ಟಿಪ್ಪುವಿನ ಭಯೋತ್ಪಾದನೆ ನಡೆಸುತ್ತಿದೆಯಾ ಸರ್ಕಾರ?

Published : Nov 13, 2018, 02:36 PM ISTUpdated : Nov 13, 2018, 02:38 PM IST
ಟಿಪ್ಪುವಿನ ಭಯೋತ್ಪಾದನೆ ನಡೆಸುತ್ತಿದೆಯಾ ಸರ್ಕಾರ?

ಸಾರಾಂಶ

ಪತ್ರಕರ್ತ ಸಂತೋಷ್ ತಮ್ಮಯ್ಯ ಬಂಧನ | ಸಾರ್ವಜನಿಕ ವಲಯದಲ್ಲಿ ಆಕ್ರೋಶ | ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಸಾಮಾಜಿಕ ಕಾರ್ಯಕರ್ತ 

ಬೆಂಗಳೂರು (ನ. 13): ಪತ್ರಕರ್ತ ಸಂತೋಷ್ ತಮ್ಮಯ್ಯ ಬಂಧನವನ್ನು ಖಂಡಿಸಿ ಸಾಮಾಜಿಕ ಹೋರಾಟಗಾರ ರಾಬರ್ಟ್ ರೊಜಾರಿಯಾ ಕಿಡಿ ಕಾರಿದ್ದಾರೆ. 

ಈ ಬಾರಿ ಜನ ವಿರೋಧದ ಮಧ್ಯೆಯೇ ಸರ್ಕಾರ ಟಿಪ್ಪು ಜಯಂತಿ ಆಚರಿಸಲು ಹೊರಟಾಗ ನನಗೆ ಅನುಮಾನ ಮೂಡಿತ್ತು.  ಟಿಪ್ಪು ಜಯಂತಿ ಆಚರಣೆ ಮಾತ್ರವಲ್ಲ, ಟಿಪ್ಪುವಿನ ಆಡಳಿತವನ್ನೂ ಜಾರಿಗೆ ತರಲು ಹೊರಟಿದೆ. ಚುನಾಯಿತ ಸರ್ಕಾರ ಟಿಪ್ಪುವಿನ ಭಯೋತ್ಪಾದನೆ ಜಾರಿ ಮಾಡಿರೋದಕ್ಕೆ ಸಂತೋಷ್ ತಮ್ಮಯ್ಯ  ಬಂಧನ ಉದಾಹರಣೆ ಎಂದು ರಾಬರ್ಟ್ ಹೇಳಿದ್ದಾರೆ. 

ಟಿಪ್ಪು ಜಯಂತಿ ವಿರೋಧಿ ಲೇಖನ: ಪತ್ರಕರ್ತ ಸಂತೋಷ್ ತಮ್ಮಯ್ಯ ಬಂಧನ

ಸಂತೋಷ್ ತಮ್ಮಯ್ಯ ಯಾವುದೇ ವಿವಾದಾತ್ಮಕ ಹೇಳಿಕೆ ನೀಡಿಲ್ಲ. ಟಿಪ್ಪುವಿನ ಮಾನಸಿಕತೆ ಸಂಬಂಧ ಆತ ಯಾವುದರಿಂದ  ಸ್ಪೂರ್ತಿ ಪಡೆದಿದ್ದ ಎಂದು ಮಾತನಾಡಿದ್ದರು. ಆದರೆ ಕಾನೂನು ದುರುಪಯೋಗ ಮಾಡಿ ಅರೆಸ್ಟ್ ಮಾಡಲಾಗಿದೆ. ಪೊಲೀಸರು ರಾಜಕೀಯ ಒತ್ತಡದಿಂದ  ಮಧ್ಯರಾತ್ರಿ ಬಂಧಿಸಿದ್ದಾರೆ. ಇದು ಭಯೋತ್ಪಾದನೆ ಹುಟ್ಟು ಹಾಕುವ ಕೆಲಸವಾಗಿದೆ. ನನ್ನನ್ನು ಬಂಧಿಸಿದ್ರೆ ಬಂಧನಕ್ಕೆ ನಾನು ಸದಾ ಸಿದ್ದ ಎಂದಿದ್ದಾರೆ. 

ಸಂತೋಷ್ ತಮ್ಮಯ್ಯ ಬಂಧನ ; ಕೊಡಗು ಬಂದ್‌ಗೆ ಕರೆ

ನಾವು ವೇದಿಕೆಯಲ್ಲಿ ಇದ್ದ ಕಾರಣಕ್ಕೆ ನಮ್ಮ ಮೇಲೂ ಕೇಸು ದಾಖಲಾಗಿದೆ. ಇದರ ಹಿಂದೆ ಕಾಂಗ್ರೆಸ್ ನ ವೈಚಾರಿಕ ಜನ, ಸಿದ್ದರಾಮಯ್ಯ ಇದ್ದಾರೆ. ಅವರ ಹಿಂಬಾಲಕರು ನಮ್ಮ ಈಗಿನ ಗೃಹಮಂತ್ರಿ ಪರಮೇಶ್ವರ್. ಕಾಂಗ್ರೆಸ್ ನ ಕೆಲವು ಎಡಪಂಥೀಯ  ವ್ಯಕ್ತಿಗಳು ಹೀಗೆ ಮಾಡುತ್ತಿದ್ದಾರೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣದ ಜೊತೆಗೆ ಭಯೋತ್ಪಾದನೆ ಹರಡಲಾಗುತ್ತಿದೆ. ಕೂಡಲೇ ಸಂತೋಷ್  ತಮ್ಮಯ್ಯರನ್ನು ಪೊಲೀಸರು ಬಿಡುಗಡೆ ಮಾಡಲಿ ಎಂದು ಆಗ್ರಹಿಸಿದ್ದಾರೆ. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗೃಹಸಚಿವರು ಏನು ಬೇಕಾದ್ರೂ ಮಾಡಬಹುದು, ಅವರ ಕಣ್ಣುಗಳನ್ನು ನೋಡಿದರೆ ನನಗೆ ಭಯವಾಗುತ್ತೆ: ಮಮತಾ ಬ್ಯಾನರ್ಜಿ
ಅಣ್ಣಾ ಹಜಾರೆ ಮತ್ತೆ ಉಪವಾಸ ಸತ್ಯಾಗ್ರಹ ಘೋಷಣೆ: ಸ್ಥಳ, ದಿನಾಂಕ ನಿಗದಿ, ಕಾರಣವೇನು ಗೊತ್ತಾ?