
ಚೆನ್ನೈ(ಡಿ.16): `ಅಣ್ಣಾ ಡಿಎಂಕೆ ಪ್ರಧಾನ ಕಾರ್ಯದರ್ಶಿಯಾಗಿ ಶಶಿಕಲಾ ನಟರಾಜನ್ ಅವರನ್ನ ನಾಮನಿರ್ದೇಶನ ಮಾಡಿದ್ದು ದೊಡ್ಡ ತಪ್ಪು, ಶಶಿಕಲಾ ಅವರೇ ನನ್ನ ಮುಂದಿನ ಉತ್ತರಾಧಿಕಾರಿ ಎಂದು ಜಯಲಲಿತಾ ಎಲ್ಲಿಯೂ ಹೇಳಿರಲಿಲ್ಲ. ಶಶಿಕಲಾರನ್ನ ಕೊನೆಯ ಪಕ್ಷ ಎಂಎಲ್`ಎ ಅಥವಾ ಎಂಎಲ್`ಸಿಯಾಗಿ ಮಾಡಿರಲಿಲ್ಲ.ಇದರರ್ಥ ಶಶಿಕಲಾ ರಾಜಕೀಯಕ್ಕೆ ಅರ್ಹರಲ್ಲ ಎಂಬುದಾಗಿದೆ' ಎಂದು ಅಣ್ಣಾಡಿಎಂಕೆಯ ಉಚ್ಛಾಟಿತ ಸದಸ್ಯೆ ಶಶಿಕಲಾ ಪುಷ್ಪಾ ಹೇಳಿದ್ದಾರೆ.
`ಶಶಿಕಲಾ ನಟರಾಜನ್ ವರು ಈ ಹಿಂದೆ ಜಯಲಲಿತಾ ವಿರುದ್ಧವೇ ಕೊಲೆಯ ಸಂಚು ಮಾಡಿದ್ದರು. ಹೀಗಾಗಿ, ಅವರನ್ನ ಪಕ್ಷದಿಂದ ಉಚ್ಚಾಟಿಸಲಾಗಿತ್ತು. ಅಮ್ಮನ ಹತ್ಯೆಗೆ ಸಂಚು ರೂಒಇಸಿದವಳನ್ನೇ ಉತ್ತರಾಧಿಕಾರಿಯಾಗಿ ಮಾಡುವುದು ಎಷ್ಟು ಸರಿ' ಎಂದು ಶಶಿಕಲಾ ಪುಷ್ಪ ಪ್ರಶ್ನಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.