ಎಸ್ &ಪಿ ರೇಟಿಂಗ್'ನಲ್ಲಿ ಯಥಾಸ್ಥಿತಿ ಕಾಯ್ದುಕೊಂಡ ಮೋದಿ ಸರ್ಕಾರ

Published : Nov 25, 2017, 12:46 PM ISTUpdated : Apr 11, 2018, 01:04 PM IST
ಎಸ್ &ಪಿ ರೇಟಿಂಗ್'ನಲ್ಲಿ ಯಥಾಸ್ಥಿತಿ ಕಾಯ್ದುಕೊಂಡ ಮೋದಿ ಸರ್ಕಾರ

ಸಾರಾಂಶ

ಅಮೆರಿಕ ಮೂಲದ ‘ಮೂಡಿಸ್’ ರೀತಿ ವಿಶ್ವದ ಮತ್ತೊಂದು ಪ್ರಮುಖ ರೇಟಿಂಗ್ ಏಜೆನ್ಸಿಯಾಗಿರುವ ಸ್ಟಾಂಡರ್ಡ್ ಆ್ಯಂಡ್ ಪೂರ್ (ಎಸ್ ಆ್ಯಂಡ್ ಪಿ) ಕೂಡ ಭಾರತದ ರೇಟಿಂಗ್ ಏರಿಸಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ.

ನವದೆಹಲಿ (ನ.25): ಅಮೆರಿಕ ಮೂಲದ ‘ಮೂಡಿಸ್’ ರೀತಿ ವಿಶ್ವದ ಮತ್ತೊಂದು ಪ್ರಮುಖ ರೇಟಿಂಗ್ ಏಜೆನ್ಸಿಯಾಗಿರುವ ಸ್ಟಾಂಡರ್ಡ್ ಆ್ಯಂಡ್ ಪೂರ್ (ಎಸ್ ಆ್ಯಂಡ್ ಪಿ) ಕೂಡ ಭಾರತದ ರೇಟಿಂಗ್ ಏರಿಸಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ.

ಭಾರತದ ರೇಟಿಂಗ್‌ನಲ್ಲಿ ಯಥಾಸ್ಥಿತಿಯನ್ನು ಆ ಸಂಸ್ಥೆ ಕಾಯ್ದುಕೊಂಡಿದೆ. ಆದರೆ ವಿತ್ತೀಯ ಸದೃಢತೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದೆ. 2007 ರ ಜನವರಿಯಲ್ಲಿ ಎಸ್ ಆ್ಯಂಡ್ ಪಿ ಭಾರತಕ್ಕೆ ‘ಬಿಬಿಬಿ-’ (ಆಆಆ) ರೇಟಿಂಗ್ ನೀಡಿತ್ತು. ಬಾಂಡ್ ಮಾರುಕಟ್ಟೆಯಲ್ಲಿ ಇದು ಅತ್ಯಂತ ಕನಿಷ್ಠ ಹೂಡಿಕೆ ಗ್ರೇಡ್. ಆಗ ಆರ್ಥಿಕ ಮುನ್ನೋಟದಲ್ಲಿ ‘ಸ್ಥಿರ’ ಎಂಬ ಪಟ್ಟ ನೀಡಿತ್ತು. 2009 ರಲ್ಲಿ ಅದನ್ನು ‘ಋಣ’ (ನೆಗೆಟಿವ್)ಕ್ಕೆ ಇಳಿಸಿ, 2010 ರಲ್ಲಿ ಮತ್ತೆ ‘ಸ್ಥಿರ’ಕ್ಕೇರಿಸಿತ್ತು. 2012 ರಲ್ಲಿ ‘ನೆಗೆಟಿವ್’ಗೆ ಇಳಿಸಿ, 2014 ರಲ್ಲಿ ಅಂದರೆ ಮೋದಿ ಅವರು ಪ್ರಧಾನಿಯಾದ ಬಳಿಕ ‘ಸ್ಥಿರ’ ಸ್ಥಾನ ನೀಡಿತ್ತು.

ಭಾರತದ ರೇಟಿಂಗ್ ಅನ್ನು 14 ವರ್ಷದ ಬಳಿಕ ಮೂಡಿಸ್ ಏರಿಕೆ ಮಾಡಿದ ಹಿನ್ನೆಲೆಯಲ್ಲಿ ಇತರೆ ರೇಟಿಂಗ್ ಏಜೆನ್ಸಿಗಳಾದ ಎಸ್ ಆ್ಯಂಡ್ ಪಿ ಹಾಗೂ ಫಿಚ್ ಕೂಡ ಅದೇ ಹಾದಿ ತುಳಿಯಲಿವೆ ಎಂದು ಊಹಿಸಲಾಗಿತ್ತು. ಆದರೆ ರೇಟಿಂಗ್‌ನಲ್ಲಿ ಬದಲಾವಣೆ ಮಾಡಲು ಎಸ್ ಆ್ಯಂಡ್ ಪಿ ನಿರಾಕರಿಸಿದೆಯಾದರೂ, ಭಾರತದ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದೆ. ಆರ್ಥಿಕ ಹಾಗೂ ಸಾಂಸ್ಥಿಕ ಸುಧಾರಣೆಗಳಿಂದಾಗಿ ಭಾರತದ ಅಭಿವೃದ್ಧಿ ಸಂಭಾವ್ಯತೆ ವೃದ್ಧಿಯಾಗಿದೆ. ಬಲಿಷ್ಠ ಜಿಡಿಪಿ ಬೆಳವಣಿಗೆ, ಸಮರ್ಥ ಬಾಹ್ಯ ಹೊರನೋಟ, ಆರ್ಥಿಕ ವಿಶ್ವಾಸಾರ್ಹತೆ ಸುಧಾರಣೆಯನ್ನು ಭಾರತ ಕುರಿತಾದ ರೇಟಿಂಗ್ ಪ್ರತಿಬಿಂಬಿಸುತ್ತದೆ. ಭಾರತದ ಬಲಿಷ್ಠ ಪ್ರಜಾಸತ್ತಾತ್ಮಕ ಸಂಸ್ಥೆಗಳು, ಮುಕ್ತ ಮಾಧ್ಯಮಗಳು ನೀತಿ ಸ್ಥಿರತೆ, ರಾಜೀ ಉತ್ತೇಜಿಸಿ, ರೇಟಿಂಗ್‌ಗೆ ಬೆಂಬಲವಾಗಿ ನಿಲ್ಲುತ್ತವೆ ಎಂದು ಹೇಳಿದೆ. ಈ ಸದೃಢತೆಯಿಂದಾಗಿಯೇ ದೇಶದ ತಲಾದಾಯ ಕಡಿಮೆ ಇದ್ದರೂ, ಸಾಲ ಹೆಚ್ಚು ಇದ್ದರೂ ಸಮತೋಲನವಾಗುತ್ತಿದೆ ಎಂದು ತಿಳಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಔಷಧ ಇಲ್ಲದೇ ರೋಗ ದೂರ ಮಾಡುವ ಆಯುರ್ವೇದ : ಕಜೆ
ಕೋಗಿಲು ಸಂತ್ರಸ್ತರ ಬಗ್ಗೆ ಚರ್ಚೆಗೆ ಇಂದು ಸಿಎಂ ಸಭೆ