
ಚೆನ್ನೈ(ಫೆ.13): ತಮಿಳುನಾಡಿನಲ್ಲಿ ರಾಜಕೀಯ ಚಿತ್ರಣ ಕ್ಷಣ ಕ್ಷಣಕ್ಕೂ ಬದಲಾಗುತ್ತಿದೆ. ಸಿಎಂ ಗಾದಿಗೇರಲು ಹರಸಾಹಸ ಪಡುತ್ತಿರುವ ಶಶಿಕಲಾ, ಪಕ್ಷದ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದಾರೆ. ಪಕ್ಷದ ಕಚೇರಿ ಕೂಡಾ ಚಿನ್ನಮ್ಮ ಮುಂದಿನ ಮುಖ್ಯಮಂತ್ರಿಯಾಗಲಿ ಎಂಬರ್ಥದಲ್ಲಿ ಟ್ವೀಟ್ ಮಾಡಿದೆ. ಈ ಮೂಲಕ ಶಶಿಕಲಾ, ಪಕ್ಷದ ಮೇಲೆ ತನಗೆ ಹಿಡಿತವಿದೆ ಎಂದು ಸಾಬೀತುಪಡಿಸಲು ಹೊರಟಿದ್ದಾರೆ. ಪಕ್ಷದ ಅಧ್ಯಕ್ಷರನ್ನು ಶಶಿಕಲಾ ಉಚ್ಚಾಟಿಸಿದ್ದರು. ನಂತರ, ಉಚ್ಚಾಟನೆಗೊಂಡಿದ್ದ ಅಧ್ಯಕ್ಷ ಮಧುಸೂದನ್, ಶಶಿಕಲಾರನ್ನು ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಉಚ್ಚಾಟಿಸಿದ್ದರು. ಇದಾದ ಮೇಲೆ ಪಕ್ಷದ ಟ್ವಿಟರ್ ಖಾತೆಯಲ್ಲಿ ಕಾಣಿಸಿಕೊಂಡಿರುವ ಈ ಟ್ವೀಟ್, ಪಕ್ಷ ತಮ್ಮ ಜೊತೆಯಲ್ಲಿದೆ ಹಾಗೂ ಪಕ್ಷ ನನ್ನ ಹಿಡಿತದಲ್ಲಿದೆ ಎಂದು ಸಾಬೀತು ಪಡಿಸಲು ನಡೆಸಿದ ತಂತ್ರವಾಗಿದೆ. ಈ ಮೂಲಕ ತಮ್ಮ ಜೊತೆಯಲ್ಲಿರುವ ಶಾಸಕರು ಹಾಗೂ ಪನ್ನೀರ್ ಸೆಲ್ವಂ ಜೊತೆಯಲ್ಲಿರುವ ಶಾಸಕರಿಗೆ, ತಾನೇ ಪಕ್ಷದ ನಾಯಕಿ ಎಂಬ ಸಂದೇಶ ಸಾರಲು ಶಶಿಕಲಾ ಹೊರಟಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.