ನ್ಯಾಷನಲ್ ಹೆರಾಲ್ಡ್ ವಿರುದ್ಧ ಮತ್ತೆ ಕೋರ್ಟ್ ಮೆಟ್ಟಿಲೇರಿದ ಸುಬ್ರಮಣಿಯನ್ ಸ್ವಾಮಿ: ಗಾಂಧಿ ಕುಟುಂಬದಲ್ಲಿ ನಡುಕ

Published : Jan 20, 2018, 07:40 PM ISTUpdated : Apr 11, 2018, 01:13 PM IST
ನ್ಯಾಷನಲ್ ಹೆರಾಲ್ಡ್ ವಿರುದ್ಧ ಮತ್ತೆ ಕೋರ್ಟ್ ಮೆಟ್ಟಿಲೇರಿದ ಸುಬ್ರಮಣಿಯನ್ ಸ್ವಾಮಿ: ಗಾಂಧಿ ಕುಟುಂಬದಲ್ಲಿ ನಡುಕ

ಸಾರಾಂಶ

ಎಐಸಿಸಿ ಅಧ್ಯಕ್ಷರಾಗಿ ಭಾರಿ ಹುಮ್ಮಸ್ಸಿನಿಂದ ರಾಹುಲ್​ ಗಾಂಧಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್​ ಸ್ವಾಮಿ ಹೊಸ ಬಾಂಬ್​ ನಿಂದಾಗಿ ಗಾಂಧಿ ಕುಟುಂಬದಲ್ಲಿ ನಡುಕ ಶುರುವಾಗಿದೆ.  

ನವದೆಹಲಿ (ಜ.20): ಎಐಸಿಸಿ ಅಧ್ಯಕ್ಷರಾಗಿ ಭಾರಿ ಹುಮ್ಮಸ್ಸಿನಿಂದ ರಾಹುಲ್​ ಗಾಂಧಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್​ ಸ್ವಾಮಿ ಹೊಸ ಬಾಂಬ್​ ನಿಂದಾಗಿ ಗಾಂಧಿ ಕುಟುಂಬದಲ್ಲಿ ನಡುಕ ಶುರುವಾಗಿದೆ.  

ರಾಹುಲ್​ ಗಾಂಧಿ ಇತ್ತೀಚೆಗೆ ವಿವಿಧ ರಾಜ್ಯಗಳ ಟೆಂಪಲ್​ ರನ್​ ಮೂಲಕ ಅಧಿಕಾರ ಹಿಡಿಯಲು ಶ್ರಮಿಸುತ್ತಿದ್ದು, ಆದ್ರೆ ಸುಬ್ರಮಣಿಯನ್ ಸ್ವಾಮಿ ತೆರಿಗೆ ವಂಚನ ಆರೋಪದಿಂದ ದೇಶಾದ್ಯಂತ ಗಾಂಧಿ ಕುಟುಂಬಕ್ಕೆ ಮುಜುಗರ ಉಂಟಾಗಿದೆ.

ನ್ಯಾಷನಲ್ ಹೆರಾಲ್ಡ್​ ಪ್ರಕರಣ ದೇಶಾದ್ಯಂತ ಭಾರಿ ಸುದ್ದಿಗೆ ಗ್ರಾಸವಾಗಿತ್ತು.. ಸ್ವಾತಂತ್ರ ಸೇನಾನಿಗಳಿಂದಲೇ ಅಸೋಸಿಯೇಟೆಡ್ ಜರ್ನಲ್ಸ್ ಕಂಪನಿಯನ್ನು ಸೋನಿಯಾ, ರಾಹುಲ್​ ಗಾಂಧಿ ಯಂಗ್ ಇಂಡಿಯಾ ಸಂಸ್ಥೆ ಮೂಲಕ ದೆಹಲಿ , ಉತ್ತರ ಪ್ರದೇಶದಲ್ಲಿದ್ದ  2000 ಕೋಟಿ ಆಸ್ತಿಯನ್ನು ಕಬಳಿಸಿದ್ದಾರೆ ಎಂದು ರಾಜ್ಯಸಭಾ ಸದಸ್ಯ ಸುಬ್ರಮಣಿಯನ್​ ದೆಹಲಿ ಕೋರ್ಟ್​ನಲ್ಲಿ ದೂರು ದಾಖಲಿಸಿದ್ದರು.  ನಂತರ ವಿಚಾರಣೆಯಿಂದ ರಾಹುಲ್, ಸೋನಿಯಾ ಜಾಮೀನು ಪಡೆದು ನಿಟ್ಟುಸಿರು ಪಡೆದಿದ್ದರು.  ಆದರೆ ಈಗ ಸ್ವಾಮಿ ಹೊಸ ಬಾಂಬ್​ ಸಿಡಿಸಿದ್ದು, ಕಾಂಗ್ರೆಸ್ಸಿಗರಲ್ಲಿ ನಡುಕ ಶುರುವಾಗಿದೆ.. ನ್ಯಾಷನಲ್​ ಹೆರಾಲ್ಡ್​  2000 ಕೋಟಿ ರೂಪಾಯಿ ಆಸ್ತಿಯಲ್ಲಿ ಗಾಂಧಿ ಕುಟುಂಬ ಭಾರಿ ಪ್ರಮಾಣದ ತೆರಿಗೆ ವಂಚನೆ ಮಾಡಿದ್ದಾರೆ ಎಂದು ಕೋರ್ಟ್​ ಮೆಟ್ಟಿಲೇರಿದ್ದಾರೆ..

ಗಾಂಧಿ ಕುಟುಂಬದ ವಿರುದ್ಧ  ತೆರಿಗೆ ವಂಚನೆಯ 105 ಪುಟಗಳ ದಾಖಲೆಯನ್ನು ಮುಚ್ಚಿದ ಲಕೋಟೆಯಲ್ಲಿ ಸುಬ್ರಮಣಿಯನ್​ ಸ್ವಾಮಿ ಸಲ್ಲಿಸಿದ್ದು, ಈ ಅರ್ಜಿ ವಿಚಾರಣೆಯನ್ನು ಮಾರ್ಚ್​ 17ಕ್ಕೆ ನ್ಯಾಯಾಲಯ ಮುಂದೂಡಿದ್ದು, ಎಲ್ಲರಲ್ಲಿ ಕುತೂಹಲ ಹೆಚ್ಚಿಸಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Breaking ಸ್ಮೋಕ್ ಬಾಂಬ್ ಎಸೆದು ಸಿಕ್ಕ ಸಿಕ್ಕವರಿಗೆ ಚಾಕು ಇರಿದ ದುಷ್ಕರ್ಮಿ, 3 ಸಾವು, ಐವರು ಗಂಭೀರ
ಶಕ್ತಿಯಡಿ ಸರ್ಕಾರದಿಂದ ಸಾರಿಗೆ ನಿಗಮಕ್ಕೆ ₹4000 ಕೋಟಿ ಬಾಕಿ: ಸಚಿವ ರಾಮಲಿಂಗಾರೆಡ್ಡಿ