ಮತ್ತೊಂದು ವಿವಾದದ ಸುಳಿಯಲ್ಲಿ ನವದೆಹಲಿಯ ಜೆಎನ್ಯು ವಿವಿ: ರಾವಣನ ಪ್ರತಿಕೃತಿಗೆ ಮೋದಿ ಭಾವಚಿತ್ರ ಅಂಟಿಸಿ ದಹಿಸಿದ ವಿದ್ಯಾರ್ಥಿಗಳು

Published : Oct 12, 2016, 06:57 PM ISTUpdated : Apr 11, 2018, 12:49 PM IST
ಮತ್ತೊಂದು ವಿವಾದದ ಸುಳಿಯಲ್ಲಿ ನವದೆಹಲಿಯ ಜೆಎನ್ಯು ವಿವಿ: ರಾವಣನ ಪ್ರತಿಕೃತಿಗೆ ಮೋದಿ ಭಾವಚಿತ್ರ ಅಂಟಿಸಿ ದಹಿಸಿದ ವಿದ್ಯಾರ್ಥಿಗಳು

ಸಾರಾಂಶ

ದೇಶದಾದ್ಯಂತ ನವರಾತ್ರಿ ಅಂಗವಾಗಿ ಪಾಕ್‌ ಪ್ರಧಾನಿ ನವಾಜ್‌ ಷರೀಫ್ ಹಾಗೂ ಉಗ್ರರನ್ನು ಆಧುನಿಕ ರಾವಣರೆಂದು ಅನೇಕರು ದಹಿಸಿದರೆ, ವಿವಾದಾತ್ಮಕ ಜವಾಹರಲಾಲ್‌ ನೆಹರು ವಿವಿಯಲ್ಲಿ (ಜೆಎನ್‌ಯು) ಕಾಂಗ್ರೆಸ್‌ ಪ್ರಾಯೋಜಿತ ಎನ್‌ಎಸ್‌ಯುಐ ಸಂಘಟನೆಯ ವಿದ್ಯಾರ್ಥಿಗಳು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಪ್ರತಿಕೃತಿ ದಹಿಸಿ ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ರಾವಣನ ಪ್ರತಿಕೃತಿ ನಿರ್ಮಾಣ ಮಾಡಿ, ಮೋದಿಯನ್ನು ರಾವನಂತೆ ಬಿಂಬಿಸಿ ಪ್ರತಿಕೃತಿ ಸುಟ್ಟಿದ್ದಾರೆ. ಮೋದಿಯಷ್ಟೇ ಅಲ್ಲದೆ, ಯೋಗ ಗುರು ರಾಮ್‌ದೇವ್, ಸಾಧ್ವಿ ಪ್ರಜ್ಞಾ, ನಾಥೂರಾಮ್ ಗೋಡ್ಸೆ, ಅಸಾರಾಮ್ ಬಾಪು ಮತ್ತು ಜೆಎನ್‌ಯು  ಉಪಕುಲಪತಿ ಜಗದೀಶ್‌  ಕುಮಾರ್ ಅವರ ಭಾವಚಿತ್ರಗಳನ್ನು ರಾವಣನ ಹತ್ತು ತಲೆಗಳಂತೆ ಬಿಂಬಿಸಿ ಘೋಷಣೆಗಳನ್ನು ಕೂಗಿ ಪ್ರತಿಕೃತಿಯನ್ನು ದಹಿಸಲಾಗಿದೆ.

ನವದೆಹಲಿ(ಅ.13): ದೇಶದಾದ್ಯಂತ ನವರಾತ್ರಿ ಅಂಗವಾಗಿ ಪಾಕ್‌ ಪ್ರಧಾನಿ ನವಾಜ್‌ ಷರೀಫ್ ಹಾಗೂ ಉಗ್ರರನ್ನು ಆಧುನಿಕ ರಾವಣರೆಂದು ಅನೇಕರು ದಹಿಸಿದರೆ, ವಿವಾದಾತ್ಮಕ ಜವಾಹರಲಾಲ್‌ ನೆಹರು ವಿವಿಯಲ್ಲಿ (ಜೆಎನ್‌ಯು) ಕಾಂಗ್ರೆಸ್‌ ಪ್ರಾಯೋಜಿತ ಎನ್‌ಎಸ್‌ಯುಐ ಸಂಘಟನೆಯ ವಿದ್ಯಾರ್ಥಿಗಳು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಪ್ರತಿಕೃತಿ ದಹಿಸಿ ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ರಾವಣನ ಪ್ರತಿಕೃತಿ ನಿರ್ಮಾಣ ಮಾಡಿ, ಮೋದಿಯನ್ನು ರಾವನಂತೆ ಬಿಂಬಿಸಿ ಪ್ರತಿಕೃತಿ ಸುಟ್ಟಿದ್ದಾರೆ. ಮೋದಿಯಷ್ಟೇ ಅಲ್ಲದೆ, ಯೋಗ ಗುರು ರಾಮ್‌ದೇವ್, ಸಾಧ್ವಿ ಪ್ರಜ್ಞಾ, ನಾಥೂರಾಮ್ ಗೋಡ್ಸೆ, ಅಸಾರಾಮ್ ಬಾಪು ಮತ್ತು ಜೆಎನ್‌ಯು  ಉಪಕುಲಪತಿ ಜಗದೀಶ್‌  ಕುಮಾರ್ ಅವರ ಭಾವಚಿತ್ರಗಳನ್ನು ರಾವಣನ ಹತ್ತು ತಲೆಗಳಂತೆ ಬಿಂಬಿಸಿ ಘೋಷಣೆಗಳನ್ನು ಕೂಗಿ ಪ್ರತಿಕೃತಿಯನ್ನು ದಹಿಸಲಾಗಿದೆ.

ಈ ರೀತಿ ಮಾಡಲು ವಿದ್ಯಾರ್ಥಿಗಳು ಅನುಮತಿ ಪಡೆದಿದ್ದರೆ ಎಂದು ಜೆಎನ್‌ಯು ಅಧಿಕಾರಿಗಳನ್ನು ಮಾಧ್ಯಮಗಳು ಪ್ರಶ್ನಿಸಿದಾಗ ಯಾವುದೇ ಪ್ರತಿಕ್ರಿಯೆ ನೀಡಲು ಮುಂದಾಗಿಲ್ಲ.

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗೃಹಸಚಿವರು ಏನು ಬೇಕಾದ್ರೂ ಮಾಡಬಹುದು, ಅವರ ಕಣ್ಣುಗಳನ್ನು ನೋಡಿದರೆ ನನಗೆ ಭಯವಾಗುತ್ತೆ: ಮಮತಾ ಬ್ಯಾನರ್ಜಿ
ಅಣ್ಣಾ ಹಜಾರೆ ಮತ್ತೆ ಉಪವಾಸ ಸತ್ಯಾಗ್ರಹ ಘೋಷಣೆ: ಸ್ಥಳ, ದಿನಾಂಕ ನಿಗದಿ, ಕಾರಣವೇನು ಗೊತ್ತಾ?