ಫೇಸ್'ಬುಕ್'ನಲ್ಲಿ ಕಮೆಂಟ್ ಮಾಡಿದ್ದಕ್ಕೆ ಬಿಜೆಪಿ ಶಾಸಕರೊಬ್ಬರ ಗ್ಯಾಂಗ್'ನಿಂದ ಯುವಕನಿಗೆ ಥಳಿತ

Published : Jan 09, 2017, 06:25 AM ISTUpdated : Apr 11, 2018, 12:42 PM IST
ಫೇಸ್'ಬುಕ್'ನಲ್ಲಿ ಕಮೆಂಟ್ ಮಾಡಿದ್ದಕ್ಕೆ ಬಿಜೆಪಿ ಶಾಸಕರೊಬ್ಬರ ಗ್ಯಾಂಗ್'ನಿಂದ ಯುವಕನಿಗೆ ಥಳಿತ

ಸಾರಾಂಶ

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಉಗಾರ ಗ್ರಾಮದಲ್ಲಿ ವಿವೇಕ್ ಶೆಟ್ಟಿ ಮೇಲೆ ಹಲ್ಲೆ ನಡೆಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿವೆ. ಗಂಭೀರವಾಗಿ ಗಾಯಗೊಂಡಿರುವ ವಿವೇಕ್ ಶೆಟ್ಟಿಯನ್ನು ಅಥಣಿಯ ಮಿರಜ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೆಳಗಾವಿ(ಜ. 09): ಸಾಮಾಜಿಕ ಜಾಲತಾಣದಲ್ಲಿ ಕಮೆಂಟ್ ಮಾಡಿದ್ದಕ್ಕೆ ಬಿಜೆಪಿ ಶಾಸಕ ರಾಜು ಕಾಗೆಯವರ ಕುಟುಂಬದವರು ಮತ್ತು ಬೆಂಬಲಿಗರು ಯುವಕನೊಬ್ಬನಿಗೆ ಹಿಗ್ಗಾಮುಗ್ಗ ಥಳಿಸಿದ ಘಟನೆ ನಡೆದಿದೆ. ಜ.1ರಂದೇ ಘಟನೆ ನಡೆದಿದ್ದರೂ ತಡವಾಗಿ ಬೆಳಕಿಗೆ ಬಂದಿದೆ. ಜಿಲ್ಲೆಯ ಅಥಣಿ ತಾಲೂಕಿನ ಉಗಾರ ಗ್ರಾಮದಲ್ಲಿ ವಿವೇಕ್ ಶೆಟ್ಟಿ ಮೇಲೆ ಹಲ್ಲೆ ನಡೆಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿವೆ. ಗಂಭೀರವಾಗಿ ಗಾಯಗೊಂಡಿರುವ ವಿವೇಕ್ ಶೆಟ್ಟಿಯನ್ನು ಅಥಣಿಯ ಮಿರಜ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ರಾಜಕೀಯ ವೈಷಮ್ಯವೇ?
ಉಗಾರ ಗ್ರಾಮದ ನಿವಾಸಿಯಾದ ವಿವೇಕ್ ಶೆಟ್ಟಿ ಕಾಂಗ್ರೆಸ್ ಕಾರ್ಯಕರ್ತನಾಗಿದ್ದು ಬಿಜೆಪಿ ಶಾಸಕ ರಾಜು ಕಾಗೆಯವರ ಕಡುವಿರೋಧಿ ಎನ್ನಲಾಗಿದೆ. ಫೇಸ್ಬುಕ್'ನಲ್ಲಿ ಈತ ಕೆಟ್ಟದಾಗಿ ಕಮೆಂಟ್ ಮಾಡಿದನೆಂಬ ಆರೋಪವಿದೆ. ಅಲ್ಲದೇ ರಾಜು ಕಾಗೆಯವರ ಪುತ್ರಿ ಉರ್ಫ ಪುಟ್ಟಿ ಅವರಿಗೆ ವಾಟ್ಸಾಪ್'ನಲ್ಲಿ ಕೆಟ್ಟ ಸಂದೇಶವನ್ನೂ ಕಳುಹಿಸಿದ್ದನೆನ್ನಲಾಗಿದೆ. ಈ ಹಿನ್ನೆಲೆಯಲ್ಲಿ ರಾಜು ಕಾಗೆಯವರ ಪುತ್ರಿ ಉರ್ಫ ಪುಟ್ಟ, ಅವರ ಸೋದರ ಶಿವಗೌಡ ಕಾಗೆ ಹಾಗೂ ಬೆಂಬಲಿಗರು ಬಡಿಗೆ, ಕುಡುಗೋಲು ಮೊದಲಾದ ಮಾರಕಾಸ್ತ್ರಗಳನ್ನ ಹಿಡಿದು ಉಗಾರ ಗ್ರಾಮದಲ್ಲಿರುವ ವಿವೇಶ್ ಶೆಟ್ಟಿ ಮನೆಗೆ ನುಗ್ಗುತ್ತಾರೆ. ಬಳಿಕ ಆತನನ್ನು ಮನೆಯಿಂದ ಕೆಳಗಡೆಗೆ ಮೆಟ್ಟಿಲಿನಲ್ಲಿ ಧರಧರನೇ ಎಳೆದುಕೊಂಡು ಹೋಗುತ್ತಾರೆ. ರಾಜು ಕಾಗೆಯವರ ಮನೆಗೆ ಆತನನ್ನು ಕರೆದುಕೊಂಡು ಹೋಗಿ ಥಳಿಸುತ್ತಾರೆ.

ಬಿಜೆಪಿ ಮುಖಂಡರಾದ ರಾಜು ಕಾಗೆ ಅವರು ಕಾಗವಾಡ ಕ್ಷೇತ್ರದ ಶಾಸಕರಾಗಿದ್ದಾರೆ. ಪ್ರಕರಣದ ಇದೀಗ ಬೆಳಕಿಗೆ ಬಂದಿದ್ದು, ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಂಧರ ವಿಶ್ವಕಪ್ ಹೀರೋಯಿನ್ಸ್‌ಗಳಿಗೆ ದೊಡ್ಮನೆಯಿಂದ ಗೌರವ: ರಾಜ್ ಕುಟುಂಬದ ಆತಿಥ್ಯಕ್ಕೆ ಮೈಮರೆತ ಚಾಂಪಿಯನ್ನರು!
Vastu Shastra: ನೆನಪಿಡಿ, ಅದೃಷ್ಟ ಕೈಹಿಡಿಯಲು ದೇವಸ್ಥಾನಕ್ಕೆ ಈ ಮೂರು ವಸ್ತುಗಳನ್ನ ಗುಟ್ಟಾಗಿ ದಾನ ಮಾಡ್ಬೇಕು!