ರಾಜಕೀಯಗೊಳ್ಳುತ್ತಿರುವ ರುದ್ರೇಶ್ ಕೊಲೆ ಪ್ರಕರಣ

By Suvarna Web DeskFirst Published Oct 19, 2016, 2:38 AM IST
Highlights

ಬಿಎಸ್​ವೈ ನೇತೃತ್ವದಲ್ಲಿ ಕಳೆದ ಮೂರು ವರ್ಷಗಳಲ್ಲಿ ಹತ್ಯೆಯಾದ ಬಿಜೆಪಿ ಮುಖಂಡರ ಕುಟುಂಬದ ಜೊತೆಗೂಡಿ ಗಾಂಧಿಪ್ರತಿಮೆ ಎದುರು ಇಡೀ ದಿನ ಪ್ರತಿಭಟನೆ ನಡೆಯಲಿದೆ

ಬೆಂಗಳೂರು (ಅ.19): ಬೆಂಗಳೂರಿನಲ್ಲಿ ನಡೆದ ಆರೆಸ್ಸೆಸ್ ಕಾರ್ಯಕರ್ತ ರುದ್ರೇಶ್ ಕೊಲೆ ಪ್ರಕರಣವು ದಿನೇ ದಿನೇ ರಾಜಕೀಯಗೊಳ್ಳುತ್ತಾ ಇದೆ.

ಮೊನ್ನೆ ಶಿವಾಜಿನಗರದಲ್ಲಿ ಪ್ರತಿಭಟನೆ ನಡೆಸಿದ ಬಿಜೆಪಿ, ನಿನ್ನೆ ರುದ್ರೇಶ್ ಶವಯಾತ್ರೆ ನಡೆಸಿತ್ತು. ಇವತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ  ಪ್ರತಿಭಟನೆ ನಡೆಯಲಿದೆ.

Latest Videos

ಬಿಎಸ್​ವೈ ನೇತೃತ್ವದಲ್ಲಿ ಕಳೆದ ಮೂರು ವರ್ಷಗಳಲ್ಲಿ ಹತ್ಯೆಯಾದ ಬಿಜೆಪಿ ಮುಖಂಡರ ಕುಟುಂಬದ ಜೊತೆಗೂಡಿ ಗಾಂಧಿಪ್ರತಿಮೆ ಎದುರು ಇಡೀ ದಿನ ಪ್ರತಿಭಟನೆ ನಡೆಯಲಿದೆ. ಬಳಿಕ ರಾಜ್ಯಪಾಲರಿಗೆ ಈ ಬಗ್ಗೆ ದೂರು ನೀಡಲಿದ್ದಾರೆ.

click me!