ಐಐಟಿ, ಐಐಎಂ, ಎನ್ಐಟಿಗಳಲ್ಲಿ ಇಂಗ್ಲಿಷ್ ರದ್ದು ಮಾಡಿ : ಸಚಿವಾಲಯಕ್ಕೆ ಆರೆಸ್ಸೆಸ್ ಸಲಹೆ

Published : Oct 21, 2016, 05:10 PM ISTUpdated : Apr 11, 2018, 12:50 PM IST
ಐಐಟಿ, ಐಐಎಂ, ಎನ್ಐಟಿಗಳಲ್ಲಿ ಇಂಗ್ಲಿಷ್ ರದ್ದು ಮಾಡಿ : ಸಚಿವಾಲಯಕ್ಕೆ ಆರೆಸ್ಸೆಸ್ ಸಲಹೆ

ಸಾರಾಂಶ

ಹೊಸ ಶಿಕ್ಷಣ ನೀತಿ ಜಾರಿಗೆ ಸಂಬಂಸಿದ ಪ್ರಕ್ರಿಯೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಆರೆಸ್ಸೆಸ್‌ನ ಶಿಕ್ಷಣ ಘಟಕವಾದ ಶಿಕ್ಷಾ ಸಂಸ್ಕೃತಿ ಉತ್ಥಾನ್ ನ್ಯಾಸ್(ಎಸ್‌ಎಸ್‌ಯುಎನ್) ಇಂತಹ ಅನೇಕ ಸಲಹೆಗಳನ್ನು ಸಚಿವಾಲಯಕ್ಕೆ ಸಲ್ಲಿಸಿದೆ

ನವದೆಹಲಿ(ಅ.21): ದೇಶದ ಶಿಕ್ಷಣ ಸಂಸ್ಥೆಗಳಲ್ಲಿ ಇಂಗ್ಲಿಷ್ ಅನ್ನು ಬೋಧನಾ ಮಾಧ್ಯಮವಾಗಿ ಬಳಸಿಕೊಳ್ಳುವುದಕ್ಕೆ ಸಂಪೂರ್ಣ ನಿಷೇಧ ಹೇರಬೇಕು. ಐಐಟಿ, ಐಐಎಂ, ಎನ್‌ಐಟಿಯಂತಹ ಸಂಸ್ಥೆಗಳಲ್ಲೂ ಇಂಗ್ಲಿಷ್ ಅನ್ನು ಕಿತ್ತುಹಾಕಿ, ಅಲ್ಲಿ ಭಾರತೀಯ ಭಾಷೆಗಳನ್ನೇ ಕಡ್ಡಾಯಗೊಳಿಸಬೇಕು ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯಕ್ಕೆ ಆರೆಸ್ಸೆಸ್‌ನ ಶಿಕ್ಷಣ ಘಟಕ ಮನವಿ ಮಾಡಿದೆ.

ಹೊಸ ಶಿಕ್ಷಣ ನೀತಿ ಜಾರಿಗೆ ಸಂಬಂಸಿದ ಪ್ರಕ್ರಿಯೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಆರೆಸ್ಸೆಸ್‌ನ ಶಿಕ್ಷಣ ಘಟಕವಾದ ಶಿಕ್ಷಾ ಸಂಸ್ಕೃತಿ ಉತ್ಥಾನ್ ನ್ಯಾಸ್(ಎಸ್‌ಎಸ್‌ಯುಎನ್) ಇಂತಹ ಅನೇಕ ಸಲಹೆಗಳನ್ನು ಸಚಿವಾಲಯಕ್ಕೆ ಸಲ್ಲಿಸಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಸಚಿವಾಲಯವು, ‘‘ನಿಮ್ಮ ಸಲಹೆಗಳನ್ನು ಸ್ವೀಕರಿಸಲಾಗಿದ್ದು, ಅವುಗಳ ಬಗ್ಗೆ ಚರ್ಚಿಸಲಾಗುವುದು,’’ ಎಂದಿದೆ ಎಂದು ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ.

ಏನೇನು ಸಲಹೆಗಳು?

ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಉನ್ನತ ಶಿಕ್ಷಣದವರೆಗೂ ನಮ್ಮ ದೇಶದ ಶಿಕ್ಷಣ ಸಂಸ್ಥೆಗಳಲ್ಲಿ ಬೋಧನಾ ಮಾಧ್ಯಮವಾಗಿ ಇಂಗ್ಲಿಷ್ ಭಾಷೆಯ ಬಳಕೆಯನ್ನು ಸಂಪೂರ್ಣವಾಗಿ ರದ್ದು ಮಾಡಬೇಕು. ಸಚಿವಾಲಯವು ಕ್ರಮೇಣವಾಗಿ ಶಿಕ್ಷಣದ ಎಲ್ಲ ಹಂತಗಳಲ್ಲೂ ಇಂಗ್ಲಿಷ್ ಭಾಷೆಯನ್ನು ತೆಗೆದುಹಾಕುತ್ತಾ ಬರಬೇಕು. ಖಾಸಗಿ ಮತ್ತು ಸರ್ಕಾರಿ ಶಾಲೆಗಳು, ಕಾಲೇಜುಗಳು, ವಿಶ್ವವಿದ್ಯಾನಿಲಯಗಳಲ್ಲೂ ಇಂಗ್ಲಿಷ್ ಇರಬಾರದು. ಪಠ್ಯಕ್ರಮದಿಂದಲೇ ಅದನ್ನು ತೆಗೆದುಹಾಕಬೇಕು. ಆಂಗ್ಲಭಾಷೆಯನ್ನು ಬೋಧನಾ ಮಾಧ್ಯಮವಾಗಿ ಬಳಸುವುದನ್ನು ನಿಲ್ಲಿಸಬೇಕು ಎಂದು ಎಸ್‌ಎಸ್‌ಯುಎನ್ ಸಲಹೆ ನೀಡಿದೆ.

ಸಂಶೋಧನೆಗೂ ಸಲಹೆ: ಭಾರತದಲ್ಲಿ ನಡೆಯುವ ಎಲ್ಲ ಸಂಶೋಧನೆಗಳೂ ರಾಷ್ಟ್ರೀಯ ಅಗತ್ಯತೆಗೆ ಸಂಬಂಸಿದ್ದಾಗಿರಬೇಕು. ಈ ಮಾನದಂಡವನ್ನು ಅನುಸರಿಸದ ಪ್ರಾಜೆಕ್ಟ್‌ಗಳಿದ್ದರೆ, ಅವುಗಳಿಗೆ ಯುಜಿಸಿ ಸ್ಕಾಲರ್‌ಶಿಪ್ ಕೊಡಬಾರದು. ಭಾರತೀಯ ಸಂಸ್ಕೃತಿ, ಸಂಪ್ರದಾಯ, ಆಲೋಚನೆಗಳು, ಗಣ್ಯ ವ್ಯಕ್ತಿಗಳಿಗೆ ಅವಮಾನ ಮಾಡುವ ಎಲ್ಲ ಅಂಶಗಳನ್ನೂ ಕಿತ್ತುಹಾಕಬೇಕು ಎಂಬ ಶಿಾರಸನ್ನೂ ಮಾಡಲಾಗಿದೆ. ಎಸ್‌ಎಸ್‌ಯುಎನ್ ನಾಯಕರು ಈಗಾಗಲೇ ಸಚಿವ ಪ್ರಕಾಶ್ ಜಾವಡೇಕರ್‌ರನ್ನು ಭೇಟಿಯಾಗಿ ಈ ಕುರಿತ ಮನವಿ ಸಲ್ಲಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಶಿಕ್ಷಕರ, ಶಿಕ್ಷಣ ಸಂಸ್ಥೆಗಳ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸುವೆ: ಸಚಿವ ಮಧು ಬಂಗಾರಪ್ಪ
ಡಿಕೆಶಿ ಕುಂಡಲಿಯಲ್ಲಿ ಷಷ್ಠ ಸ್ಥಾನದಲ್ಲಿ ಶನಿ: ರಾಜಕೀಯ ಭವಿಷ್ಯವೇನು? CM ಖುರ್ಚಿ ಯಾರಿಗೆ? ಭೈರವಿ ಅಮ್ಮ ಸ್ಫೋಟಕ ನುಡಿ