ನಡೆದಾಡುವ ದೇವರು ಸಿದ್ಧಗಂಗಾ ಶ್ರೀಗಳ ಶತಾಯುಷ್ಯದ ಗುಟ್ಟೇನು?

Published : Jan 21, 2019, 04:52 PM IST
ನಡೆದಾಡುವ ದೇವರು ಸಿದ್ಧಗಂಗಾ ಶ್ರೀಗಳ ಶತಾಯುಷ್ಯದ ಗುಟ್ಟೇನು?

ಸಾರಾಂಶ

ನಡೆದಾಡುವ ದೇವರು ಸ್ವರ್ಗಸ್ಥ | ಶಿವನ ಸೇವೆಗೆ ಹೊರಟ ಶತಮಾನದ ಸಂತ | ಶ್ರೀಗಳ ಶತಾಯುಷ್ಯದ ಗುಟ್ಟೇನು? ಹೇಗಿತ್ತು ಇವರ ದಿನಚರಿ ಇಲ್ಲಿದೆ ನೋಡಿ. 

ತುಮಕೂರು (ಜ. 21): ಯುಗ ಪುರುಷ, ಲೋಕಜಂಗಮ ಯೋಗಿ ಸಿದ್ಧಗಂಗಾ ಶ್ರೀಗಳು ಶಿವನ ಕಡೆ ನಡಿಗೆ ಬೆಳೆಸಿದ್ದಾರೆ. 111 ವರ್ಷಗಳ ಸಾರ್ಥಕ ಜೀವನ ನಡೆಸಿದರು ಶ್ರೀಗಳು. ಇವರ ಬದುಕೇ ಒಂದು ಆದರ್ಶ. ಆಧ್ಯಾತ್ಮದ ಮೇರು ಪರ್ವತವಾಗಿ ಬದುಕಿದವರು. ತ್ರಿವಿಧ ದಾಸೋಹಿಯಾಗಿ ಲೋಕಸೇವೆ ಮಾಡಿದವರು. 

ಶಿವಣ್ಣ-ಶಿವೈಕ್ಯರಾಗೋ ತನಕ: ನಡೆದಾಡುವ ದೇವರ ಜೀವನಗಾಥೆ...

ಶತಾಯುಷದ ಗುಟ್ಟೇನು?

ಶ್ರೀಗಳು ದಿನಕ್ಕೆ 3 ಬಾರಿ ಸ್ನಾನ ಮಾಡುತ್ತಿದ್ದರು. ತಮ್ಮ ಕೆಲಸವನ್ನು ತಾವೇ ಮಾಡಿಕೊಳ್ಳುತ್ತಿದ್ದರು. ಶ್ರೀಗಳ ಚೈತನ್ಯಕ್ಕೆ, ಉತ್ಸಾಹಕ್ಕೆ ಕಾರಣವಾಗಿದ್ದುದು ಅವರ ದಿನಚರಿಯ ಆರಂಭದ ನೀರು. ಮಠದ ಆವರಣದಲ್ಲಿರುವ ಬಾವಿಯ ನೀರನ್ನು ಕುದಿಸಿ ಆರಿಸಿ ಕುಡಿಯುತ್ತಿದ್ದರು. ಇದೂ ಕೂಡಾ ಶತಾಯುಷ್ಯದ ಗುಟ್ಟು ಎನ್ನಲಾಗುತ್ತದೆ. 

ಎಲ್ಲವೂ ಶಿವಲೀಲೆ! ಶಿವಣ್ಣರಾಗಿದ್ದವರು ಸಿದ್ಧಗಂಗಾ ಶ್ರೀಗಳಾಗಿದ್ದೇ ಪವಾಡ

ಶ್ರೀಗಳು ಸರಳವಾದ ಆಹಾರವನ್ನು ಸೇವಿಸುತ್ತಿದ್ದರು.  ಬೇಳೆ ಸಾರೆಂದರೆ ಬಹಳ ಇಷ್ಟ.  ಆಹಾರದಲ್ಲಿ ಹಿತ,ಮಿತ ವ್ರತವನ್ನು ಪಾಲಿಸಿದವರು. ಇವರು ಸೇವಿಸುವ ಆಹಾರದಲ್ಲಿ ಸಮುದ್ರದ ಉಪ್ಪನ್ನು ಬಳಸುತ್ತಿರಲಿಲ್ಲ. ಬದಲಾಗಿ ಸೈಂಧವ ಲವಣವನ್ನು ಬಳಸುತ್ತಿದ್ದರು. ಇದು ಆರೋಗ್ಯಕ್ಕೆ ಒಳ್ಳೆಯದು. ಇನ್ನೂ ಒಂದು ಅಚ್ಚರಿ ಎಂದರೆ ಇವರ ಪೂರ್ವಾಶ್ರಮದ ಸಹೋದರ, ಸಹೋದರಿಯರೆಲ್ಲರೂ 90 ವರ್ಷದ ಮೇಲೆ ಬದುಕಿ ಬಾಳಿದವರು. ಅನುವಂಶೀಯತೆಯೂ ಒಂದು ಕಾರಣ ಎನ್ನುತ್ತದೆ ವಿಜ್ಞಾನ. 

ಶತಮಾನದ ಸಂತ ಸಿದ್ಧಗಂಗಾ ಶ್ರೀಗಳ ನೆನಪು-ಮೆಲುಕು

ಇನ್ನು ಶ್ರೀಗಳು ಬೇವಿನ ಕಷಾಯವನ್ನು ಬಳಸುತ್ತಿದ್ದರು.  ಇದಕ್ಕೆ ಹಸುವಿನ ಹಾಲನ್ನು ಬಳಸಲಾಗುತ್ತದೆ. ಪ್ರತಿದಿನ ತಪ್ಪದೇ ಯೋಗ, ಪ್ರಾಣಾಯಾಮ ಮಾಡುತ್ತಿದ್ದರು. ದಿನಕ್ಕೆ ಅರ್ಧ ತಾಸಾದರೂ ಓದುತ್ತಿದ್ದರು. ಆರೋಗ್ಯಯುತವಾದ ಜೀವನ ಶೈಲಿಯನ್ನು ರೂಢಿಸಿಕೊಂಡು ಶತಾಯುಷವನ್ನು ಪೂರೈಸಿದ್ದಾರೆ ಶ್ರೀಗಳು.  

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಾರಿಗೆ ಇಲಾಖೆಗೆ ನಕಲಿ ವ್ಯಾಸಂಗ ಪತ್ರ ದಾಖಲೆ ನೀಡಿದರೆ ತನಿಖೆ: ಸಚಿವ ರಾಮಲಿಂಗಾರೆಡ್ಡಿ
ಡಿವೈಡರ್‌ನಿಂದ ಹಾರಿ KSRTC ಬಸ್‌ಗೆ ಡಿಕ್ಕಿಯಾದ ಕಾರ್, ಮೂರು ಸಾವು ಚೆಲ್ಲಾಪಿಲ್ಲಿಯಾದ ಮೃತದೇಹಗಳು