ಕಾರ್ಯಕ್ರಮದ ವೇಳೆ ಉರುಳಿದ ವೇದಿಕೆ : ಮೂವರು ಬಿಜೆಪಿ ಶಾಸಕರಿಗೆ ಗಾಯ

Published : Jun 12, 2019, 01:39 PM IST
ಕಾರ್ಯಕ್ರಮದ ವೇಳೆ ಉರುಳಿದ ವೇದಿಕೆ : ಮೂವರು ಬಿಜೆಪಿ  ಶಾಸಕರಿಗೆ ಗಾಯ

ಸಾರಾಂಶ

ಬಿಜೆಪಿ ಕಾರ್ಯಕ್ರಮವೊಂದರ ವೇಳೆ ವೇದಿಕೆ ಕುಸಿದು ಬಿದ್ದಿದ್ದು ಈ ವೇಳೆ ಮೂವರು ಬಿಜೆಪಿ ಶಾಸಕರು ಗಾಯಗೊಂಡ ಘಟನೆ ನಡೆದಿದೆ. 

ಭೋಪಾಲ್ : ಮಧ್ಯ ಪ್ರದೇಶದ ನಡೆಯುತ್ತಿದ್ದ ಬಿಜೆಪಿ ರೈತ ಸಮಾವೇಶದ ವೇಳೆ ವೇದಿಕೆ ಕುಸಿದು ಬಿದ್ದು ಮೂವರು ಬಿಜೆಪಿ ಶಾಸಕರು ಹಾಗೂ 10ಕ್ಕೂ ಎಚ್ಚು ಮಂದಿ ಗಾಯಗೊಂಡಿದ್ದಾರೆ. 

ರಾಜ್ ಮೊಹಲ್ಲಾ ಪ್ರದೇಶದಲ್ಲಿ ನಡೆಯುತ್ತಿದ್ದ ಕಿಸಾನ್ ಆಕ್ರೋಶ್ ಸಮಾವೇಶದಲ್ಲಿ ಇದ್ದಕ್ಕಿದ್ದಂತೆ ವೇದಿಕೆ ಕುಸಿದು ಬಿದ್ದಿದೆ. ಹೆಚ್ಚು ಸಂಖ್ಯೆಯಲ್ಲಿ ಜನರು ವೇದಿಕೆ ಏರಿದ್ದರಿಂದ ಈ ಘಟನೆ ಸಂಭವಿಸಿದೆ. 

60 ಕ್ಕೂ ಹೆಚ್ಚು ಜನ ಏಕಾಏಕಿ ವೇದಿಕೆ ಏರಿದ್ದು, ಈ ವೇಳೆ ವೇದಿಕೆ ಕುಸಿದುಬಿದ್ದು ಬಿಜೆಪಿ ನಾಯಕರು ಗಾಯಗೊಂಡಿದ್ದಾರೆ. ಬಿಜೆಪಿ ಶಾಸಕರಾದ ಮಹೇಂದ್ರ ಹರ್ದಿಯಾ, ಉಷಾ ಠಾಕೂರ್, ಮಾಲಿನಿ ಗೌಡ ಗಾಯಗೊಂಡಿದ್ದು ತಕ್ಷಣವೇ ಸ್ಥಳಕ್ಕೆ ಆ್ಯಂಬುಲೆನ್ಸ್ ಕರೆಸಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. 

ಮಹಾಜನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಯಾರಿಗೂ ಕೂಡ ಗಂಭೀರ ಗಾಯಗಳಾಗಿಲ್ಲ ಎಂದು ಇಲ್ಲಿ ಬಿಜೆಪಿ ನಾಯಕ ದೇವಕಿನಂದನ್ ತಿವಾರಿ ಹೇಳಿದರು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Karnataka News Live: ಪ್ರೀತಿಯಿಂದ ಊಟಕ್ಕೆ ಕರೀತಾರೆ ಬೇಡ ಅನ್ನೋಕಾಗುತ್ತಾ: DCM ಡಿಕೆ ಶಿವಕುಮಾರ್
ಪಿಎಂ ಫಸಲ್ ಬಿಮಾ ಯೋಜನೆ ದೊಡ್ಡ ಗೋಲ್‌ಮಾಲ್‌: ಸಚಿವ ಈಶ್ವರ್ ಖಂಡ್ರೆ ಗಂಭೀರ ಆರೋಪ