
ಬೆಂಗಳೂರು(ಜ.18): ಲಾಲ್'ಭಾಗ್'ನ ಕೆಲವು ಕಡೆಗಳಲ್ಲಿ ಇನ್ಮುಂದೆ ಸೆಲ್ಫಿ ತೆಗೆಯುವುದನ್ನು ನಿಷೇಧಿಸಲಾಗಿದೆ. ಇತ್ತೀಚೆಗೆ ಸೆಲ್ಫೀ ತೆಗೆದುಕೊಳ್ಳುವ ಭರದಲ್ಲಿ ವಿಕ್ರಂ ಎಂಬ ಬಾಲಕನೊಬ್ಬ ಕಲ್ಲು ಕಂಬದ ಕೆಳಗೆ ಬಿದ್ದು ಅಸು ನೀಗಿದ್ದ. ಈ ದುರಂತದ ಬಳಿಕ ಎಚ್ಚೆತ್ತ ಆಡಳಿತ ಮಂಡಳಿ ಕೊನೆಗೂ ಇಂತಹುದೊಂದು ದಿಟ್ಟ ಕ್ರಮವನ್ನು ಜಾರಿಗೊಳಿಸಿದೆ.
ಲಾಲ್ ಬಾಗ್'ನ ಇಳಿಜಾರು ಪ್ರದೇಶ, ಕೆರೆದಂಡೆ ಸೇರಿದಂತೆ ಒಟ್ಟು 15 ಕಡೆಗಳಲ್ಲಿ ಸೆಲ್ಫೀ ತೆಗೆಯದಂತೆ ಇಲ್ಲಿನ ಆಡಳಿತ ಮಂಡಳಿ ನಿಷೇಧ ಹೇರಿದೆ. ಇನ್ನು ಜನವರಿ 20ರಿಂದ ಇಲ್ಲಿ ಫ್ಲವರ್ ಶೋ ಆರಂಭವಾಗೊಳ್ಳಲಿದೆ. ಈ ಸಂದರ್ಭದಲ್ಲಿ ಜನಸ್ತೋಮವೇ ಇಲ್ಲಿ ಹರಿದು ಬರುವ ಕಾರಣದಿಂದ ಆಡಳಿತ ಮಂಡಳಿ ಮುಂಜಾಗೃತಾ ಕ್ರಮವಾಗಿ ಈ ನಿರ್ಧಾರ ಕೈಗೊಂಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.