
ಬಾಗಲಕೋಟೆ (ಫೆ.26): ಇಂದು ಬಾಗಲಕೋಟೆಯಲ್ಲಿ ನಡೆಯವ ರಾಹುಲ್ ಗಾಂಧಿಗೆ ಸಮಾವೇಶಕ್ಕೆ ಭಾಗವಹಿಸಲು ಸಚಿವ ತಿಮ್ಮಾಪೂರ ಬಂದಿದ್ದರು. ಆದರೆ ಭದ್ರತಾ ಸಿಬ್ಬಂದಿ ಅವರನ್ನು ಒಳಗೆ ಬಿಡಲೇ ಇಲ್ಲ.
ಜಿಲ್ಲೆಯ ನವನಗರದಲ್ಲಿ ನಡೆಯೋ ರಾಹುಲ್ ಗಾಂಧಿ ಸಮಾವೇಶಕ್ಕೆ ಜಿಲ್ಲಾ ಉಸ್ತುವಾರಿ ಸಚಿವರನ್ನೇ ಭದ್ರತಾ ಸಿಬ್ಬಂದಿ ಒಳ ಬಿಟ್ಟಿಲ್ಲ. ಗಣ್ಯರ ಪಟ್ಟಿಯಲ್ಲಿ ಸಚಿವರ ಹೆಸರಿಲ್ಲದ್ದಕ್ಕೆ ಎಸ್.ಪಿ.ಜಿ ಭದ್ರತಾ ತಂಡ ತಿಮ್ಮಾಪುರ ಅವರನ್ನು ಒಳ ಬಿಡಲು ನಿರಾಕರಿಸಿದ್ದಾರೆ. ಇದರಿಂದ ಜಿಲ್ಲಾ ಉಸ್ತುವಾರಿ ಸಚಿವರು ಮುಜುಗರಕ್ಕೀಡಾಗಿದ್ದಾರೆ. ಕಾಂಗ್ರೆಸ್ ಕಾಯ೯ಕತ೯ರು ಸಮಾಜಾಯಿಷಿ ನೀಡಿ ಇವರು ಜಿಲ್ಲಾ ಉಸ್ತುವಾರಿ ಸಚಿವರೆಂದು ತಿಳಿ ಹೇಳಿದಾಗ ಒಳಗೆ ಬಿಟ್ಟಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.