ಭಾರತಕ್ಕೆ ಹಿಂದೂ ರಾಷ್ಟ್ರೀಯತೆ ಅಪಾಯ: ಅಮೆರಿಕ ವರದಿ ಯಾರ ‘ಉಪಾಯ’?

Published : Sep 15, 2018, 11:59 AM ISTUpdated : Sep 19, 2018, 09:26 AM IST
ಭಾರತಕ್ಕೆ ಹಿಂದೂ ರಾಷ್ಟ್ರೀಯತೆ ಅಪಾಯ: ಅಮೆರಿಕ ವರದಿ ಯಾರ ‘ಉಪಾಯ’?

ಸಾರಾಂಶ

ಭಾರತದಲ್ಲಿ ಹೆಚ್ಚುತ್ತಿರುವ ಹಿಂದೂ ರಾಷ್ಟ್ರೀಯತೆ! ಭಾರತದ ಜಾತ್ಯಾತೀತ ಸ್ವರೂಪ ನಾಶದ ಭಯ! ಅಮೆರಿಕದ ಕಾಂಗ್ರೆಸ್ ವರದಿಯಲ್ಲಿ ಎಚ್ಚರಿಕೆಯ ಸಂದೇಶ! ಸಾಮಾಜಿಕ ಜಾಲತಾಣಗಳು ಬಹುಸಂಖ್ಯಾತರ ಹಿಂಸಾಚಾರಕ್ಕೆ ಪೂರಕ! ಭಾರತದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ  ದೌರ್ಜನ್ಯ? 

ವಾಷಿಂಗ್ಟನ್(ಸೆ.15): ಇದೊಂದು ತರಾ ತನ್ನ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದ್ದರೂ, ಪಕ್ಕದ ತಟ್ಟೆಯಲ್ಲಿ ನೊಣ ಬಿದ್ದಿರುವುದನ್ನು ಗಮನಿಸದಂತೆ ಆಯ್ತು. ಅಮೆರಿಕದಲ್ಲಿ ನಿತ್ಯವೂ ಭಾರತೀಯರು ಮತ್ತು ಕಪ್ಪು ಜನಾಂಗದವರ ಮೇಲೆ ಹಲ್ಲೆಗಳು ನಡೆಯುತ್ತಿದ್ದರೂ, ಭಾರತದಲ್ಲಿ ಅಲ್ಲೊಂದು ಇಲ್ಲೊಂದು ಹಲ್ಲೆ ಪ್ರಕರಣಗಳನ್ನು ಅಮೆರಿಕ ದೊಡ್ಡದು ಮಾಡುತ್ತಿದೆ. 

ಭಾರತದಲ್ಲಿ ಹಿಂದೂ ರಾಷ್ಟ್ರೀಯತೆ ಎಂಬುದು ರಾಜಕೀಯ ಶಕ್ತಿಯಾಗಿ ಪರಿವರ್ತನೆಯಾಗುತ್ತಿದ್ದು, ಭಾರತದ ಜಾತ್ಯಾತೀತ ಸ್ವರೂಪವನ್ನು ನಾಶ ಮಾಡುತ್ತಿದೆ ಎಂದು ಅಮೆರಿಕದ ಕಾಂಗ್ರೆಸ್ ಆತಂಕ ವ್ಯಕ್ತಪಡಿಸಿದೆ. ಈ ಕುರಿತು ವರದಿ ಸಿದ್ದಪಡಿಸಿರುವ ಅಮೆರಿಕದ ಕಾಂಗ್ರೆಸ್, ಸಾಮಾಜಿಕ ಜಾಲತಾಣಗಳು ಬಹುಸಂಖ್ಯಾತರು ನಡೆಸುತ್ತಿರುವ ಹಿಂಸಾಚಾರಕ್ಕೆ ಪೂರಕವಾಗಿದೆ ಎಂದು ಎಚ್ಚರಿಕೆ ನೀಡಿದೆ. 

ಕಾಂಗ್ರೆಶನಲ್ ರಿಸರ್ಚ್ ಸರ್ವಿಸ್ ಈ ಬಗ್ಗೆ ವರದಿ ಪ್ರಕಟಿಸಿದ್ದು, ಧಾರ್ಮಿಕತೆಯಿಂದ ಉತ್ತೇಜನಗೊಂಡ ಹಿಂಸಾಚಾರ, ಸರ್ಕಾರದ ಮತಾಂತರ ನಿಷೇಧ ಕಾಯ್ದೆ,  ಗೋ ರಕ್ಷಣೆ ಹೆಸರಿನಲ್ಲಿ ಸರ್ಕಾರೇತರ ಸಂಸ್ಥೆಗಳು  ನಡೆಸುತ್ತಿರುವ ಹಿಂಸಾಚಾರ, ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ದೌರ್ಜನ್ಯಗಳು ಭಾರತದ ಜಾತ್ಯಾತೀತತೆಯ ಸ್ವರೂಪಕ್ಕೆ ಧಕ್ಕೆ ಉಂಟುಮಾಡುತ್ತಿವೆ ಎಂದು ತೀವ್ರ ಆತಂಕ ವ್ಯಕ್ತಪಡಿಸಲಾಗಿದೆ.

ಸಿಆರ್ ಎಸ್ ಅಮೆರಿಕದ ಕಾಂಗ್ರೆಸ್ ನ ಅಧಿಕೃತ ವರದಿ ಅಥವಾ, ಅಲ್ಲಿನ ಸಂಸದರ ಅಭಿಪ್ರಾಯವನ್ನೂ ಬಿಂಬಿಸುವುದಿಲ್ಲ. ತಜ್ಞರ ಅಭಿಪ್ರಾಯ ಪಡೆದು ಸಂಸದರಿಗೆ ನಿರ್ದಿಷ್ಟ ವಿಚಾರಗಳಲ್ಲಿ ತೀರ್ಮಾನ ಕೈಗೊಳ್ಳುವುದಕ್ಕೆ ಸಹಕಾರಿಯಾಗಲೆಂದು ಈ ವರದಿಗಳನ್ನು ಸಿದ್ಧಪಡಿಸಲಾಗಿರುತ್ತದೆ. ಭಾರತ ಕುರಿತ ಈ ವರದಿ ಭಾರತ: ಧಾರ್ಮಿಕ ಸ್ವಾತಂತ್ರ್ಯ ವಿಷಯಗಳು (India: Religious Freedom issues) ಎಂಬ ಶೀರ್ಷಿಕೆಯಡಿ ಪ್ರಕಟವಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೊಂಡಿ ಬೀಚ್‌ನಲ್ಲಿ ಯಹೂದಿಯರ ಹಬ್ಬದಲ್ಲಿ ರಕ್ತಪಾತಗೈದ ಹಂತಕ ಭಾರತೀಯ: ಹೈದರಾಬಾದ್ ಓಲ್ಡ್ ಸಿಟಿಯಿಂದ ವಲಸೆ ಹೋದವ
'ಮಾದೇಶ್ವರ ದಯಬಾರದೆ..' ಯೂಟ್ಯೂಬ್‌ನಲ್ಲಿ ಟ್ರೆಂಡ್‌ ಆದ ತೇಜಸ್ವಿ ಸೂರ್ಯ ಪತ್ನಿ ಶಿವಶ್ರೀ ಸ್ಕಂದಪ್ರಸಾದ್‌ ಹಾಡು!