ಮುಂಬೈಗೆ ತೆರಳಿ ಬಾಂಬ್ ಸಿಡಿಸಿದ ಎಂಟಿಬಿ, ದೋಸ್ತಿಗೆ ಅತಿದೊಡ್ಡ ಶಾಕ್

Published : Jul 14, 2019, 05:57 PM ISTUpdated : Jul 14, 2019, 06:00 PM IST
ಮುಂಬೈಗೆ ತೆರಳಿ ಬಾಂಬ್ ಸಿಡಿಸಿದ ಎಂಟಿಬಿ, ದೋಸ್ತಿಗೆ ಅತಿದೊಡ್ಡ ಶಾಕ್

ಸಾರಾಂಶ

ಬೆಂಗಳೂರಿನಿಂದ  ಮುಂಬೈಗೆ ತೆರಳಿರುವ ಎಂಟಿಬಿ ನಾಗರಾಜ್ ಜತೆ ಅತೃಪ್ತ ಶಾಸಕರು ಸುದ್ದಿಗೋಷ್ಠಿ ನಡೆಸಿ ದೋಸ್ತಿ ಸರಕಾರಕ್ಕೆ ಕೊನೆ ಶಾಕ್ ನೀಡಿದ್ದಾರೆ.

ಮುಂಬೈ[ಜು. 14] ಮುಂಬೈನಲ್ಲಿ ಬೀಡು ಬಿಟ್ಟಿರುವ ಅತೃಪ್ತ ಶಾಸಕರು ಸುದ್ದಿಗೋಷ್ಠಿ ನಡೆಸಿ ದೋಸ್ತಿ ಸರಕಾರಕ್ಕೆ ನಮ್ಮ ಹತ್ತಿರ ಬರಬೇಡಿ ಬಾಗಿಲು ಮುಚ್ಚಿದೆ ಎಂಬ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.

ಶಾಸಕ  ಎಸ್. ಸಿ. ಸೋಮಶೇಖರ್ ಮಾತನಾಡಿ, ನಾವೆಲ್ಲರೂ ಒಟ್ಟಾಗಿದ್ದೇವೆ. ರಾಜೀನಾಮೆ ಹಿಂದಕ್ಕೆ ಪಡೆಯುವ ಪ್ರಶ್ನೆಯೇ ಇಲ್ಲ. ನಾವು 12 ಜನ ಒಟ್ಟಾಗಿದ್ದು ಸುಧಾಕರ್ ಸಹ ನಮ್ಮನ್ನು ಸೇರಿಕೊಳ್ಳಲಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಒಪ್ಪಿಕೊಂಡಿದ್ದ ಎಂಟಿಬಿ ಮತ್ತೆ ಮುಂಬೈ ವಿಮಾನ ಏರಲು 3 ಕಾರಣ

ನಾವು ಸ್ವ ಇಚ್ಛೆಯಿಂದ ಬಂದಿದ್ದು ನಮ್ಮನ್ನು ಯಾರೂ ಕರೆದುಕೊಂಡು ಬಂದಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದ ಎಂಟಿಬಿ ಸಹ ಹೇಳಿ ಕಾಂಗ್ರೆಸ್ ನಾಯಕರು ಮಾಡಿದ್ದ ಆರೋಪಗಳಿಗೆ ತೆರೆ ಎಳೆಯುವ ಕೆಲಸ ಮಾಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

India Latest News Live: ಭಾರತದಲ್ಲಿ ಭರ್ಜರಿ ಹೂಡಿಕೆಯ ಘೋಷಣೆ ಮಾಡಿದ ದೈತ್ಯ ಕಂಪನಿಗಳು
ಬಿಜೆಪಿ ಬುರುಡೆ ಗ್ಯಾಂಗಿಂದ ಗ್ಯಾರಂಟಿ ಸಾಧ್ಯವಿಲ್ಲ: ಸಿಎಂ ಸಿದ್ದರಾಮಯ್ಯ ವಾಗ್ದಾಳಿ