’ ಪದ ಬದಲಾಯಿಸಿ, ‘ಈಶಾನ್ಯ ಭಾರತ’ ಪದ ಸೇರ್ಪಡೆಗೊಳಿಸುವಂತೆ ಕೋರಿ ಕಾಂಗ್ರೆಸ್ನ ರಾಜ್ಯಸಭಾ ಸದಸ್ಯ ರಿಪುನ್ ಬೋರಾ ಖಾಸಗಿ ಮಸೂದೆ ಮಂಡಿಸಿದ್ದಾರೆ.
ಪಾಕಿಸ್ತಾನಕ್ಕೆ ಸೇರಿರುವ ಸಿಂಧ್ ಈಗ ಭಾರತದ ಭಾಗವಾಗಿಲ್ಲ, ಆದರೆ ಈಶಾನ್ಯ ಭಾರತ ದೇಶದ ಅತ್ಯಂತ ಪ್ರಮುಖ ಭಾಗವಾಗವಾಗಿದೆ.
ಆದರೆ, ಅದು ರಾಷ್ಟ್ರಗೀತೆಯಲ್ಲಿ ಉಲ್ಲೇಖಿಸಲ್ಪಟ್ಟಿಲ್ಲ ಎಂಬುದು ವಿಷಾಧನೀಯ ಎಂದು ಬೋರಾ ಹೇಳಿದ್ದರೆ. 1911ರಲ್ಲಿ ನೊಬೆಲ್ ಪುರಸ್ಕೃತ ಕವಿ ರವೀಂದ್ರನಾಥ ಠಾಗೊರ್ ಬಂಗಾಳಿಯಲ್ಲಿ ‘ಜನಗಣಮನ’ ಗೀತೆ ರಚಿಸಿದ್ದು, ಆಗ ಭಾರತದ ವ್ಯಾಪ್ತಿ ಬಲೂಚಿಸ್ತಾನದವರೆಗೂ ವಿಸ್ತರಿಸಿದ್ದುದರಿಂದ, ಸಿಂಧ್ ಭಾರತದ ಭಾಗವಾಗಿ ಪರಿಗಣಿಸಲ್ಪಟ್ಟಿತ್ತು.
1947ರಲ್ಲಿ ದೇಶವಿಭಜನೆಯ ವೇಳೆ ಸಿಂಧ್ ಪಾಕಿಸ್ತಾನಕ್ಕೆ ಸೇರಿಸಲ್ಪಟ್ಟಿತ್ತು. ಗೀತೆಯ ಹಿಂದಿ ಆವೃತ್ತಿಗೆ 1950, ಜ.24ರಂದು ಸಂಸತ್ತಿನಲ್ಲಿ ರಾಷ್ಟ್ರಗೀತೆಯ ಮಾನ್ಯತೆ ನೀಡಲಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.