
ಗುವಾಹಟಿ(ಜ. 26): ಗಣರಾಜ್ಯೋತ್ಸವ ದಿನದಂದು ಅಸ್ಸಾಮ್'ನ ಮೂರು ಜಿಲ್ಲೆಗಳಲ್ಲಿ ಸರಣಿ ಬಾಂಬ್ ಸ್ಫೋಟಗಳು ಸಂಭವಿಸಿವೆ. ಅದೃಷ್ಟಕ್ಕೆ ಯಾವುದೇ ಜೀವ ಹಾನಿಯಾಗಿಲ್ಲ, ಗಾಯವೂ ಆಗಿಲ್ಲ. ಅಸ್ಸಾಮ್'ನ ಪೂರ್ವಭಾಗದಲ್ಲಿರುವ ದಿಬ್ರುಗಡ್, ತಿನ್ಸುಕಿಯಾ ಮತ್ತು ಚರಾಯಿದೇವೋ ಜಿಲ್ಲೆಗಳಲ್ಲಿ ಏಳು ಕಡೆ ಬಾಂಬ್'ಗಳನ್ನು ಸ್ಫೋಟಿಸಲಾಗಿದೆ. ಉದ್ದೇಶಪೂರ್ವಕವಾಗಿ ನಿರ್ಜನ ಪ್ರದೇಶಗಳಲ್ಲಿ ಬಾಂಬ್'ಗಳನ್ನಿಡಲಾಗಿತ್ತು. ಹೀಗಾಗಿ, ಯಾವುದೇ ಹಾನಿಯಾಗಿಲ್ಲ. ಉಲ್ಫಾ ಉಗ್ರರು ಈ ಕೃತ್ಯ ಎಸಗಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಈಶಾನ್ಯ ರಾಜ್ಯಗಳಲ್ಲಿ ಗಣರಾಜ್ಯೋತ್ಸವ ಆಚರಣೆ ಮಾಡಬಾರದೆಂದು ಉಗ್ರ ಸಂಘಟನೆಗಳು ಕರೆಕೊಟ್ಟಿದ್ದವು. ತಮ್ಮ ಇರುವಿಕೆಯನ್ನು ತೋರಿಸಲು ಉಗ್ರರು ಸಾಂಕೇತಿಕವಾಗಿ ಬಾಂಬ್ ಸ್ಫೋಟಿಸಿರುವ ಸಾಧ್ಯತೆ ಇದೆ ಎಂಬುದು ಪೊಲೀಸರ ಅನುಮಾನ.
(ಸುದ್ದಿಯಲ್ಲಿ ಬಳಸಿರುವ ಫೋಟೋ ಕೇವಲ ಪ್ರಾತಿನಿಧಿಕ ಮಾತ್ರ)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.