
ಬೆಳಗಾವಿ(ಡಿ.3): ಈ ಶಾಲಾ ಮಕ್ಕಳ ಸ್ಥಿತಿ ಕಂಡರೇ ಸರಕಾರಕ್ಕೂ ನಾಚಿಕೆಯಾಗುವಂತಿದೆ. ಕಳೆದ 2 ವರ್ಷಗಳಿಂದ ಬೆಳಗಾವಿಯ ಜಿಲ್ಲೆ ಅಥಣಿ ತಾಲೂಕಿನ ಶಿವನೂರು ಗ್ರಾಮದ ಶಾಲೆಯ ಮಕ್ಕಳು ಬಿಸಿಲು, ಮಳೆ ಎನ್ನದೇ ಬಯಲಲ್ಲೇ ಕುಳಿತು ಪಾಠವನ್ನು ಕೇಳುವ ಪರಿಸ್ಥಿತಿ ಇದೆ. ಶಾಲೆಯ ಕಟ್ಟಡ ಸಂಪೂರ್ಣ ಶಿಥಿಲವಾಗಿದ್ದು, ಗೋಡೆಗಳು ಬಿದ್ದು ಹೋಗಿವೆ.
ರಾಜ್ಯದ ಗಡಿ ಪ್ರದೇಶದಲ್ಲಿ ರುವ ಈ ಗ್ರಾಮದ ಶಾಲೆಯ ಕಟ್ಟಡದ ಎಲ್ಲಾ ಗೋಡೆಗಳೂ ಕೂಡ ಬಿದ್ದು ಹೋಗಿವೆ. ಇನ್ನು ಕೆಲವು ಗೋಡೆಗಳು ಆಗಲೋ ಈಗಲೋ ಎನ್ನುವಂತಹ ಸ್ಥಿತಿಯಲ್ಲಿವೆ. ಇಂತಹ ಸ್ಥಿತಿಯಲ್ಲಿಯೇ ಗ್ರಾಮದ ಮಕ್ಕಳಲ್ಲಿ ಶಿಕ್ಷಣವನ್ನು ಪೂರೈಸುವ ಚಲವಿದ್ದು, ಬಯಲಲ್ಲಿ ಕುಳಿತೇ ಪಾಠ ಕೇಳುತ್ತಾರೆ. ಇನ್ನೂ ಜೋರಾಗಿ ಮಳೆ ಬಂದರಂತೂ ಶಾಲೆಗೆ ರಜೆ ಘೋಷಿಸಲಾಗುತ್ತದೆ.
ಶಾಲೆಯ ಇಂತಹ ಸಮಸ್ಯೆಯ ಬಗ್ಗೆ ಇಲ್ಲಿನ ಶಿಕ್ಷಕರು ಹಿರಿಯ ಅಧಿಕಾರಿಗಳನ್ನು ಅನೇಕ ಬಾರಿ ಸಂಪರ್ಕಿಸಿದರೂ ಕೂಡ ಯಾವುದೇ ರೀತಿಯಾದ ಪ್ರಯೋಜನವಾಗಿಲ್ಲ. ಆದ್ದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬಗ್ಗೆ ಗಮನಹರಿಸಿ ಮಕ್ಕಳ ಸಮಸ್ಯೆಯನ್ನು ನಿವಾರಿಸಿ ಶಾಲೆಯ ಕಟ್ಟಡವನ್ನು ರಿಪೇರಿ ಮಾಡಿಸಲು ಸಹಕಾರ ನೀಡಬೇಕು ಎಂದು ಈ ಶಾಲೆಯ ಮಕ್ಕಳು ಮನವಿ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.