ಬಿಜೆಪಿ ಪರ ಬಹಿರಂಗ ಪ್ರಚಾರಕ್ಕೆ RSS: ಅಭ್ಯರ್ಥಿ ಹೆಸರಿನ ಬದಲು ಮೋದಿ ಜಪ!

Published : Feb 04, 2019, 12:55 PM ISTUpdated : Feb 04, 2019, 12:56 PM IST
ಬಿಜೆಪಿ ಪರ ಬಹಿರಂಗ ಪ್ರಚಾರಕ್ಕೆ RSS: ಅಭ್ಯರ್ಥಿ ಹೆಸರಿನ ಬದಲು ಮೋದಿ ಜಪ!

ಸಾರಾಂಶ

ಬಿಜೆಪಿಗೆ ಬೆಂಬಲವಾಗಿ ನಿಲ್ಲಲು 40ಕ್ಕೂ ಹೆಚ್ಚು ಸಂಘಗಳು ಕಣಕ್ಕೆ | ಪ್ರತಿ ಬೂತ್‌ ಮಟ್ಟದಲ್ಲೂ ಕಾರ್ಯಕರ್ತರ ಪಡೆ ರಚನೆ

ಬೆಂಗಳೂರು[ಫೆ.04]: ಮುಂಬರುವ ಲೋಕಸಭಾ ಚುನಾವಣೆಗೆ ಬಿಜೆಪಿಯೇತರ ಪಕ್ಷಗಳು ಮಹಾಗಠಬಂಧನ್ ಗೆ ಪ್ರಯತ್ನ ನಡೆಸುತ್ತಿರುವಂತೆಯೇ ಬಿಜೆಪಿ ಕೂಡ ಮರಳಿ ಅಧಿಕಾರಕ್ಕೆ ಬರಲು ಇನ್ನಿಲ್ಲದ ಕಸರತ್ತಿಗೆ ಇಳಿಯುತ್ತಿದೆ. ಬಿಜೆಪಿಗೆ ಬೆಂಬಲವಾಗಿ ಆರೆಸ್ಸೆಸ್(ರಾಷ್ಟ್ರೀಯ ಸ್ವಯಂ ಸೇವಕ ಸಂಘ) ಮತ್ತು ೪೦ಕ್ಕೂ ಅಧಿಕ ಪರಿವಾರ ಸಂಘಟನೆಗಳು ಇದೀಗ ದೇಶಾದ್ಯಂತ ಬಹಿರಂಗವಾಗಿ ಚುನಾವಣಾ ಪ್ರಚಾರಕ್ಕೆ ಧುಮುಕುತ್ತಿವೆ.

2014 ಲೋಕಸಭಾ ಚುನಾವಣೆಯಲ್ಲಿ ಸಂಘಪರಿವಾರ ಸಂಘಟನೆಗಳು ನರೇಂದ್ರ ಮೋದಿ ನೇತೃತ್ವದ ಬಿಜೆಪಿಯನ್ನು ಅಧಿಕಾರಕ್ಕೆ ತರುವಲ್ಲಿ ಬಹಳಷ್ಟು ಬೆವರು ಹರಿಸಿದ್ದವು. ಕಳೆದ ಎರಡು ವರ್ಷಗಳ ಅವಧಿಯಲ್ಲಿ ನಡೆದ ಉತ್ತರ ಪ್ರದೇಶ, ಈಶಾನ್ಯ ಭಾರತ ಹಾಗೂ ಕರ್ನಾಟಕ ಅಸೆಂಬ್ಲಿ ಚುನಾವಣೆಯಲ್ಲಿ ಸಂಘ ಪರಿವಾರ ಪ್ರಚಾ ರದ ಅಖಾಡಕ್ಕೆ ಇಳಿದು ಬಿಜೆಪಿ ಕೈಗೆ ಅಧಿಕಾರ ಗಳಿಸಿಕೊಟ್ಟಿತ್ತು. ಅಸೆಂಬ್ಲಿ ಚುನಾವಣೆಯಲ್ಲಿ ಸಂಘಪರಿವಾರ ಪ್ರಚಾರಕ್ಕೆ ಧುಮುಕಿದ್ದು ಅದೇ ಪ್ರಥಮ. ಆದರೆ ರಾಜ್ಯದಲ್ಲಿ ಮಾತ್ರ ಬಿಜೆಪಿ ಅಧಿಕಾರ ಹಿಡಿಯಲು ಬಹುಮತದ ಕೊರತೆ ಅನುಭವಿಸಬೇಕಾಯಿತು. ಆದರೆ ಸಾಕಷ್ಟು ಸಂಖ್ಯೆಯಲ್ಲಿ ಬಿಜೆಪಿಗೆ ಸೀಟುಗಳನ್ನು ತೆಗೆಸಿಕೊಟ್ಟಿತ್ತು.

ಈ ಬಾರಿ ರಣತಂತ್ರ ಬದಲು: ಈ ಬಾರಿ ಲೋಕಸಭಾ ಚುನಾವಣೆಯನ್ನು ಸಂಘಪರಿವಾರ ಬಹಳ ಗಂಭೀರವಾಗಿ ಪರಿಗಣಿಸಿದೆ. ಸಂಘದ ಪ್ರಮುಖರು ಹೇಳುವ ಪ್ರಕಾರ, ದೇಶದಲ್ಲಿ ಮಹಾಗಠಬಂಧನ್ ಮೂಲಕ ಮೋದಿ ಹಾಗೂ ಬಿಜೆಪಿಯನ್ನು ಮಣಿಸಲು ವಿಪಕ್ಷಗಳು ಇನ್ನಿಲ್ಲದ ಪ್ರಯತ್ನ ನಡೆಸುತ್ತಿವೆ. ಆದರೆ ದೇಶದ ಜನತೆಗೆ ಮೋದಿ, ಬಿಜೆಪಿ ಆಡಳಿತ ಬೇಕು. ಅದಕ್ಕಾಗಿ ಈ ಬಾರಿಯೂ ಸಂಘ ಪರಿವಾರ ನೇರವಾಗಿ ಪ್ರಚಾರ ಕಣಕ್ಕೆ ಧುಮುಕುತ್ತಿದೆ ಎನ್ನುತ್ತಾರೆ. ಜೊತೆಗೆ ರಣತಂತ್ರವನ್ನೂ ಬದಲಾಯಿಸಿವೆ. ‘ದೇಶಕ್ಕೆ ಮತ್ತೆ ಪ್ರಧಾನಿ ಮೋದಿ’ ಹಾಗೂ ಮೋದಿ, ಬಿಜೆಪಿ ದೇಶಕ್ಕೆ ಯಾಕೆ ಅನಿವಾರ್ಯ ಎಂಬ ಈ ಎರಡು ವಿಚಾರವನ್ನು ಮುಂದಿಟ್ಟುಕೊಂಡು ಪ್ರಚಾರ ಕಾರ್ಯ ನಡೆಸಲಿದೆ. ಎಲ್ಲಿಯೂ ವಿಪಕ್ಷಗಳನ್ನು ಟೀಕಿಸುವುದಾಗಲಿ, ದೂರುವುದಾಗಲಿ ಮಾಡುವುದಿಲ್ಲ. ಬಹಿರಂಗ ಸಮಾವೇಶಗಳ ನ್ನೂ ಸಂಘಪರಿವಾರ ಆಯೋಜಿಸುವುದಿಲ್ಲ. ಏನಿದ್ದರೂ ಕೇಂದ್ರದ ಸಾಧನೆಯನ್ನು ಪ್ರತಿ ಯೊಂದು ಮನೆಗೆ, ಜನತೆಗೆ ಮನದಟ್ಟು ಮಾಡುವುದು ನಮ್ಮ ಕೆಲಸ ಎನ್ನುತ್ತಾರೆ ಸಂಘಪರಿವಾರ ಮುಖಂಡರು.

-ಆತ್ಮಭೂಷಣ್

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಕಟಿಹಾರ್ ಜಂಕ್ಷನ್‌ನಲ್ಲಿ ಮಹಿಳೆಯ ಭಯಾನಕ ಅನುಭವ: 30-40 ಪುರುಷರು ನುಗ್ಗಲು ಯತ್ನ, ಶೌಚಾಲಯದಲ್ಲಿ ಸಿಲುಕಿದ ಮಹಿಳೆ!
ದೇಶದ ಅಗ್ರ ಟಿ20 ಟೂರ್ನಿಯಲ್ಲೇ ಮ್ಯಾಚ್‌ ಫಿಕ್ಸಿಂಗ್‌, ನಾಲ್ವರು ಕ್ರಿಕೆಟಿಗರ ಸಸ್ಪೆಂಡ್‌ ಮಾಡಿ ತನಿಖೆಗೆ ಆದೇಶಿಸಿದ ಬಿಸಿಸಿಐ!