
ಬೆಂಗಳೂರು(ಡಿ.02): ನಮ್ಮ ಸರ್ಕಾರ ಸದಾ ಕನ್ನಡಕ್ಕೆ ಆದ್ಯತೆ ನೀಡುತ್ತದೆ ಎನ್ನುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ದ್ವಿಮುಖ ನೀತಿ ವ್ಯಕ್ತವಾಗಿದೆ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಮುಂದಿನ 15 ವರ್ಷಗಳ ಅಭಿವೃದ್ಧಿ ಯೋಜನೆಗಾಗಿ ಸಿದ್ದಪಡಿಸಿರುವ ಆರ್'ಎಂಪಿ 2031- ಪರಿಷ್ಕೃತ ಮಹಾ ಯೋಜನೆ ಪ್ರತಿ ಕನ್ನಡದಲ್ಲಿಲ್ಲ. ಬಿಡಿಎ ಸಿಬ್ಬಂದಿ ಇಂಗ್ಲಿಷ್'ನಲ್ಲಿ ಪ್ರಕಟಿಸಿ ಪ್ರಾಧಿಕಾರದ ವೆಬ್'ಸೈಟ್'ನಲ್ಲಿ ಕೂಡ ಇಂಗ್ಲಿಷ್'ನಲ್ಲಿ ಲಭ್ಯವಿದೆ.
ನಾಮಕವಸ್ತೆಗೆ ಗೆಜೆಟ್ ನೋಟಿಫಿಕೇಷನ್ ಮಾತ್ರ ಕನ್ನಡದಲ್ಲಿ ಪ್ರಕಟಿಸಿದ್ದು, 800 ಪುಟಗಳ ಮಾಹಿತಿ ಇಂಗ್ಲಿಷ್'ನಲ್ಲಿ ಪ್ರಕಟಿಸಲಾಗಿದೆ. ನಗರ ಯೋಜನಾ ತಜ್ಞರು,ಸಾಮಾನ್ಯರು ಭಾಷಾ ತಾರತಮ್ಯ ಮಾಡುತ್ತಿರುವ ಬಿಡಿಎಗೆ ಬೆಂಗಳೂರು ಅಭಿವೃದ್ಧಿಯ ಬಗ್ಗೆ ನಿಜವಾದ ಕಾಳಜಿ ಇದೆಯಾ ಎಂದು ಪ್ರಶ್ನಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.