ಬಿಜೆಪಿ ಬೆಂಬಲಿಗ ಸಹೋದರನ ಸೋಲಿಸಲು ತೊಡೆತಟ್ಟಿದ ಕಾಂಗ್ರೆಸ್ ನಾಯಕ

By Web DeskFirst Published Apr 22, 2019, 8:52 AM IST
Highlights

ಲೋಕಸಭೆ ಚುನಾವಣೆಯ ಈ ಸಂದರ್ಭದಲ್ಲಿ ಬಿಜೆಪಿ ಬೆಂಬಲಿತ ಸಹೋದರನ ವಿರುದ್ಧ ಕಾಂಗ್ರೆಸ್ ನಾಯಕ ತೊಡೆತಟ್ಟಿದ್ದಾರೆ. 

ಬೆಳಗಾವಿ :  ಗೋಕಾಕ ಕ್ಷೇತ್ರಕ್ಕೆ ನಡೆಯಲಿರುವ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ಲಖನ್ ಜಾರಕಿಹೊಳಿ ಅವರನ್ನು ಕಣಕ್ಕಿಳಿಸಲಾಗುವುದು. 

ಕ್ಷೇತ್ರದ ಜನರು ಯಾರನ್ನು ಬೆಂಬಲಿಸುತ್ತಾರೆ ಎಂಬುದನ್ನು ನೋಡೋಣ ಎಂದು ಸಹೋದರ ರಮೇಶ್ ಜಾರಕಿಹೊಳಿ  ವಿರುದ್ಧ ಸಹೋದರ ಸತೀಶ್ ಜಾರಕಿಹೊಳಿ ತೊಡೆ ತಟ್ಟಿದ್ದಾರೆ. 

ಉಪಚುನಾವಣೆಯಲ್ಲಿ ರಮೇಶ್ ಜಾರಕಿಹೊಳಿ ಅವರನ್ನು ಸೋಲಿಸುವುದೇ ನಮ್ಮ ಮುಂದಿನ ಗುರಿ. ಮುಕ್ತ ಚುನಾವಣೆ ನಡೆದರೆ ಯಾರ ಶಕ್ತಿ ಏನು ಎಂಬುದು ಗೊತ್ತಾಗುತ್ತದೆ. 

ಲೋಕಸಭೆ ಚುನಾವಣೆ ನಮಗೆ ಸೆಮಿಫೈನಲ್ ಆಗಿದೆ ಎಂದರು.

click me!