ಸಿಎಂ ಸಿದ್ದರಾಮಯ್ಯ ಅಣತಿ ಪ್ರಕಾರ ಶಶಿಕಲಾಗೆ ಜೈಲಲ್ಲಿ ಹಾಸಿಗೆ, ಮಂಚ!

Published : Mar 07, 2018, 07:12 AM ISTUpdated : Apr 11, 2018, 12:57 PM IST
ಸಿಎಂ ಸಿದ್ದರಾಮಯ್ಯ ಅಣತಿ ಪ್ರಕಾರ ಶಶಿಕಲಾಗೆ ಜೈಲಲ್ಲಿ ಹಾಸಿಗೆ, ಮಂಚ!

ಸಾರಾಂಶ

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಸೆರೆವಾಸ ಅನುಭವಿಸುತ್ತಿರುವ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಆಪ್ತೆ ಶಶಿಕಲಾ ಅವ​ರಿಗೆ ಮುಖ್ಯ​ಮಂತ್ರಿ ಸಿದ್ದ​ರಾ​ಮಯ್ಯ ಅವರ ಸೂಚನೆ ಮೇರೆಗೆ ಮಂಚ, ಹಾಸಿಗೆ ಮತ್ತು ತಲೆದಿಂಬು ಒದ​ಗಿ​ಸಿ​ರು​ವು​ದಾಗಿ ರಾಜ್ಯ ಬಂದೀಖಾನೆ ಇಲಾಖೆ ನಿವೃತ್ತ ಡಿಜಿಪಿ ಸತ್ಯನಾರಾಯಣ ರಾವ್‌ ತನಿ​ಖಾ​ಧಿ​ಕಾರಿ ಮುಂದೆ ಹೇಳಿಕೆ ನೀಡಿ​ರುವುದು ಇದೀಗ ಬಹಿ​ರಂಗ​ಗೊಂಡಿ​ದೆ.

ಬೆಂಗಳೂರು : ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಸೆರೆವಾಸ ಅನುಭವಿಸುತ್ತಿರುವ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಆಪ್ತೆ ಶಶಿಕಲಾ ಅವ​ರಿಗೆ ಮುಖ್ಯ​ಮಂತ್ರಿ ಸಿದ್ದ​ರಾ​ಮಯ್ಯ ಅವರ ಸೂಚನೆ ಮೇರೆಗೆ ಮಂಚ, ಹಾಸಿಗೆ ಮತ್ತು ತಲೆದಿಂಬು ಒದ​ಗಿ​ಸಿ​ರು​ವು​ದಾಗಿ ರಾಜ್ಯ ಬಂದೀಖಾನೆ ಇಲಾಖೆ ನಿವೃತ್ತ ಡಿಜಿಪಿ ಸತ್ಯನಾರಾಯಣ ರಾವ್‌ ತನಿ​ಖಾ​ಧಿ​ಕಾರಿ ಮುಂದೆ ಹೇಳಿಕೆ ನೀಡಿ​ರುವುದು ಇದೀಗ ಬಹಿ​ರಂಗ​ಗೊಂಡಿ​ದೆ.

ಶಶಿ​ಕಲಾರಿಂದ ಲಂಚ ಸ್ವೀಕರಿಸಿರುವ ಆರೋಪ ಕುರಿತಾದ ಪ್ರಕ​ರ​ಣ​ದಲ್ಲಿ ತಮ್ಮ ವಿರುದ್ಧ ಎಸಿಬಿ ದಾಖ​ಲಿ​ಸಿರುವ ಎಫ್‌ಐಆರ್‌ ರದ್ದು ಕೋರಿ ಸತ್ಯನಾರಾಯಣ ರಾವ್‌ ಹೈಕೋ​ರ್ಟ್‌ಗೆ ಅರ್ಜಿ ಸಲ್ಲಿ​ಸಿ​ದ್ದಾರೆ. ಈ ಅರ್ಜಿ​ಯೊಂದಿಗೆ ತಾವು ಈ ಪ್ರಕ​ರ​ಣದ ವಿಚಾ​ರ​ಣಾ​ಧಿ​ಕಾ​ರಿ​ಯಾ​ಗಿದ್ದ ನಿವೃತ್ತ ಐಎ​ಎಸ್‌ ಅಧಿ​ಕಾ​ರಿ ವಿನಯ್‌ ಕುಮಾರ್‌ ಸಮಿತಿಯ ಮುಂದೆ ನೀಡಿದ್ದ ಹೇಳಿಕೆಯ ಕುರಿತ ವರದಿಯನ್ನೂ ಲಗತ್ತಿಸಿದ್ದಾರೆ.

ವಿನಯ್‌ ಕುಮಾರ್‌ ಅವರ ವಿಚಾರಣಾ ಸಮಿತಿ ಮುಂದೆ ಸತ್ಯ​ನಾ​ರಾ​ಯಣ ರಾವ್‌ 2017ರ ಜುಲೈ 25ರಂದು ಹೇಳಿಕೆ ನೀಡಿ​ದ್ದ​ರು. ಅದ​ರಲ್ಲಿ, ಮುಖ್ಯ​ಮಂತ್ರಿ ಸಿದ್ದ​ರಾ​ಮಯ್ಯ ಅವರ ಸೂಚನೆ ಮೇರೆಗೆ ಶಶಿಕಲಾ ಅವರಿಗೆ ಮಂಚ, ಹಾಸಿಗೆ ಮತ್ತು ತಲೆದಿಂಬು ನೀಡಿರು​ವು​ದಾಗಿ ತಿಳಿ​ಸಿ​ದ್ದಾ​ರೆ.

ಶಶಿಕಲಾ ಅವರು ಪರಪ್ಪನ ಅಗ್ರಹಾರ ಜೈಲಿನ ವಿಶೇಷ ಕೋರ್ಟ್‌ಗೆ ಶರಣಾದ ನಂತರ ಆಕೆಯ ಪರ ವಕೀಲರು ಶಶಿಕಲಾಗೆ ಕ್ಲಾಸ್‌-1 ಸೌಲಭ್ಯ ನೀಡುವಂತೆ ಮನವಿ ಸಲ್ಲಿಸಿದರು. ಈ ವಿಚಾರ ಸಂಬಂಧ ಮುಖ್ಯ ಅಧೀಕ್ಷಕರು ತಮಗೆ ಕರೆ ಮಾಡಿ ಈ ಸೌಲಭ್ಯ ನೀಡ​ಬ​ಹುದೇ ಎಂದು ಕೇಳಿ​ದ್ದರು. ನಿಯ​ಮ​ಗಳ ಪ್ರಕಾರ ಇಂತಹ ಸೌಲಭ್ಯ ನೀಡಲು ಸಾಧ್ಯ​ವಿಲ್ಲ ಎಂದು ನಾನು ಸಲಹೆ ನೀಡಿದ್ದೆ. ಇದಾದ ನಂತ​ರವೂ ಶಶಿ​ಕಲಾ ಅವರು ಮತ್ತೆ ಹಲವು ಬಾರಿ ನನಗೆ ಲಿಖಿತ​ವಾಗಿ ವಿಶೇಷ ಸೌಲಭ್ಯ ನೀಡು​ವಂತೆ ಮನವಿ ಮಾಡಿ​ದ್ದರು. ಈ ಮನ​ವಿ​ಯನ್ನು ನಾನು ರಾಜ್ಯ ಸರ್ಕಾ​ರಕ್ಕೆ ಕಳು​ಹಿ​ಸಿ​ದ್ದೆ. ಆದರೆ, ಇದಕ್ಕೆ ಸರ್ಕಾ​ರ​ದಿಂದ ಯಾವುದೇ ಪ್ರತಿ​ಕ್ರಿಯೆ ಬಂದಿ​ರ​ಲಿ​ಲ್ಲ.

ಇದಾದ ಕೆಲ ತಿಂಗಳ ನಂತರ ತಮ್ಮ ಆಪ್ತ ಸಹಾ​ಯ​ಕ ವೆಂಕ​ಟೇಶ್‌ ಮೂಲಕ ನನ್ನನ್ನು ಕೆಪಿಸಿ ಅತಿಥಿ ಗೃಹಕ್ಕೆ ಕರೆ​ಸಿ​ಕೊಂಡ ಮುಖ್ಯ​ಮಂತ್ರಿ ಸಿದ್ದ​ರಾ​ಮಯ್ಯ ಅವರು ಮಂಚ, ಹಾಸಿಗೆ ಹಾಗೂ ತಲೆ​ದಿಂಬು ಒದ​ಗಿ​ಸಲು ಸೂಚಿ​ಸಿ​ದ್ದರು. ಇಂತಹ ಸೂಚನೆ ನೀಡಲು ಸರ್ಕಾ​ರಕ್ಕೆ ಅಧಿ​ಕಾ​ರ​ವಿದೆ. ಹೀಗಾಗಿ ನಾನು ಅದನ್ನು ಪಾಲಿ​ಸ​ಬೇ​ಕಾ​ಯಿತು ಎಂದು ಅವರು ಹೇಳಿಕೆ ನೀಡಿ​ದ್ದರು. ಈ ಹೇಳಿಕೆ ಒಳ​ಗೊಂಡಿ​ರುವ ಸಮಿ​ತಿಯ ವರ​ದಿಯೂ ಸತ್ಯ​ನಾ​ರಾ​ಯಣ ರಾವ್‌ ನ್ಯಾಯಾ​ಲ​ಯಕ್ಕೆ ಸಲ್ಲಿ​ಸಿ​ರುವ ಅರ್ಜಿಯ ಭಾಗ​ವಾ​ಗಿ​ದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Koppal: ಗವಿಸಿದ್ದೇಶ್ವರ ಮಠದ ಶಾಖೆಗಳಿಗೆ ಉತ್ತರಾಧಿಕಾರಿಗಳ ನೇಮಕ
ತಮನ್ನಾ ಬರ್ತಿದ್ದಂತೆ 22 ವರ್ಷ ಹಿಂದಿನ ಮೈಸೂರು ಸ್ಯಾಂಡಲ್ ಸೋಪ್ ಜಾಹೀರಾತು ವೈರಲ್