ಮಾಯಾ-ಮೋಹನ್ ಜಂಗಿಕುಸ್ತಿ.... ಇಬ್ಬರ ಹೇಳಿಕೆ ತೂಕಕ್ಕೆ ಹಾಕಿ

Published : Aug 19, 2019, 05:43 PM ISTUpdated : Aug 19, 2019, 06:11 PM IST
ಮಾಯಾ-ಮೋಹನ್ ಜಂಗಿಕುಸ್ತಿ.... ಇಬ್ಬರ ಹೇಳಿಕೆ ತೂಕಕ್ಕೆ ಹಾಕಿ

ಸಾರಾಂಶ

ಮತ್ತೆ ಸಂವಿಧಾನ ಮತ್ತು ಮೀಸಲಾತಿ ವಿಚಾರ ಚರ್ಚೆಗೆ ಬಂದಿದೆ. ಆರ್ ಎಸ್ ಎಸ್ ಹೇಳಿಕೆಗೆ ಬಿಎಸ್ ಪಿ ನಾಯಕಿ ಮಾಯಾವತಿ ತಿರುಗೇಟು ನೀಡಿದ್ದಾರೆ.

ನವದೆಹಲಿ[ಆ. 19]  ರಾಷ್ಟ್ರೀಯ ಸ್ವಯಂ ಸೇವಕ ಸಂಘ [ಆರ್ ಎಸ್ ಎಸ್] ಮೀಸಲಾತಿ ವಿರೋಧಿ ನೀತಿಯಿಂದ ಮೊದಲು ಹೊರಬರಬೇಕು ಎಂದು ಬಹುಜನ ಸಮಾಜ ಪಾರ್ಟಿ ವರಿಷ್ಠೆ ಮಾಯಾವತಿ ಹೇಳಿದ್ದಾರೆ.

ಮೀಸಲಾತಿ ವ್ಯವಸ್ಥೆ ಬಗ್ಗೆ ಆರ್ ಎಸ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಮಾಡಿದ್ದ ಕಮೆಂಟ್ ನಂತರ ಮಾಯಾವತಿ ಮಾತನಾಡಿದ್ದಾರೆ.  ಎಸ್‌ ಸಿ ಮತ್ತು ಎಸ್ ಟಿ ಹಾಗೂ ಒಬಿಸಿಗೆ ನೀಡಿರುವ ಮೀಸಲಾತಿ ಬಗ್ಗೆ ಆರ್ ಎಸ್ ಎಸ್ ಮುಕ್ತ ಚರ್ಚೆಗೆ ಸಿದ್ಧವಿದೆ ಎಂದು ಹೇಳಿಕೊಳ್ಳುತ್ತಿದೆ. ಆದರೆ ಅದರ ಅಗತ್ಯವೇ ಇಲ್ಲ ಎಂದು ಮಾಯಾವತಿ ಹೇಳಿದ್ದಾರೆ.

ಮೋದಿ ಸರ್ಕಾರ್ ದಿಟ್ಟ ಕ್ರಮವನ್ನು ಹಾಡಿ ಹೊಗಳಿದ ಆರ್ ಎಸ್ ಎಸ್

ಸಾಮಾಜಿಕವಾಗಿ ತುಳಿತಕ್ಕೆ ಒಳಗಾದವರಿಗೆ ಮಾನವೀಯತೆ ಆಧಾರದಲ್ಲಿ ನೀಡಿರುವ ಸವಲತ್ತು ಇದಾಗಿದೆ ಎಂದು ಉತ್ತರ ಪ್ರದೇಶದ ಮಾಜಿ ಸಿಎಂ ಮಾಯಾವತಿ ಅಭಿಪ್ರಾಯ ಪಟ್ಟಿದ್ದಾರೆ.

ಮೀಸಲಾತಿ ಪರ ಇರುವವರು ಮತ್ತು ವಿರೋಧಿಸುವವರ ನಡುವೆ ಸೌಹಾರ್ದಯುತ ವಾತಾವರಣದಲ್ಲಿ ಅರ್ಥಪೂರ್ಣ ಚರ್ಚೆ ನಡೆಯಬೇಕು ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌  ಹೇಳಿದ್ದರು.

ಈ ಹಿಂದೆ ನಾನು ಮೀಸಲಾತಿ ಬಗ್ಗೆ ಮಾತನಾಡಿದಾಗ , ಅನಗತ್ಯ ಪ್ರತಿಕ್ರಿಯೆಗಳ ಮೂಲಕ ಇಡೀ ಚರ್ಚೆಯ ದಿಕ್ಕನ್ನೇ ಬದಲಾಯಿಸಲಾಯಿತು. ಮೀಸಲಾತಿ ಬೇಡ ಎನ್ನುವವರು ಮೀಸಲಾತಿ ಪಡೆಯುತ್ತಿರುವವರು ಹಾಗೂ ಅದರ ಪರವಾಗಿರುವವರ ಇಂಗಿತವನ್ನು ಅರ್ಥೈಸಿಕೊಂಡು ನಂತರ ಮಾತನಾಡಬೇಕು. ಮೀಸಲಾತಿ ಬೇಕು ಎನ್ನುವವರು ಕೂಡ ವಿರೋಧಿಸುವವರ ಮನದ ಇಂಗಿತವನ್ನು ಮೊದಲು ತಿಳಿಯಬೇಕಿದೆ ಎಂದು ಭಾಗವತ್ ನೀಡಿದ್ದ ಹೇಳಿಕೆಯ ದಿನದ ನಂತರ ಮಾಯಾವತಿ ಮಾತನಾಡಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬಾಬ್ರಿ ಮಸೀದಿಗೆ ಅಡಿಗಲ್ಲು ವಿವಾದ ಬೆನ್ನಲ್ಲೇ ಬಂಗಾಳದಲ್ಲಿ 5 ಲಕ್ಷ ಹಿಂದೂಗಳಿಂದ ಭಗವದ್ಗೀತೆ ಪಠಣ
ಕಾಂಗ್ರೆಸ್ ಸರ್ಕಾರ ಶೇ.60ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ: ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಪ