ಕನಕದಾಸ ರಸ್ತೆಗೆ ನಡೆ ಸೀಮಿತ, ದಲಿತ ನಡೆಗೆ ಇಲ್ಲ ಅನುಮತಿ

Published : Oct 21, 2016, 05:07 PM ISTUpdated : Apr 11, 2018, 01:06 PM IST
ಕನಕದಾಸ ರಸ್ತೆಗೆ ನಡೆ ಸೀಮಿತ, ದಲಿತ ನಡೆಗೆ ಇಲ್ಲ ಅನುಮತಿ

ಸಾರಾಂಶ

ಯುವ ಬ್ರಿಗೇಡ್ ಮತ್ತು ಇತರ ಸಮಾನಮನಸ್ಕ ಸಂಘಟನೆಗಳು ಉಡುಪಿ ನಗರವನ್ನು ಸ್ವಚ್ಛಗೊಳಿಸುವ ಕನಕ ನಡೆ ಅಭಿಯಾನ ಕೇವಲ ನೂರಿನ್ನೂರು ಮೀಟರ್ ಉದ್ದದ ಕನಕದಾಸ ರಸ್ತೆಗಷ್ಟೇ ಸೀಮಿತವಾಗಿದೆ. ಈ ಅಭಿಯಾನಕ್ಕೆ ಪ್ರತಿಯಾಗಿ ಪ್ರಗತಿಪರರು ಮತ್ತು ದಮನಿತರು ಆಯೋಜಿಸಿದ್ದ ದಲಿತ ಸ್ವಾಭಿಮಾನ ನಡೆ ಕಾರ್ಯಕ್ರಮಕ್ಕೆ ಪೊಲೀಸ್ ಇಲಾಖೆಯಿಂದ ಅನುಮತಿ ಸಿಕ್ಕಿಲ್ಲ.

ಉಡುಪಿ(ಅ.21): ಉಡುಪಿಯಲ್ಲಿ ಭಾನುವಾರ ನಡೆಯಲಿದ್ದ ಎರಡು ಪ್ರತ್ಯೇಕ ಮತ್ತು ಪರಸ್ಪರ ವಿರೋಧಿ ಅಭಿಯಾನಗಳಿಂದ ಸಂಭವಿಸಬಹುದಾಗಿದ್ದ ಮುಖಾಮುಖಿಯ ಆತಂಕ ದೂರವಾಗಿದೆ.

ಯುವ ಬ್ರಿಗೇಡ್ ಮತ್ತು ಇತರ ಸಮಾನಮನಸ್ಕ ಸಂಘಟನೆಗಳು ಉಡುಪಿ ನಗರವನ್ನು ಸ್ವಚ್ಛಗೊಳಿಸುವ ಕನಕ ನಡೆ ಅಭಿಯಾನ ಕೇವಲ ನೂರಿನ್ನೂರು ಮೀಟರ್ ಉದ್ದದ ಕನಕದಾಸ ರಸ್ತೆಗಷ್ಟೇ ಸೀಮಿತವಾಗಿದೆ. ಈ ಅಭಿಯಾನಕ್ಕೆ ಪ್ರತಿಯಾಗಿ ಪ್ರಗತಿಪರರು ಮತ್ತು ದಮನಿತರು ಆಯೋಜಿಸಿದ್ದ ದಲಿತ ಸ್ವಾಭಿಮಾನ ನಡೆ ಕಾರ್ಯಕ್ರಮಕ್ಕೆ ಪೊಲೀಸ್ ಇಲಾಖೆಯಿಂದ ಅನುಮತಿ ಸಿಕ್ಕಿಲ್ಲ.

ಗೊಂದಲದ ಹಿನ್ನೆಲೆ: ಅ.9ರಂದು ಉಡುಪಿಯಲ್ಲಿ ರಾಜ್ಯಾದ್ಯಂತದಿಂದ ಬಂದ ದಲಿತರು ದಮನಿತರು ಪ್ರಗತಿಪರರು ‘ಆಹಾರ ನಮ್ಮ ಆಯ್ಕೆ, ಭೂಮಿ ನಮ್ಮ ಹಕ್ಕು’ ಎಂಬ ಘೋಷವಾಕ್ಯದೊಂದಿಗೆ ಚಲೋ ಉಡುಪಿ ಎಂಬ ಬೃಹತ್ ಸಮಾವೇಶವನ್ನು ನಡೆಸಿದ್ದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಉಡುಪಿ ಕೃಷ್ಣಮಠದ ಪಂಕ್ತಿಭೇದದ ವಿರುದ್ಧ ಉಗ್ರ ಮಾತುಗಳು ಕೇಳಿ ಬಂದಿದ್ದವು. ಇದರಿಂದ ಕೆರಳಿದ ಯುವ ಬ್ರಿಗೇಡ್ ಮತ್ತು ಇತರ ಸಂಘಟನೆಗಳು ‘ಕನಕ ನಡೆ’ ಎಂಬ ಕಾರ್ಯಕ್ರಮವನ್ನು ಘೋಷಿಸಿದವು. ಚಲೋ ಉಡುಪಿಯಿಂದ ಉಡುಪಿಯ ವಾತಾವರಣ ಕಲುಷಿತವಾಗಿದೆ, ಆದ್ದರಿಂದ ಅ.23ರಂದು ಉಡುಪಿಯಲ್ಲಿ ಗುಡಿಸಿ ಶುದ್ಧೀಕರಿಸುತ್ತೇವೆ ಎಂದು ಸಂಘಟಕರ ಆರಂಭದಲ್ಲಿ ಹೇಳಿದ್ದರು. ನಂತರ ನಮ್ಮದು ಕೇವಲ ಕಸ ಗುಡಿಸುವ ಕೆಲಸ ಅಷ್ಟೇ ಎಂದು ತಿದ್ದಿಕೊಂಡಿದ್ದರು.

ಚಲೋ ಉಡುಪಿ ಜಾಥಾ ನಡೆದ ರಸ್ತೆಗಳನ್ನು ಶುದ್ಧೀಕರಿಸುವ ಮೂಲಕ ಯುವ ಬ್ರಿಗೆಡ್ ಮತ್ತು ಬಲಪಂಥೀಯ ಸಂಘಟನೆಗಳು ಪ್ರತ್ಯಕ್ಷವಾಗಿ ಅಸ್ಪಶ್ಯತೆಯನ್ನು ಜಾರಿಗೊಳಿಸುತ್ತಿವೆ ಎಂದು ಆರೋಪಿಸಿ, ಅದರ ವಿರುದ್ಧ ದಲಿತ ಸ್ವಾಭಿಮಾನಿ ನಡೆ ಎಂಬ ಕಾರ್ಯಕ್ರಮವನ್ನು ಅ.23ರಂದೇ ನಡೆಸುವುದಾಗಿ ಚಲೋ ಉಡುಪಿ ಸಂಘಟಕರು ಘೋಷಿಸಿದ್ದರು. ಪೊಲೀಸ್ ಪರವಾನಗಿ ಪಡೆಯಲು ಹೋದ ದಲಿತ ನಡೆ ಸಂಘಟಕರಿಗೆ ಪರವಾನಗಿ ಸಿಕ್ಕಿಲ್ಲ.

ಈ ನಡುವೆ, ಚಲೋ ಉಡುಪಿ ಕಾರ್ಯಕ್ರಮದಲ್ಲಿ ದಲಿತರು ಮೆರವಣಿಗೆ ನಡೆಸಿದ ರಸ್ತೆಗಳನ್ನು ಗುಡಿಸಿದರೆ ಅಸ್ಪಶ್ಯತೆ ಕಾಯ್ದೆಯನ್ವಯ ಕ್ರಮ ತೆಗೆದುಕೊಳ್ಳುವುದಾಗಿ ಪೊಲೀಸ್ ಇಲಾಖೆ ಕನಕ ನಡೆ ಸಂಘಟಕರಿಗೆ ಎಚ್ಚರಿಸಿದ್ದಾರೆ. ಆದ್ದರಿಂದ ಸಂಘಟಕರು ಈ ಮೆರವಣಿಗೆ ನಡೆಯದಿದ್ದ ಕನಕದಾಸ ರಸ್ತೆಯಲ್ಲಿ ಮತ್ತು ಉಡುಪಿ ರಥಬೀದಿಯಲ್ಲಷ್ಟೇ ಗುಡಿಸಲು ನಿರ್ಧರಿಸಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಭಟ್ಕಳ ತಹಸೀಲ್ದಾರ್ ಕಚೇರಿಗೆ ಬಾಂಬ್ ಬೆದರಿಕೆ: ಇಮೇಲ್‌ನಲ್ಲಿ ಡಿಎಂಕೆ ವಿರುದ್ಧ ಅಸಂಬದ್ಧ ಆರೋಪ
ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ಅಪಘಾತ: 7 ಬಸ್ 3 ಕಾರುಗಳ ಮಧ್ಯೆ ಸರಣಿ ಅಪಘಾತ : ನಾಲ್ವರು ಬೆಂಕಿಗಾಹುತಿ