ಜೋಳದ ಹೊಲದಲ್ಲಿ ವಿಮಾನ: ಜೀವ ಉಳಿಸಿದ ಪೈಲೆಟ್ ಗುಣಗಾನ!

Published : Aug 15, 2019, 07:30 PM IST
ಜೋಳದ ಹೊಲದಲ್ಲಿ ವಿಮಾನ: ಜೀವ ಉಳಿಸಿದ ಪೈಲೆಟ್ ಗುಣಗಾನ!

ಸಾರಾಂಶ

ಆಕಾಶದಲ್ಲಿರಬೇಕಾದ ವಿಮಾನ ಜೋಳದ ಹೊಲದಲ್ಲಿ| ಪೈಲೆಟ್ ಸಮಯಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ| ರಷ್ಯಾದ ಮಾಸ್ಕೋ ಹೊರವಲಯದಲ್ಲಿ ನಡೆಯಿತು ಚಮತ್ಕಾರ| ಉರಲ್ ಏರ್ ಲೈನ್ಸ್ ಏರ್ ಬಸ್ 321 ನ ಪೈಲಟ್ ಡ್ಯಾಮಿರ್ ಯೂಸೂಫೋವ್| 233 ಜನರ ಪ್ರಾಣ ಉಳಿಸಿ ಹೀರೋ ಆದ ಡ್ಯಾಮಿರ್ ಯೂಸೂಫೋವ್|

ಮಾಸ್ಕೋ(ಆ.15): ಭಾರೀ ಅಪಘಾತಕ್ಕೆ ತುತ್ತಾಗಲಿದ್ದ ವಿಮಾನವೊಂದು ಪೈಲೆಟ್’ನ ಸಮಯಪ್ರಜ್ಞೆಯಿಂದ ಸುರಕ್ಷಿತವಾಗಿ ಲ್ಯಾಂಡಿಂಗ್ ಆದ ಘಟನೆ ರಷ್ಯಾದಲ್ಲಿ ನಡೆದಿದೆ.

ವಿಮಾನ ಟೇಕ್ ಆಫ್ ಆಗುತ್ತಿದ್ದಂತೆ ಹಕ್ಕಿಗಳ ಹಿಂಡು ವಿಮಾನದ ಎಂಜಿನ್’ಗೆ ಬಡಿದಿದ್ದರಿಂದ ವಿಮಾನ ಬೆಂಕಿಗಾಹುತಿಯಾಗುವ ಸಾಧ್ಯತೆ ಹೆಚ್ಚಿದೆ. ಅನಾಹುತದ ಅರಿವಾದ ಪೈಲಟ್ ಕೂಡಲೇ ಜೋಳದ ಹೊಲದಲ್ಲಿ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಿಸಿ 233 ಜನರ ಪ್ರಾಣ ಉಳಿಸಿದ್ದಾರೆ.

ಉರಲ್ ಏರ್‌ಲೈನ್ಸ್ ಏರ್ ಬಸ್ 321 ನ ಪೈಲಟ್ ಡ್ಯಾಮಿರ್ ಯೂಸೂಫೋವ್ ಇದೀಗ ರಷ್ಯಾದಲ್ಲಿ ಹೀರೋ ಆಗಿದ್ದು, ಪ್ರಯಾಣಿಕರ ಜೀವ ಉಳಿಸಿದ ಅವರಿಗೆ ಎಲ್ಲೆಡೆಯಿಂದ ಪ್ರಶಂಸೆಯ ಸುರಿಮಳೆ.

ಮಾಸ್ಕೋದ ಹೊರವಲಯದಲ್ಲಿ ಈ ಘಟನೆ ನಡೆದಿದ್ದು, ವಿಮಾನ ತುರ್ತು ಭೂಸ್ಪರ್ಶ ಮಾಡಿದ್ದರಿಂದ 23 ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಆದರೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ರಷ್ಯಾ ಅಧಿಕಾರಿಗಳು ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮೂರು ವರ್ಷಗಳಲ್ಲಿ 57,733 ಸೈಬರ್ ಅಪರಾಧ, ₹5,473 ಕೋಟಿ ವಂಚನೆ: ಗೃಹ ಸಚಿವ ಪರಮೇಶ್ವರ್
ಮೇಕೆದಾಟು, ಭದ್ರಾ, ಕೃಷ್ಣಾ ಯೋಜನೆಗಳಲ್ಲಿ ಕೇಂದ್ರ ಸರ್ಕಾರ ವಿಳಂಬ: ಡಿ.ಕೆ.ಶಿವಕುಮಾರ್ ಆಕ್ರೋಶ