
ನವದೆಹಲಿ (ಮಾ.02): ಕೇರಳದಲ್ಲಿ ಆರ್ ಎಸ್ ಎಸ್ ಕಾರ್ಯಕರ್ತರ ಹತ್ಯೆಗೆ ಮುಖ್ಯಮಂತ್ರಿ ಪಿನರಾಯಿ ವಿಜಯನ್ ಹೊಣೆಯಾಗಿದ್ದು ಅವರ ತಲೆ ತಂದುಕೊಟ್ಟವರಿಗೆ 1 ಕೋಟಿ ಕೊಡುವುದಾಗಿ ಆರ್ ಎಸ್ ಎಸ್ ಮುಖಂಡರೊಬ್ಬರು ವಿವಾದ ಸೃಷ್ಟಿ ಮಾಡಿದ್ದಾರೆ.
ಆರ್ ಎಸ್ ಎಸ್ ಕಾರ್ಯಕರ್ತರ ಹತ್ಯೆಯ ಹಿಂದಿರುವ ಕೇರಳ ಸಿಎಂ ವಿಜಯನ್ ರವರ ತಲೆಯನ್ನು ತಂದುಕೊಟ್ಟವರಿಗೆ 1 ಕೋಟಿ ಕೊಡುತ್ತೇನೆ ಎಂದು ಉಜ್ಜಯಿನಿಯ ಸಾ ಪ್ರಚಾರ್ ಪ್ರಮುಖ್ ಕುಂದನ್ ಚಂದ್ರಾವತ್ ಎನ್ನುವ ಆರ್ ಎಸ್ ಎಸ್ ಮುಖಂಡರೊಬ್ಬರು ಹೇಳಿದ್ದಾರೆ.
300 ಮಂದಿ ಪ್ರಚಾರಕರನ್ನು ಕೊಲ್ಲಲಾಗಿದೆ. ನಾವು 3 ಲಕ್ಷ ತಲೆಗಳ ಹಾರವನ್ನು ಭಾರತ ಮಾತೆಗೆ ಹಾಕುವುದಾಗಿ ಆಫರ್ ಮಾಡುತ್ತಿದ್ದೆವೆಂದು ಕಮ್ಯುನಿಸ್ಟರಿಗೆ ಎಚ್ಚರಿಕೆ ನೀಡಿದರು.
ಇದು ಚಂದ್ರಾವತ್ ರವರ ವೈಯಕ್ತಿಕ ಅಭಿಪ್ರಾಯವೇ ಹೊರತು ನಮ್ಮ ಅಭಿಪ್ರಾಯವಲ್ಲ ಎಂದು ಆರ್ ಎಸ್ ಎಸ್ ಹೇಳಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.