
ಬೆಂಗಳೂರು (ಡಿ.24): ಬಿಬಿಎಂಪಿ ಭಾರೀ ಟೀಕೆಗಳ ಬಳಿಕ ಗುಂಡಿ ಮುಚ್ಚೋ ಕೆಲಸ ಮಾಡಿದೆ. ಈಗ ಗುಂಡಿ ಮುಚ್ಚೋಕೆ ಹೊಸ ಐಡಿಯಾ ಮಾಡುತ್ತಿದೆ ಬಿಬಿಂಎಪಿ. ಇದೀಗ ಗುಂಡಿ ಮುಕ್ತ ಬೆಂಗಳೂರು ಮಾಡ್ತಿವಿ ಅಂತಿರುವ ಬಿಬಿಎಂಪಿ ಬಹುತೇಕ ವೈಟ್ ಟ್ಯಾಪಿಂಗ್ ರಸ್ತೆಗಳನ್ನ ಮಾಡುತ್ತಿದ್ದು, ಮತ್ತೊಂದು ಕಡೆ ರಬ್ಬರ್ ಮ್ಯಾಟ್ ಬಳಸಿ ಟಾರ್ ರೋಡ್ಗಳನ್ನ ನಿರ್ಮಾಣ ಮಾಡುತ್ತಿದೆ.
ನಗರದ ಮಡಿವಾಳದ ಅಂಡರ್ಪಾಸ್ ಬಳಿ ಎರಡು ಬದಿಯಲ್ಲಿ ಸುಮಾರು 500ಮೀಟರ್ಗೂ ಹೆಚ್ಚು ಉದ್ದ ರಬ್ಬರ್ ಮ್ಯಾಟ್ ಟಾರ್ ರೋಡ್ ನಿರ್ಮಾಣ ಮಾಡಲಾಗಿದೆ. ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಇದನ್ನ ಪರಿಚಯಿಸಲಾಗುತ್ತಿದೆ. ಇದರ ವಿಶೇಷ ಎಂದರೆ ಮಳೆ ಬಂದರೂ ಕೂಡ ಟಾರ್ ಕಿತ್ತು ಬರುವುದಿಲ್ಲ. ಅಷ್ಟೆ ಅಲ್ಲ ಇಂಥಹ ರಸ್ತೆಗಳು ಬರೋಬ್ಬರಿ 5 ವರ್ಷಗಳಾದ್ರು ಬಾಳಿಕೆ ಬರುತ್ತೆ ಅಂತಾ ಬಿಬಿಎಂಪಿ ಗುತ್ತಿಗೆದಾರ ಸ್ಟಾಲಿನ್ ಹೇಳುತ್ತಾರೆ.
ಇನ್ನು ಈ ರಬ್ಬರ್ ಮ್ಯಾಟ್ ಗಳನ್ನ ಮುಂಬೈನಿಂದ ಇಂಪೋರ್ಟ್ ಮಾಡಿಕೊಳ್ಳಲಾಗಿದೆ. ಈಗಾಗಲೇ ಮುಂಬೈ, ನಾಗಪುರದಲ್ಲಿ ಇದನ್ನ ಬಳಸಿ ಅಲ್ಲಿನ ನಗರಗಳು ಸಕ್ಸಸ್ ಆಗಿವೆ. ಇಡೀ ಬೆಂಗಳೂರಿನಲ್ಲಿ ಇನ್ನುಮುಂದೆ ಇಂತಹ ರಸ್ತೆಗಳನ್ನ ಮಾಡುತ್ತೇವೆ ಎಂದು ಬಿಬಿಎಂಪಿ ಹೇಳುತ್ತಿದೆ. ಇನ್ನು ಬಿಬಿಎಂಪಿಯ ಕೌನ್ಸಿಲ್ ಸಭೆಗೆ ಈ ವಿಷಯವನ್ನ ತರದೇ ರಸ್ತೆಗಳನ್ನ ನಿರ್ಮಾಣ ಮಾಡುತ್ತಿರುವುದು ನೋಡಿದರೆ, ಅನುಮಾನ ಮೂಡಿದೆ ಅಂತಾರೆ ಸಾಮಾಜಿಕ ಕಾರ್ಯಕರ್ತ ಅಮರೇಶ್.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.