ಎಸ್.ಎನ್. ರಮಾಕಾಂತ್, ಶೋಭಾ ರಾಘವನ್ ಮೊದಲಾದ ತಜ್ಞರ ನೇತೃತ್ವದಲ್ಲಿ ತ್ಯಾಜ್ಯ ನಿರ್ವಹಣೆ ಬಗ್ಗೆ ಬ್ಯಾಂಕ್ನ ಸಿಬ್ಬಂದಿಗಳೊಂದಿಗೆ ಸೆಮಿನಾರ್ ನಡೆಸಲಾಯಿತು.
ಕೇಂದ್ರ ಸರ್ಕಾರದ ಕನಸಿನ ಯೋಜನೆ ಸ್ವಚ್ಛ ಭಾರತ ಅಭಿಯಾನಕ್ಕೆ ಪೂರಕವಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಭಿಯಾನ ಪ್ರಾರಂಭಿಸಿದೆ. ಜನವರಿ 16ರಿಂದ ಜನವರಿ 30ರವರೆಗೆ 15 ದಿನಗಳ ಕಾಲ ಎಸ್ಬಿಐ ಸ್ವಚ್ಛತಾ ಅಭಿಯಾನ ಕೈಗೊಂಡಿದೆ.
ಎಸ್.ಎನ್. ರಮಾಕಾಂತ್, ಶೋಭಾ ರಾಘವನ್ ಮೊದಲಾದ ತಜ್ಞರ ನೇತೃತ್ವದಲ್ಲಿ ತ್ಯಾಜ್ಯ ನಿರ್ವಹಣೆ ಬಗ್ಗೆ ಬ್ಯಾಂಕ್ನ ಸಿಬ್ಬಂದಿಗಳೊಂದಿಗೆ ಸೆಮಿನಾರ್ ನಡೆಸಲಾಯಿತು. ಇದಕ್ಕೆ ಪೂರಕವಾಗಿ ಇಂದು ಬೆಳಗ್ಗೆ ಎಸ್ಬಿಐನ ಉದ್ಯೋಗಿಗಳು ಕಬ್ಬನ್ಪಾರ್ಕ್ನಲ್ಲಿ ಕಸ ಗುಡಿಸಿ, ನೆಲದಲ್ಲಿ ಬಿದ್ದಿರುವ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸಿ ಸ್ವಚ್ಛತಾ ಅಭಿಯಾನ ಕೈಗೊಂಡಿದ್ದು ವಿಶೇಷವಾಗಿತ್ತು.