ಥಿಯೇಟರ್'ಗಳಲ್ಲಿ ಸಿನಿಮಾ ಪ್ರದರ್ಶನಕ್ಕೆ ಮುನ್ನ ರಾಷ್ಟ್ರಗೀತೆ ಪ್ರಸಾರ ಕಡ್ಡಾಯ: ಸುಪ್ರೀಂ

Published : Nov 30, 2016, 07:10 AM ISTUpdated : Apr 11, 2018, 12:58 PM IST
ಥಿಯೇಟರ್'ಗಳಲ್ಲಿ ಸಿನಿಮಾ ಪ್ರದರ್ಶನಕ್ಕೆ ಮುನ್ನ ರಾಷ್ಟ್ರಗೀತೆ ಪ್ರಸಾರ ಕಡ್ಡಾಯ: ಸುಪ್ರೀಂ

ಸಾರಾಂಶ

ರಾಷ್ಟ್ರಗೀತೆ ಪ್ರಸಾರದಿಂದ ಜನರು ಗೌರವ ತೋರಿಸಲು ಆರಂಭಿಸಿದರೆ, ದೇಶಭಕ್ತಿಯ ಭಾವನೆ ಬೆಳೆಸಿದಂತಾಗುತ್ತದೆ ಎಂಬುದು ಸುಪ್ರೀಂ ಅಭಿಪ್ರಾಯ.

ನವದೆಹಲಿ(ನ. 30): ಎರಡು ದಶಕಗಳ ಬಳಿಕ ಸಿನಿಮಾ ಮಂದಿರಗಳಲ್ಲಿ ರಾಷ್ಟ್ರಗೀತೆ ಪ್ರದರ್ಶನವನ್ನು ಮತ್ತೆ ಕಾಣಬಹುದಾಗಿದೆ. ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನಕ್ಕೆ ಮುನ್ನ ರಾಷ್ಟ್ರಗೀತೆ ಪ್ರಸಾರ ಕಡ್ಡಾಯ ಎಂದು ಸುಪ್ರೀಂಕೋರ್ಟ್ ಬುಧವಾರ ಆದೇಶಿಸಿದೆ. ರಾಷ್ಟ್ರಗೀತೆ ಪ್ರಸಾರದ ಜೊತೆಗೆ ಪರದೆಯ ಮೇಲೆ ರಾಷ್ಟ್ರಧ್ವಜದ ಪ್ರದರ್ಶನವಾಗಬೇಕು. ಈ ವೇಳೆ ಥಿಯೇಟರ್'ವೊಳಗಿರುವ ಪ್ರತಿಯೊಬ್ಬರೂ ಎದ್ದು ನಿಲ್ಲುವ ಮೂಲಕ ಗೌರವ ಸಲ್ಲಿಸಬೇಕು ಎಂದು ಸರ್ವೋಚ್ಚ ನ್ಯಾಯಾಲಯ ಸೂಚಿಸಿದೆ.

ಕಳೆದ ಶತಮಾನದ 60ರ ದಶಕದಿಂದ 80ರ ದಶಕದವರೆಗೂ ಸಿನಿಮಾ ಮಂದಿರಗಳಲ್ಲಿ ರಾಷ್ಟ್ರಗೀತೆ ಪ್ರದರ್ಶನ ಕಡ್ಡಾಯವಾಗಿತ್ತು. ಆದರೆ, 90ರ ದಶಕದಲ್ಲಿ ಈ ಪದ್ದತಿ ತನ್ನಷ್ಟಕ್ಕೇ ನಿಂತುಹೋಗಿತ್ತು. ಇತ್ತೀಚೆಗೆ, ಭೋಪಾಲ್'ನ ಎನ್'ಜಿಓ ಮಾಲಕ ಶ್ಯಾಮ್ ನಾರಾಯಣ್ ಚೌಸಕಿ ಎಂಬುವರು ರಾಷ್ಟ್ರಗೀತೆಗೆ ಅಗೌರವ ಹೆಚ್ಚುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿ ಸುಪ್ರೀಂಕೋರ್ಟ್'ಗೆ ಮೊರೆ ಹೋಗಿದ್ದರು.

ಈ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಸಿನಿಮಾ ಮಂದಿರಗಳಲ್ಲಿ ರಾಷ್ಟ್ರಗೀತೆ ಪ್ರಸಾರ ಕಡ್ಡಾಯಗೊಳಿಸಿ ತೀರ್ಪು ಹೊರಡಿಸಿದೆ. ರಾಷ್ಟ್ರಗೀತೆ ಪ್ರಸಾರದಿಂದ ಜನರು ಗೌರವ ತೋರಿಸಲು ಆರಂಭಿಸಿದರೆ, ದೇಶಭಕ್ತಿಯ ಭಾವನೆ ಬೆಳೆಸಿದಂತಾಗುತ್ತದೆ ಎಂಬುದು ಸುಪ್ರೀಂ ಅಭಿಪ್ರಾಯ.

ಕೋರ್ಟ್ ಅದೇಶದ ಮುಖ್ಯಾಂಶಗಳು:
* ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನದ ಮುನ್ನ ರಾಷ್ಟ್ರಗೀತೆ ಪ್ರಸಾರ ಕಡ್ಡಾಯ
* ರಾಷ್ಟ್ರಗೀತೆ ಪ್ರಸಾರವಾಗುವಾಗ ಪರದೆ ಮೇಲೆ ರಾಷ್ಟ್ರಧ್ವಜ ಪ್ರದರ್ಶನ ಕಡ್ಡಾಯ
* ರಾಷ್ಟ್ರಗೀತೆ ಪ್ರಸಾರವಾಗುವಾಗ ಚಿತ್ರಮಂದಿರದೊಳಗಿರುವ ಪ್ರತಿಯೊಬ್ಬ ವ್ಯಕ್ತಿಯೂ ಎದ್ದು ನಿಂತು ಗೌರವ ನೀಡಬೇಕು.
* ರಾಷ್ಟ್ರಗೀತೆಗೆ ಗೌರವ ತೋರಿದರೆ ಅದರಿಂದ ದೇಶಭಕ್ತಿಯ ಭಾವನೆಗೆ ಪುಷ್ಟಿ ಸಿಕ್ಕಂತಾಗುತ್ತದೆ
* ರಾಷ್ಟ್ರಗೀತೆಯನ್ನು ವಾಣಿಜ್ಯಾತ್ಮಕವಾಗಿ ಬಳಸಬಾರದು
* ರಾಷ್ಟ್ರಗೀತೆಯನ್ನು ವಿಜೃಂಬಿಸುವ ಅಗತ್ಯವಿಲ್ಲ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗಡೀಪಾರದ ತಾರೀಖ್ ಬಾಂಗ್ಲಾಗೆ ಮರಳಿದ ದಿನವೇ ಮತ್ತೊಬ್ಬ ಹಿಂದೂ ಹತ್ಯೈಗೆದ ಉದ್ರಿಕ್ತರ ಗುಂಪು
ಹೊಸ ವರ್ಷಾಚರಣೆ ಸಮೀಪ ಹಿನ್ನೆಲೆ, ಬೆಂಗಳೂರಲ್ಲಿ ಕಟ್ಟುನಿಟ್ಟಿನ ನಿಗಾ, ಹಿರಿಯ ಪೊಲೀಸ್ ಅಧಿಕಾರಿಗಳ ಬೈಕ್ ರೈಡ್!