ಕಪ್ಪುಹಣ ದಂಧೆಯ ಆರೋಪಿ, ಎಸ್'ಬಿಎಂ ಉದ್ಯೋಗಿ ಆತ್ಮಹತ್ಯೆ

Published : Dec 28, 2016, 12:20 PM ISTUpdated : Apr 11, 2018, 12:57 PM IST
ಕಪ್ಪುಹಣ ದಂಧೆಯ ಆರೋಪಿ, ಎಸ್'ಬಿಎಂ ಉದ್ಯೋಗಿ ಆತ್ಮಹತ್ಯೆ

ಸಾರಾಂಶ

ಸಿಬಿಐನಿಂದ ಎಫ್'ಐಆರ್ ದಾಖಲಾಗುತ್ತಿದ್ದಂತೆಯೇ ರವಿರಾಜ್ ಅವರನ್ನು ಬ್ಯಾಂಕ್ ಅಮಾನತು ಮಾಡಿತ್ತು. ಅಮಾನತು ಪತ್ರ ತಮಗೆ ತಲುಪಿದ ಬಳಿಕ ರವಿರಾಜ್ ಅವರು ನೇಣಿಗೆ ಶರಣಾಗಿದ್ದಾರೆ.

ಬೆಂಗಳೂರು(ಡಿ. 28): ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಬ್ಯಾಂಕ್'ನ ಉದ್ಯೋಗಿ ರವಿರಾಜ್ ಎಂಬುವವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ. ವಿವೇಕನಗರದಲ್ಲಿರುವ ತಮ್ಮ ಮನೆಯಲ್ಲಿ ರವಿರಾಜ್ ನೇಣಿಗೆ ಶರಣಾಗಿದ್ದಾರೆ. ಅವೆನ್ಯೂ ರಸ್ತೆಯ ಬ್ರ್ಯಾಂಚ್'ನ ಎಸ್'ಬಿಎಂ ಬ್ಯಾಂಕ್'ನ ಕ್ಯಾಷಿಯರ್ ಆಗಿದ್ದ ರವಿರಾಜ್ ಅವರ ಹೆಸರು ಕಪ್ಪುಹಣ ದಂಧೆಯಲ್ಲಿ ಕೇಳಿಬಂದಿತ್ತು. ಈ ಸಂಬಂಧ ಅವರನ್ನ ಉದ್ಯೋಗದಿಂದ ಅಮಾನತುಗೊಳಿಸಲಾಗಿತ್ತು. ಇವರ ವಿರುದ್ಧ ಸಿಬಿಐ ಎಫ್'ಐಆರ್ ಕೂಡ ದಾಖಲು ಮಾಡಿದೆ. ಮಲ್ಬರಿ ಎಂಬುವವರಿಗೆ ರವಿರಾಜ್ ಅವರು 20 ಲಕ್ಷ ರೂ ಕಪ್ಪುಹಣವನ್ನು ಬಿಳಿ ಮಾಡಿಕೊಟ್ಟಿದ್ದರೆಂಬ ಆರೋಪ ಇದೆ. ಸಿಬಿಐನಿಂದ ಎಫ್'ಐಆರ್ ದಾಖಲಾಗುತ್ತಿದ್ದಂತೆಯೇ ಬ್ಯಾಂಕ್ ರವಿರಾಜ್ ಅವರನ್ನು ಅಮಾನತು ಮಾಡಿತ್ತು. ಅಮಾನತು ಪತ್ರ ತಮಗೆ ತಲುಪಿದ ಬಳಿಕ ರವಿರಾಜ್ ಅವರು ನೇಣಿಗೆ ಶರಣಾಗಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವಾಟ್ಸಾಪ್ ಬಳಕೆದಾರರೇ ಎಚ್ಚರ: ಈ ಮೂರು ತಪ್ಪುಗಳು ಮಾಡಿದ್ರೆ ಜೈಲು ಪಾಲಾಗೋದು ಫಿಕ್ಸ್!
10 ಸಾವಿರವಲ್ಲ, 1 ಲಕ್ಷ ಕೊಟ್ರೂ ಮುಸ್ಲಿಮರು ನನಗೆ ವೋಟ್‌ ಹಾಕೋದಿಲ್ಲ: ಅಸ್ಸಾಂ ಸಿಎಂ ಹಿಮಾಂತ ಬಿಸ್ವಾ ಶರ್ಮ