
ನವದೆಹಲಿ (ಏ.21): ಸಹಾರಾ ಕಂಪನಿ ಮುಖ್ಯಸ್ಥ ಸುಬ್ರತಾ ರಾಯ್ ಮೇಲಿರುವ ಜಾಮೀನುರಹಿತ ವಾರಂಟನ್ನು ಸೆಬಿ ನ್ಯಾಯಾಲಯ ತೆಗೆದು ಹಾಕಿದೆ. ಸುಬ್ರತಾ ರಾಯ್ ವಿಚಾರಣೆ ಇರುವ ದಿನಗಳಲ್ಲಿ ತಪ್ಪದೇ ನ್ಯಾಯಾಲಯದ ಮುಂದೆ ಹಾಜರಾಗಬೇಕು ಎನ್ನುವ ಶರತ್ತಿನೊಂದಿಗೆ ಕೋರ್ಟ್ ವಾರಂಟನ್ನು ರದ್ದುಗೊಳಿಸಿದೆ.
ಹೂಡಿಕೆದಾರರಿಗೆ ನೀಡಬೇಕಾಗಿರುವ ರೂ.47 ಸಾವಿರ ಕೋಟಿ ಡಿಪಾಸಿಟ್ ನ್ನು ಸೆಬಿಗೆ ನೀಡಿ ಎಂದು ಸುಪ್ರೀಂಕೋರ್ಟ್ 2012 ರಲ್ಲಿ ಸಹಾರಾ ಕಂಪನಿಗೆ ಆದೇಶಿಸಿತ್ತು. ಹೂಡಿಕೆದಾರರ ಅಷ್ಟೂ ಹಣವನ್ನು ಮರುಪಾವತಿ ಮಾಡುವಲ್ಲಿ ವಿಫಲವಾಗಿದ್ದು ಕೇವಲ 11 ಸಾವಿರ ಕೋಟಿಯನ್ನು ಮಾತ್ರ ಪಾವತಿಸಿತ್ತು, ಹಾಗಾಗಿ ಪುಣೆಯಲ್ಲಿರುವ ಆ್ಯಂವಿ ವ್ಯಾಲಿಯನ್ನು ಹರಾಜು ಹಾಕಲು ಸುಪ್ರೀಂಕೋರ್ಟ್ ಕಳೆದ ವಾರ ಆದೇಶಿಸಿತ್ತು.
ಮೇ. 18 ರಂದು ಮುಂದಿನ ವಿಚಾರಣೆ ನಡೆಯಲಿದೆ ಎಂದು ಕೋರ್ಟ್ ಹೇಳಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.