ಪಿಣರಾಯಿ ತಲೆಗೆ 1 ಕೋಟಿ ಘೋಷಿಸಿದ್ದ ಆರೆಸ್ಸೆಸ್ ವ್ಯಕ್ತಿ ಅರೆಸ್ಟ್

By Suvarna Web DeskFirst Published Mar 28, 2017, 9:40 AM IST
Highlights

ಕೇರಳದಲ್ಲಿ ಆರ್‌'ಎಸ್‌'ಎಸ್ ಕಾರ್ಯಕರ್ತರ ಕೊಲೆಗೆ ವಿಜಯನ್ ಅವರೇ ಕಾರಣ ಎಂದು ಆರೋಪಿಸಿದ್ದ ಚಂದ್ರಾವತ್, ಸಿಎಂ ಶಿರಚ್ಛೇದ ಮಾಡಿದವರಿಗೆ 1 ಕೋಟಿ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದ್ದ.

ಉಜ್ಜಯಿನಿ(ಮಾ.28): ಕೇರಳ ಸಿಎಂ ಪಿಣರಾಯಿ ವಿಜಯನ್ ಅವರ ಶಿರಚ್ಛೇದ ಮಾಡಿದವರಿಗೆ 1 ಕೋಟಿ ರೂಪಾಯಿ ನೀಡುವುದಾಗಿ ಘೋಷಿಸಿದ್ದ ಆರ್‌'ಎಸ್‌'ಎಸ್'ನ ಮಾಜಿ ಕಾರ್ಯಕರ್ತ ಕುಂದನ್ ಚಂದ್ರಾವತ್‌ನನ್ನು ಬಂಧಿಸಲಾಗಿದೆ.

ಚಂದ್ರಾವತ್‌'ನನ್ನು ಸೋಮವಾರ ಬಂಧಿಸಲಾಗಿದ್ದು, ಮ್ಯಾಜಿಸ್ಟ್ರೇಟ್ ಎದುರು ಹಾಜರುಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Latest Videos

ಕೇರಳದಲ್ಲಿ ಆರ್‌'ಎಸ್‌'ಎಸ್ ಕಾರ್ಯಕರ್ತರ ಕೊಲೆಗೆ ವಿಜಯನ್ ಅವರೇ ಕಾರಣ ಎಂದು ಆರೋಪಿಸಿದ್ದ ಚಂದ್ರಾವತ್, ಸಿಎಂ ಶಿರಚ್ಛೇದ ಮಾಡಿದವರಿಗೆ 1 ಕೋಟಿ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದ್ದ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡಿತ್ತು.

ಕುಂದನ್ ಚಂದ್ರಾವತ್ ಅವರ ಹೇಳಿಕೆಯನ್ನು ಖಂಡಿಸಿ ಅವರನ್ನು ಆರೆಸ್ಸೆಸ್ ಸದಸ್ಯತ್ವ ಸ್ಥಾನದಿಂದ ವಜಾಗೊಳಿಸಲಾ 

ಈ ಹೇಳಿಕೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ಈ ಸಂಬಂಧ ಮಾಧವ್ ನಗರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

click me!