
ಬೀಜಿಂಗ್[ಜು.15]: ಮುಂದಿನ ದಲೈ ಲಾಮಾ ಅವರ ನೇಮಕ ಪ್ರಕ್ರಿಯೆ ಚೀನಾ ದೇಶದ ಒಳಗಡೆ ನಡೆಯಬೇಕು. ಈ ವಿಚಾರದಲ್ಲಿ ಭಾರತ ಮೂಗು ತೂರಿಸಿದಲ್ಲಿ ಇದು ಎರಡೂ ದೇಶಗಳ ಮಧ್ಯದ ದ್ವಿಪಕ್ಷೀಯ ಮಾತುಕತೆ ಮತ್ತು ಬಾಂಧವ್ಯಕ್ಕೆ ಧಕ್ಕೆ ತರಲಿದೆ ಎಂದು ಚೀನಾ ಎಚ್ಚರಿಸಿದೆ.
ದಲೈ ಲಾಮಾ ಅವರ ನೇಮಕ ಪ್ರಕ್ರಿಯೆ ಧರ್ಮ ಸೂಕ್ಷ್ಮವಾದ ವಿಷಯವಾಗಿದ್ದು, ಅದಕ್ಕೆ ಚೀನಾ ಸರ್ಕಾರಿ ಅಧಿಕೃತ ಮುದ್ರೆ ಅಗತ್ಯ, ಈ ಕುರಿತು ಪಂಡಿತರು, ತಜ್ಞರು ಹಾಗೂ ಅಧಿಕಾರಿಗಳು ಅನುಮೋದನೆ ಕಡ್ಡಾಯವಾಗಿದೆ.
ಅಲ್ಲದೇ ಚೀನಾ ಸರ್ಕಾರ ಇದಕ್ಕಾಗಿ ಸುಮಾರು 200 ವರ್ಷಗಳಷ್ಟುಹಳೆಯದಾದ ಪ್ರಾಚೀನ ಪರಂಪರೆಯನ್ನು ಪಾಲಿಸಿಕೊಂಡು ಬಂದಿದೆ. ಇದು ಯಾರದೇ ವೈಯಕ್ತಿಕವಾದ ಅಥವಾ ಸಂಘಟನೆಯ ತೀರ್ಮಾನ ಅಥವಾ ಯಾವುದೇ ದೇಶದ ತೀರ್ಮಾನದಿಂದ ಆಗುವಂತದ್ದಲ್ಲ. ಪ್ರಸ್ತುತ ದಲೈ ಲಾಮಾ ಅವರ ಉತ್ತರಾಧಿಕಾರಿ ನೇಮಕ ಅವರ ವೈಯಕ್ತಿಕವಲ್ಲ ಎಂದು ತಿಳಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.