
ಚೆನ್ನೈ [ಜೂನ್ 20] ಮದ್ರಾಸ್ ಹೖಕೋರ್ಟ್ ಮಹತ್ವದ ತೀರ್ಪು ನೀಡಿದ್ದು ಧರ್ಮ ಅಥವಾ ಧರ್ಮದ ಆಚರಣೆ ಹೆಸರಿನಲ್ಲಿ ಯಾವುದೆ ವ್ಯಕ್ತಿಗೆ ಕಿರುಕುಳ ಅಥವಾ ದೈಹಿಕ ಹಿಂಸೆ ನೀಡಿದರೆ ಅಂಥವರು ಶಿಕ್ಷಗೆ ಗುರಿಯಾಗಬೇಕಾಗುತ್ತದೆ ಎಂದಿದೆ.
ಯಾವುದೇ ಧರ್ಮದಲ್ಲಿ ವ್ಯಕ್ತಿಯೋರ್ವನಿಗೆ ನೋವಾಗುವ ಅಥವಾ ಅವನ ಗೌರವಕ್ಕೆ ಧಕ್ಕೆ ಉಂಟಾಗುವ ಆಚಾರಗಳನ್ನು ಅಮಾನವೀಯ ಎಂದು ಪರಿಗಣಿಸಬೇಕು ಎಂದು ನ್ಯಾಯಮೂರ್ತಿ ಆನಂದ್ ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ.
2001ರಲ್ಲಿ ನಾಲ್ವರು ಮಹಿಳೆಯರು ಸೊಸೆಯ ಮೇಲೆ ನಡೆಸಿದ ಭೂತೋಚ್ಛಾಟನೆ ಕಾರ್ಯದ ಕುರಿತ ಅರ್ಜಿ ವಿಚಾರಣೆ ಮಾಡಿದ ನ್ಯಾಯಾಲಯ ಮಹತ್ವದ ಆದೇಶ ನೀಡಿದೆ. ತಮಿಳುನಾಡಿನ ಧರ್ಮಪುರಿ ಜಿಲ್ಲೆಯಲ್ಲಿ ಮಹಿಳೆಯೊಬ್ಬರ ದೇಹದಲ್ಲಿ ದೆವ್ವ ಹೊಕ್ಕಿದೆ ಎಂದು ಆರೋಪಿಸಿದ್ದ ನಾಲ್ವರು ಮಹಿಳೆಯರು ಆಕೆಯನ್ನು ಕೆರೆಯೊಂದರ ಬಳಿ ಕರೆದುಕೊಂಡು ಹೋಗಿ ತಲೆ ಬೋಳಿಸಿದ್ಇದರು. ಇದಾದ ಮೇಲೆ ಆಕೆಯ ನಾಲಗೆಗೂ ಹಾನಿ ಮಾಡಿ ಆಕೆಯ ಗಂಡನಿಂದಲೇ ಇನ್ನೊಮ್ಮೆ ತಾಳಿ ಕಟ್ಟಿಸಲಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.