ಕಾಂಗ್ರೆಸ್‌ನಲ್ಲಿ ಬಂಡಾಯದ ವಾಸನೆ?

Published : Jun 12, 2019, 02:00 PM IST
ಕಾಂಗ್ರೆಸ್‌ನಲ್ಲಿ ಬಂಡಾಯದ ವಾಸನೆ?

ಸಾರಾಂಶ

ರಾಹುಲ್ ಗಾಂಧಿ ವಿರುದ್ಧ ಹಿರಿಯ ಕಾಂಗ್ರೆಸ್ ನಾಯಕರ ಅಸಮಾಧಾನ | ಪಂಜಾಬ್ ಸಿಎಂ ಅಮರಿಂದರ್‌ ಸಿಂಗ್‌ ರಾಹುಲ್ ರನ್ನು ಮೊದಲಿಂದಲೂ ಕ್ಯಾರೇ ಅನ್ನೋಲ್ಲ | 

ದಿಲ್ಲಿಗೆ ಬಂದಿದ್ದ ಮಧ್ಯಪ್ರದೇಶ ಮುಖ್ಯಮಂತ್ರಿ, ಮಗನನ್ನು ಕರೆದುಕೊಂಡು ಹೋಗಿ ಮೋದಿ ಸಾಹೇಬರನ್ನು ಅರ್ಧ ಗಂಟೆ ಮಾತನಾಡಿಸಿ, 4 ದಿನಗಳ ಹಿಂದೆ ನಡೆದಿದ್ದ ಕಾಂಗ್ರೆಸ್‌ ಕಾರ್ಯಕಾರಿ ಸಭೆಗೆ ಹಾಜರಾಗಲಿಲ್ಲ. ರಾಹುಲ್, ಕಮಲ್ ನಾಥ್‌ ಬಗ್ಗೆ ಟೀಕಿಸಿದ್ದಕ್ಕೆ ಮುಖ್ಯಮಂತ್ರಿ ಹಾಕಿದ ಗುಟುರು ಇದು.

ಇನ್ನು ಪಂಜಾಬ್ ಸಿಎಂ ಅಮರಿಂದರ್‌ ಸಿಂಗ್‌ ಅಂತೂ ರಾಹುಲ್ ರನ್ನು ಮೊದಲಿಂದಲೂ ಕ್ಯಾರೇ ಅನ್ನೋಲ್ಲ. ಇನ್ನು ರಾಜಸ್ಥಾನದಲ್ಲಿ ಕೂಡ ಸೋಲಿನ ನಂತರ ಒಳಜಗಳ ಅತಿಯಾಗಿದ್ದು, ಗೆಹ್ಲೋಟ್‌ ಮತ್ತು ಸಚಿನ್‌ ಪೈಲಟ್‌ರನ್ನು ದಿಲ್ಲಿಗೆ ಕರೆಸಿಕೊಳ್ಳಿ ಎಂದು ರಾಹುಲ್, ಪ್ರಿಯಾಂಕಾ ಇಬ್ಬರಿಗೂ ಮುಖದ ಮೇಲೆ ಹೇಳಿ ಬಂದಿದ್ದಾರೆ.

ಹರಿಯಾಣದಲ್ಲಂತೂ ಮಾಜಿ ಮುಖ್ಯಮಂತ್ರಿ ಭೂಪಿಂದರ್‌ ಸಿಂಗ್‌ ಹೂಡಾ ನೇರವಾಗಿ ದಿಲ್ಲಿ ನಾಯಕರ ವಿರುದ್ಧ ತೊಡೆ ತಟ್ಟಿದ್ದಾರೆ. ಸ್ವಲ್ಪ ದಿಲ್ಲಿ ನಾಯಕರ ಮಾತು ಕೇಳುವ ಮುಖ್ಯಮಂತ್ರಿ ಎಂದರೆ ಪುದುಚೇರಿ ಎಂಬ ಸಣ್ಣ ರಾಜ್ಯದ ನಾರಾಯಾಣ ಸ್ವಾಮಿ. ಕಾಂಗ್ರೆಸ್‌ ಹೀಗೆಯೇ ಹೀನಾಯವಾಗಿ ಸೋಲುತ್ತಾ ಇದ್ದರೆ ಬಂಡಾಯ ಸಹಜ. ಅದು ರಾಜಕಾರಣದಲ್ಲಿ ಸೋತವರಿಗೆ ಯಾವುದೇ ಕಿಮ್ಮತ್ತಿಲ್ಲ. ಇಲ್ಲಿ ಆಟ ಆಡುತ್ತಾ ಇರಬೇಕೆಂದರೆ ಗೆಲ್ಲುತ್ತಾ ಇರಬೇಕು.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ರಾಜಕಾರಣದ ಸುದ್ದಿಗಾಗಿ ’ಇಂಡಿಯಾ ಗೇಟ್’ ಕ್ಲಿಕ್ ಮಾಡಿ 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಇಂಟರ್ನೆಟ್ ಇಲ್ಲದೆಯೂ UPI ಪಾವತಿ ಮಾಡಬಹುದು, *99# ಮೂಲಕ ಹಣ ಕಳುಹಿಸುವುದು ಹೇಗೆ?
ಸಿಎಂ, ಡಿಸಿಎಂ ನಡುವೆ ಬೂದಿ ಮುಚ್ಚಿದ ಕೆಂಡದ ಪರಿಸ್ಥಿತಿ: ಸಂಸದ ಜಗದೀಶ್ ಶೆಟ್ಟರ್