
ಲಡಾಖ್(ಆ.16): ಸಿಕ್ಕಿಂ ಬಳಿಯ ಡೋಕ್ಲಾಮ್ ಪ್ರದೇಶದ ಒಡೆತನಕ್ಕಾಗಿ ಭಾರತ ಮತ್ತು ಚೀನಾ ಸೈನಿಕರ ನಡುವೆ ‘ಸಂಘರ್ಷ’ ನಡೆಯತ್ತಿರುವಾಗಲೇ, ಇತ್ತ ಲಡಾಖ್ನಲ್ಲೂ ಭಾರತೀಯ ಹಾಗೂ ಚೀನೀ ಪಡೆಗಳು ಸಣ್ಣ ಪ್ರಮಾಣದಲ್ಲಿ ಕಾದಾಡಿಕೊಂಡಿವೆ.
ಭಾರತದೊಳಗೆ ಪ್ರವೇಶಿಸಲು ಚೀನಾ ಯೋಧರು ಯತ್ನಿಸಿದ್ದು, ಇವರನ್ನು ಹಿಮ್ಮೆಟ್ಟಿಸುವಲ್ಲಿ ‘ಭಾರತದ ಪಡೆಗಳು ಯಶಸ್ವುಯಾಗಿವೆ. ಗಡಿರೇಖೆ (ಎಲ್ಎಸಿ) ದಾಟಿ ಬರಲು ಚೀನಾ ಪಡೆಗಳು ಯತ್ನಿಸಿದವು. ಈ ವೇಳೆ ಉಭಯ ಸೈನಿಕರ ಮಧ್ಯೆ ಕಲ್ಲು ತೂರಾಟವೂ ನಡೆಯಿತು.
30 ನಿಮಿಷಗಳ ಸಂಘರ್ಷದ ಬಳಿಕ ಚೀನೀ ಸೈನಿಕರನ್ನು ಹಿಮ್ಮೆಟ್ಟಿಸುವಲ್ಲಿ ಭಾರತದ ಯೋಧರು ಯಶಸ್ವಿಯಾದರು ಎಂದು ಗೊತ್ತಾಗಿದೆ. ಆದರೆ ಘಟನೆ ವೇಳೆ ಉಭಯ ಪಡೆಗಳ ಯೋಧರು ಗಾಯಗೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.