
ನವದೆಹಲಿ(ಮಾ.22): ಬಾಲಾಕೋಟ್ ಸಾಕ್ಷಿ ಕೇಳಿ ವಿವಾದ ಸೃಷ್ಟಿಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆಪ್ತ ಸ್ಯಾಮ್ ಪಿತ್ರೋಡಾ, ಪ್ರಧಾನಿ ಮೋದಿ ಅವರನ್ನು ಟೀಕಿಸುವ ಭರದಲ್ಲಿ ತಮ್ಮ ಪಾಕಿಸ್ತಾನ ಪ್ರೀತಿಯನ್ನೂ ಹೊರ ಹಾಕಿದ್ದಾರೆ .
ಬಾಲಾಕೋಟ್ ದಾಳಿಯ ಕುರಿತು ಕೇಂದ್ರ ಸರ್ಕಾರ ಇನ್ನಷ್ಟು ಸಾಕ್ಷ್ಯ ಕೊಡಬೇಕು ಎಂದು ಸ್ಯಾಮ್ ಕೇಳಿದ್ದರು. ಈ ವೇಳೆ ಮುಂಬೈ ದಾಳಿ ಪ್ರಸ್ತಾಪಿಸಿದ್ದ ಸ್ಯಾಮ್, 8 ಜನ ಸೇರಿ ಮಾಡಿದ ಕೃತ್ಯಕ್ಕೆ ಇಡೀ ದೇಶವನ್ನು ಹೇಗೆ ಹೊಣೆ ಮಾಡಲು ಸಾಧ್ಯ ಎಂದು ಪರೋಕ್ಷವಾಗಿ ಪಾಕಿಸ್ತಾನವನ್ನು ಬೆಂಬಲಿಸಿದ್ದಾರೆ.
ಯಾರೋ ತಲೆ ಕೆಟ್ಟವರಿಂದ ನಡೆದ ದುಷ್ಕೃತ್ಯಕ್ಕೆ ಇಡೀ ದೇಶವನ್ನು ಮತ್ತು ಅಲ್ಲಿನ ಜನರನ್ನು ದೂಷಿಸುವುದು ಎಷ್ಟು ಸರಿ ಎಂದಿರುವ ಸ್ಯಾಮ್, ಈ ರೀತಿಯ ರಾಜಕಾರಣ ಮಾಡುವುದು ಬಿಜೆಪಿ ಮಾತ್ರ ಎಂದು ಹಂಗಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.