
ಬೀದರ್(ಡಿ.3): ಬೀದರ್ ಜಿಲ್ಲಾಸ್ಪತ್ರೆಯ ಮತ್ತೊಂದು ಕರ್ಮಕಾಂಡ ಈಗ ಬಯಲಾಗಿದೆ. ಮೊಟ್ಟೆ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಬಾಣಂತಿಯರಿಗೆ ಮೊಟ್ಟೆ ನೀಡುವುದನ್ನ ಸ್ಥಗಿತಗೊಳಿಸಿದ್ದಾರೆ.
ಈ ಬಗ್ಗೆ ಆಸ್ಪತ್ರೆ ಸಿಬ್ಬಂದಿಯನ್ನ ವಿಚಾರಿಸಿದಾಗ, ಬೆಳಗ್ಗೆಯೇ ಮೊಟ್ಟೆಯನ್ನು ನೀಡಿದ್ದೇವೆ ಎಂದು ಹೇಳುತ್ತಾರೆ. ಆದರೆ ವಾರ್ಡ್ ಕಡೆ ಮುಖ ಮಾಡಿದಾಗ, ಸತ್ಯ ಬಯಲಾಗಿದೆ. 2 ದಿನಗಳಿಂದ ಮೊಟ್ಟೆ ನೀಡುವವರೇ ಬರುತ್ತಿಲ್ಲ. ಬ್ರೆಡ್, ಹಾಲು, ಬಾಳೆ ಹಣ್ಣನ್ನು ಮಾತ್ರ ನೀಡುತ್ತಿದ್ದಾರೆಂದು ಹೇಳುತ್ತಾರೆ ಇಲ್ಲಿರುವ ತಾಯಂದಿರು.
ಇದಿಷ್ಟೆ ಅಲ್ಲ ಒಳ ರೋಗಿಗಳಿಗೆ ಸರ್ಕಾರದಿಂದ ನೀಡುವ ಊಟ ನೋಡಿದರೆ ಪ್ರಾಣಿಗಳೂ ಕೂಡ ತಿನ್ನದಷ್ಟು ಕಳಪೆಯಾಗಿದೆ. ನೀರಿನಲ್ಲಿ ಸ್ವಲ್ಪ ಉಪ್ಪು, ಖಾರ ಬಿಟ್ಟರೆ ಸಾಂಬಾರ್ನಲ್ಲಿ ಏನೂ ಇರುವುದಿಲ್ಲ. ಉಪ್ಪಿನ ಡಬ್ಬಿಯಲ್ಲಿ ಉಪ್ಪು ಕೂಡ ಇಲ್ಲದಂಥ ಸ್ಥಿತಿ ಜಿಲ್ಲಾಸ್ಪತ್ರೆಯಲ್ಲಿ ನಿರ್ಮಾಣವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.