ಪೊಲೀಸರಿಗೆ ಭಾರಿ ನಿರಾಸೆ ತಂದ ಶಿಫಾರಸ್ಸು

Published : Nov 18, 2016, 09:53 AM ISTUpdated : Apr 11, 2018, 01:07 PM IST
ಪೊಲೀಸರಿಗೆ ಭಾರಿ ನಿರಾಸೆ ತಂದ ಶಿಫಾರಸ್ಸು

ಸಾರಾಂಶ

ಪೊಲೀಸ್ ವೇತನ ಹೆಚ್ಚಳಕ್ಕೆ ಯಾವುದೇ ಕ್ರಮ ಕೈಗೊಳ್ಳದ ಸರ್ಕಾರ ಸಮಿತಿಯ ಶಿಫಾರಸುಗಳತ್ತ ಕಣ್ಣೆತ್ತಿಯೂ ನೋಡಿಲ್ಲ. ವೇತನ ಹೆಚ್ಚಳದ ನಿರೀಕ್ಷೆಯಲ್ಲಿದ್ದ ಪೊಲೀಸರಿಗೆ ಸಂಪೂರ್ಣ ನಿರಾಸೆಯಾಗಿದೆ..

ಬೆಂಗಳೂರು(ನ.18): ತೀವ್ರ ನಿರೀಕ್ಷೆ ಹುಟ್ಟಿಸಿದ್ದ ಪೊಲೀಸರ ವೇತನ ಮತ್ತೊಮ್ಮೆ ಹುಸಿಯಾಗಿದೆ. ಯಾಕಂದರೆ ರಾಜ್ಯ ಸರ್ಕಾರ ಪೊಲೀಸರ ಮೂಗಿಗೆ ತುಪ್ಪು ಸವರಿದೆ. ಪೊಲೀಸರ ವೇತನ ಹೆಚ್ಚಳ ಮಾಡದೇ, ಕೇವಲ ಭತ್ಯೆ ಹೆಚ್ಚಳ ಮಾಡಿದೆ. ನಿರ್ವಹಣಾ ಭತ್ಯೆ 600 ರೂ.ಗೆ ಹೆಚ್ಚಳ ಮಾಡಿದೆ. ಇದು ಕಾನ್ಸ್​ಟೇಬಲ್​​​ನಿಂದ ಸಬ್​​ಇನ್ಸ್​ಪೆಕ್ಟರ್​​​ವರೆಗೂ ಭತ್ಯೆ ಅನ್ವಯವಾಗಲಿದೆ. ಅಚ್ಚರಿ ಅಂದ್ರೆ ವೇತನ ಹೆಚ್ಚಳಕ್ಕೆ ರಾಘವೇಂದ್ರ ಔರಾದ್ಕರ್ ಸಮಿತಿ ನೇಮಕ ಮಾಡಿತ್ತು. ಆದ್ರೆ, ಆ ಸಮಿತಿಯ ಎಲ್ಲ ಶಿಫಾರಸುಗಳನ್ನು ಸರ್ಕಾರ ತಳ್ಳಿಹಾಕಿದೆ. ಪೊಲೀಸ್ ವೇತನ ಹೆಚ್ಚಳಕ್ಕೆ ಯಾವುದೇ ಕ್ರಮ ಕೈಗೊಳ್ಳದ ಸರ್ಕಾರ ಸಮಿತಿಯ ಶಿಫಾರಸುಗಳತ್ತ ಕಣ್ಣೆತ್ತಿಯೂ ನೋಡಿಲ್ಲ. ವೇತನ ಹೆಚ್ಚಳದ ನಿರೀಕ್ಷೆಯಲ್ಲಿದ್ದ ಪೊಲೀಸರಿಗೆ ಸಂಪೂರ್ಣ ನಿರಾಸೆಯಾಗಿದೆ..

ಪೊಲೀಸರ ವೇತನದಲ್ಲಿ ಕರ್ನಾಟಕಕ್ಕೆ 9ನೇ ಸ್ಥಾನ

ಬೇರೆ ರಾಜ್ಯದ ಪೊಲೀಸರಿಗೂ, ನಮ್ಮ ರಾಜ್ಯದ ಪೊಲೀಸರಿಗೂ ಸಂಬಳದಳದಲ್ಲಿ ವ್ಯತ್ಯಾಸ ಎಷ್ಟಿದೆ ಅಂತಾ ನೋಡಿದ್ರೆ, ನಮ್ ಪೊಲೀಸರು ಇಷ್ಟು ಕಡಿಮೆ ಸಂಬಳಕ್ಕೆ ಕೆಲಸ ಮಾಡ್ತಿದ್ದಾರೆ ಅಂಥಾ ಅನ್ನಿಸದೇ ಇರೋದಿಲ್ಲ. ಏಕಂದ್ರೆ, ಇಡೀ ದೇಶದಲ್ಲಿ ಕಡಿಮೆ ಸಂಬಳ ಪಡೆಯುತ್ತಿರುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಪೊಲೀಸ್​ಗೆ ಇರೋದು 9ನೇ ಸ್ಥಾನ. ನಮ್ಮ ರಾಜ್ಯಕ್ಕಿಂತ ಚಿಕ್ಕ ರಾಜ್ಯಗಳಲ್ಲೂ ಪೊಲೀಸರು ಒಳ್ಳೆಯ ಸೌಲಭ್ಯ, ಸವಲತ್ತು ಪಡೀತಾ ಇದಾರೆ.  ನಮ್ಮ ಪೊಲೀಸ್ ಕಾನ್​ಸ್ಟೇಬಲ್​ಗಳು 11 ಸಾವಿರದ ಆರುನೂರು ರೂಪಾಯಿ ಬೇಸಿಕ್​ನಿಂದ 21 ಸಾವಿರ ರೂಪಾಯಿವರೆಗೂ ಸಂಬಳ ತಗೋತಾರೆ. ಅದೇ ತೆಲಂಗಾಣ ಕಾನ್​ಸ್ಟೇಬಲ್​ಗಳ ಸಂಬಳ ಬೇಸಿಕ್ ಶುರುವಾಗೋದೇ 16 ಸಾವಿರದ ನಾಲ್ಕುನೂರು ರೂಪಾಯಿಯಿಂದ. ಗರಿಷ್ಠ 49 ಸಾವಿರದ 870 ಅಂದ್ರೆ ಹತ್ತಿರ ಹತ್ತಿರ ಐವತ್ ಸಾವ್ರ ತಗೊಳ್ತಾರೆ. ನಮ್ಮ ಹೆಡ್​ಕಾನ್​ ಸ್ಟೇಬಲ್​ಗಳ ಸಂಬಳ 12 ಸಾವಿರದ ಐನೂರರಿಂದ, 24 ಸಾವಿರದವರೆಗೆ ಇದ್ರೆ, ತೆಲಂಗಾಣದಲ್ಲಿ 21 ಸಾವಿರದ 230 ರೂ.ನಿಂದ 63 ಸಾವಿರದವರೆಗೆ ಇದೆ.  ಪಂಜಾಬ್ ಕಾನ್​ಸ್ಟೇಬಲ್​ಗಳೂ ಕರ್ನಾಟಕದವರಿಗಿಂತ ಜಾಸ್ತಿ ಸಂಬಳ ತಗೊಳ್ತಾರೆ. ಅವರ ಬೇಸಿಕ್ ಶುರುವಾಗೋದು ಕರ್ನಾಟಕದವರಿಗಿಂತ ಕಡಿಮೆ ಅಂದ್ರೆ, 10 ಸಾವಿರದ 300 ರೂ.ನಿಂದ ಶುರುವಾದ್ರೂ, ಗರಿಷ್ಠ 38 ಸಾವಿರದ ವರೆಗೆ ಪಡೆಯಬಹುದು. ಹೆಡ್​ಕಾನ್​ಸ್ಟೇಬಲ್​ಗಳ ಸಂಬಳದಲ್ಲೂ ವ್ಯತ್ಯಾಸ ಇಲ್ಲ. ಅಲ್ಲದೆ, ಪಂಜಾಬ್​ನಲ್ಲಿ ಪೊಲೀಸರಿಗೆ ಸಂಬಳ ಹೊರತಾದ ಇತರೆ ವಿಶೇಷ ಸೌಲಭ್ಯ, ಸವಲತ್ತುಗಳು ಹೆಚ್ಚಾಗಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬ್ಯಾಂಕ್‌ನಿಂದ ರೈತರವರೆಗೆ: ಜನವರಿ 2026ರಿಂದ ಬದಲಾಗುತ್ತಿರುವ ಪ್ರಮುಖ ನಿಯಮಗಳು
ರಾಜ್ಯದಾದ್ಯಂತ ಲೋಕಾಯುಕ್ತ ದಾಳಿ ಸರಣಿ: ವಿಜಯಪುರ, ರಾಯಚೂರು ಸೇರಿ ನಾಲ್ಕು ಜಿಲ್ಲೆಗಳಲ್ಲಿ ಭ್ರಷ್ಟರ ಭೇಟೆ!