
ಬೆಂಗಳೂರು(ಮೇ.08): ಕಪ್ಪು ಹಣ ಬಿಳಿಯಾಗುತ್ತಿದೆ ಇನ್ನು ರಾಜ್ಯದಲ್ಲಿ ಈ ಸಿಎಲ್- 2 ಮಳಿಗೆಗಳು ಕಪ್ಪು ಹಣ ಬಿಳಿ ಮಾಡಲು ಸುಲಭ ಮಾರ್ಗವಾಗಿದೆಯಂತೆ. ರಾಜ್ಯದಲ್ಲಿ ಲಿಕ್ಕರ್ ಲೈಸನ್ಸ್ ಪತ್ರಕ್ಕೆ ಒಂದೂವರೆಯಿಂದ ಎರಡು ಕೋಟಿ ರು. ಬೆಲೆ ಇದೆಯಂತೆ. ಇನ್ನು ಭರ್ಜರಿಯಾಗಿ ಮಳಿಗೆ ಸ್ಥಾಪಿಸಲು ಕೋಟಿ ರುಪಾಯಿ. ಸರ್ಕಾರದ ಫೀಸು, ಮಾಲು, ತೆರಿಗೆ ಅಂತ ಹೇಳಿ ಸಾಕಷ್ಟುಖರ್ಚು ತೋರಿಸಬಹುದಂತೆ. ಹಾಗಾಗಿ ಕಪ್ಪು ಹಣ ಸಂಗ್ರಹಿಸಿಟ್ಟ ಶ್ರೀಮಂತರು ವೈನ್ ಶಾಪ್ ಮಾಡಲು ಮುಂದಾಗುತ್ತಿದ್ದಾರೆ. ಸ್ವೈಪ್ ಮಾಡಿದ್ರೆ ಭಾರಿ ದಂಡ ಒಂದೆಡೆ ರಿಪಬ್ಲಿಕ್ ಆಫ್ ಲಿಕ್ಕರ್ ಕಪ್ಪು ಹಣ ಸಂಗ್ರಹಿಸಿ ಮೋದಿ ಕನಸು ನುಚ್ಚು ಮಾಡುತ್ತಿದ್ದರೆ, ಇನ್ನೊಂದೆಡೆ ಕ್ಯಾಶ್ಲೆಸ್ ವ್ಯವಹಾರ ಮಾಡಿದರೆ ಗ್ರಾಹಕರಿಗೆ ದಂಡ ಹಾಕಿ ಅಪಹಾಸ್ಯ ಮಾಡುತ್ತಿವೆ. ರಾಜಧಾನಿ ಬೆಂಗಳೂರು ಹಾಗೂ ಕೆಲ ನಗರ ಪ್ರದೇಶಗಳ ವೈನ್ಸ್ ಹಾಗೂ ಎಂಆರ್ಪಿ ಔಟ್ಲೆಟ್ಗಳಲ್ಲಿ ಕಾರ್ಡ್ ಸ್ವೈಪ್ ಮಾಡಿದರೆ ಗ್ರಾಹಕರಿಂದ ಶೇ.2ರಿಂದ 4ರಷ್ಟುಹೆಚ್ಚುವರಿ ಹಣ ಸಂಗ್ರಹ ಮಾಡಲಾಗುತ್ತಿದೆ. ಕಪ್ಪು ಹಣ ಬಿಳಿಯಾಗುತ್ತಿದೆ ಇನ್ನು ರಾಜ್ಯದಲ್ಲಿ ಈ ಸಿಎಲ್- 2 ಮಳಿಗೆಗಳು ಕಪ್ಪು ಹಣ ಬಿಳಿ ಮಾಡಲು ಸುಲಭ ಮಾರ್ಗವಾಗಿದೆಯಂತೆ. ರಾಜ್ಯದಲ್ಲಿ ಲಿಕ್ಕರ್ ಲೈಸನ್ಸ್ ಪತ್ರಕ್ಕೆ ಒಂದೂವರೆಯಿಂದ ಎರಡು ಕೋಟಿ ರು. ಬೆಲೆ ಇದೆಯಂತೆ. ಇನ್ನು ಭರ್ಜರಿಯಾಗಿ ಮಳಿಗೆ ಸ್ಥಾಪಿಸಲು ಕೋಟಿ ರುಪಾಯಿ. ಸರ್ಕಾರದ ಫೀಸು, ಮಾಲು, ತೆರಿಗೆ ಅಂತ ಹೇಳಿ ಸಾಕಷ್ಟುಖರ್ಚು ತೋರಿಸಬಹುದಂತೆ. ಹಾಗಾಗಿ ಕಪ್ಪು ಹಣ ಸಂಗ್ರಹಿಸಿಟ್ಟ ಶ್ರೀಮಂತರು ವೈನ್ ಶಾಪ್ ಮಾಡಲು ಮುಂದಾಗುತ್ತಿದ್ದಾರೆ. ಸ್ವೈಪ್ ಮಾಡಿದ್ರೆ ಭಾರಿ ದಂಡ ಒಂದೆಡೆ ರಿಪಬ್ಲಿಕ್ ಆಫ್ ಲಿಕ್ಕರ್ ಕಪ್ಪು ಹಣ ಸಂಗ್ರಹಿಸಿ ಮೋದಿ ಕನಸು ನುಚ್ಚು ಮಾಡುತ್ತಿದ್ದರೆ, ಇನ್ನೊಂದೆಡೆ ಕ್ಯಾಶ್ಲೆಸ್ ವ್ಯವಹಾರ ಮಾಡಿದರೆ ಗ್ರಾಹಕರಿಗೆ ದಂಡ ಹಾಕಿ ಅಪಹಾಸ್ಯ ಮಾಡುತ್ತಿವೆ. ರಾಜಧಾನಿ ಬೆಂಗಳೂರು ಹಾಗೂ ಕೆಲ ನಗರ ಪ್ರದೇಶಗಳ ವೈನ್ಸ್ ಹಾಗೂ ಎಂಆರ್ಪಿ ಔಟ್ಲೆಟ್ಗಳಲ್ಲಿ ಕಾರ್ಡ್ ಸ್ವೈಪ್ ಮಾಡಿದರೆ ಗ್ರಾಹಕರಿಂದ ಶೇ.2ರಿಂದ 4ರಷ್ಟುಹೆಚ್ಚುವರಿ ಹಣ ಸಂಗ್ರಹ ಮಾಡಲಾಗುತ್ತಿದೆ.
ನಮ್ಮ ರಾಜ್ಯದಲ್ಲಿ ರಿಪಬ್ಲಿಕ್ ಆಫ್ ಲಿಕ್ಕರ್ ಎನ್ನುವ ವಿಚಿತ್ರ ಸಾಮ್ರಾಜ್ಯವೊಂದು ಸ್ಥಾಪನೆಯಾಗಿದೆ. ಈ ಸಾಮ್ರಾಜ್ಯದಲ್ಲಿ ಕಾನೂನಿಗೆ ಬೆಲೆ ಇಲ್ಲ. ಸರ್ಕಾರಿ ಆದೇಶಗಳಿಗೆ ನೆಲೆ ಇಲ್ಲ. ತಾವಾಡಿದ್ದೇ ಆಟ, ನುಡಿದಿದ್ದೇ ವೇದವಾಕ್ಯ. ನುಡಿ ತಪ್ಪಿ ನಡೆದರೆ ಏಟು, ಗೂಸಾ ಪಕ್ಕಾ. ಈ ಸಾಮ್ರಾಜ್ಯದ ದರ್ಪ ದೌಲತ್ತಿನಿಂದ ಕರುನಾಡಿಗೇ ಆಪತ್ತು ಬಂದಿದೆ. ಪ್ರಧಾನಿ ಮೋದಿ ಕನಸಿಗೂ ಕುತ್ತು ಬಂದಿದೆ. ಅದು ಹೇಗೆ?
ನಮ್ಮ ರಾಜ್ಯದಲ್ಲಿ ರಿಪಬ್ಲಿಕ್ ಆಫ್ ಲಿಕ್ಕರ್ ಎನ್ನುವ ವಿಚಿತ್ರ ಸಾಮ್ರಾಜ್ಯವೊಂದು ಸ್ಥಾಪನೆಯಾಗಿದೆ. ಈ ಸಾಮ್ರಾಜ್ಯದಲ್ಲಿ ಕಾನೂನಿಗೆ ಬೆಲೆ ಇಲ್ಲ. ಸರ್ಕಾರಿ ಆದೇಶಗಳಿಗೆ ನೆಲೆ ಇಲ್ಲ. ತಾವಾಡಿದ್ದೇ ಆಟ, ನುಡಿದಿದ್ದೇ ವೇದವಾಕ್ಯ. ನುಡಿ ತಪ್ಪಿ ನಡೆದರೆ ಏಟು, ಗೂಸಾ ಪಕ್ಕಾ. ಈ ಸಾಮ್ರಾಜ್ಯದ ದರ್ಪ ದೌಲತ್ತಿನಿಂದ ಕರುನಾಡಿಗೇ ಆಪತ್ತು ಬಂದಿದೆ. ಪ್ರಧಾನಿ ಮೋದಿ ಕನಸಿಗೂ ಕುತ್ತು ಬಂದಿದೆ. ಅದು ಹೇಗೆ?
ಈ ಲಿಕ್ಕರ್ ಸಾಮ್ರಾಜ್ಯ ಕಪ್ಪು ಹಣ ದಂಧೆಯ ಕೇಂದ್ರವಾಗಿದೆ. ಇಲ್ಲಿ ನಿತ್ಯ ನೂರಾರು ಕೋಟಿ, ವರ್ಷಕ್ಕೆ ಹತ್ತು ಸಾವಿರ ಕೋಟಿಗೂ ಹೆಚ್ಚು ಕಪ್ಪು ಹಣ ಸಂಗ್ರಹವಾಗುತ್ತಿದೆ. ಇದು ನಮ್ಮ ಆರ್ಥಿಕತೆಗೆ ಭಾರೀ ಹೊಡೆತ ನೀಡುತ್ತಿದೆ.
ವರದಿ: ವಿಜಯಲಕ್ಷ್ಮಿ ಶಿಬರೂರು, ಬೆಂಗಳೂರು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.