ಗೌರಿ ಲಂಕೇಶ್ ಹತ್ಯೆಗೆ ಇದೆಯಾ ರಿಯಲ್ ಎಸ್ಟೇಟ್ ಲಿಂಕ್?: ರಿಯಲ್ ಎಸ್ಟೇಟ್ ಉದ್ಯಮಿಗೆ ಎಸ್'ಐಟಿ ಸಮನ್ಸ್

Published : Sep 14, 2017, 10:32 AM ISTUpdated : Apr 11, 2018, 12:43 PM IST
ಗೌರಿ ಲಂಕೇಶ್ ಹತ್ಯೆಗೆ ಇದೆಯಾ ರಿಯಲ್ ಎಸ್ಟೇಟ್ ಲಿಂಕ್?: ರಿಯಲ್ ಎಸ್ಟೇಟ್ ಉದ್ಯಮಿಗೆ ಎಸ್'ಐಟಿ ಸಮನ್ಸ್

ಸಾರಾಂಶ

ಗೌರಿ ಲಂಕೇಶ್ ಹಂತಕರನ್ನು ವಿಶೇಷ ತನಿಖಾ ತಂಡ ಹುಡುಕಾಡುತ್ತಿದೆ. ಗೌರಿ ಲಂಕೇಶ್ ಹತ್ಯೆಗೆ ಸಂಬಂಧಿಸಿದಂತೆ ಪ್ರತಿ ದಿನವೂ ವಿಶೇಷ ತನಿಖಾ ತಂಡದಿಂದ ವಿಚಾರಣೆ ನಡಯುತ್ತಿದೆ. ಈ ನಿಟ್ಟಿನಲ್ಲಿ ಎಸ್'ಐಟಿ ತಂಡ ಈವರೆಗೆ 80 ಜನರ ವಿಚಾರಣೆ ನಡೆಸಿದೆ.

ಬೆಂಗಳೂರು(ಸೆ.14): ಗೌರಿ ಲಂಕೇಶ್ ಹಂತಕರನ್ನು ವಿಶೇಷ ತನಿಖಾ ತಂಡ ಹುಡುಕಾಡುತ್ತಿದೆ. ಗೌರಿ ಲಂಕೇಶ್ ಹತ್ಯೆಗೆ ಸಂಬಂಧಿಸಿದಂತೆ ಪ್ರತಿ ದಿನವೂ ವಿಶೇಷ ತನಿಖಾ ತಂಡದಿಂದ ವಿಚಾರಣೆ ನಡಯುತ್ತಿದೆ. ಈ ನಿಟ್ಟಿನಲ್ಲಿ ಎಸ್'ಐಟಿ ತಂಡ ಈವರೆಗೆ 80 ಜನರ ವಿಚಾರಣೆ ನಡೆಸಿದೆ.

ಎಸ್'ಐಟಿ ರಾಜಕೀಯ ನಾಯಕರೊಬ್ಬರ ಆಪ್ತ  ಸೇರಿದಂತೆ ಹಲವರ ವಿಚಾರಣೆ ನಡೆಸಿದ್ದು, ಇದೀಗ ಗೌರಿ ಲಂಕೇಶ್​​​ ಹತ್ಯೆಗೆ ಇದೆಯಾ ರಿಯಲ್​​ ಎಸ್ಟೇಟ್​ ಲಿಂಕ್​ ಇದೆಯಾ ಎಂಬ ಅನುಮಾನವನ್ನು ಹುಟ್ಟು ಹಾಕಿದೆ. ಬೆಂಗಳೂರಿನ ರಿಯಲ್ ಎಸ್ಟೇಟ್ ಉದ್ಯಮಿಗೆ ಅರುಣ್ ಎಂಬುವವರಿಗೆ ಎಸ್​ಐಟಿ ನೋಟಿಸ್ ಜಾರಿಗೊಳಿಸಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದೆ. ಆರಂಭದಲ್ಲಿ ಉದ್ಯಮಿ ಅರುಣ್ ವಿಚಾರಣೆಗೆ ಹಾಜರಾಗಲು ಹಿಂದೇಟು ಹಾಕಿದ್ದು, ಬಳಿಕ ಪೊಲೀಸರ ಖಡಕ್ ವಾರ್ನಿಂಗ್'ನಿಂದಾಗಿ ಹಾಜರಾಗಲು ಒಪ್ಪಿಗೆ ಸೂಚಿಸಿರುವ ವಿಚಾರ ತಿಳಿದು ಬಂದಿದೆ.

ಇನ್ನು ಉದ್ಯಮಿ ಅರುಣ್, ನೆಲಮಂಗಲದ ಬಳಿ ಇರುವ ಗೌರಿ ಲಂಕೇಶ್ ಕುಟುಂಬಕ್ಕೆ ಸೇರಿದ ಫಾರ್ಮ್ ಹೌಸ್'​ನಲ್ಲಿ ಲೇಔಟ್ ನಿರ್ಮಿಸಲು ಪ್ಲಾನ್​ ಮಾಡಿದ್ದರು. ಆದರೆ ಫಾರ್ಮ್ ಹೌಸ್ ಮಾಲೀಕತ್ವದ ವಿಷಯದಲ್ಲಿ ಕುಟುಂಬ ಸದಸ್ಯರ ಮಧ್ಯೆ ಭಿನ್ನಾಭಿಪ್ರಾಯ ತಲೆದೋರಿತ್ತು ಎನ್ನುವ ಮಾತುಗಳು ಕೇಳಿ ಬಂದಿವೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಉಗ್ರ ನಸೀರ್‌ಗೆ ಜೈಲಲ್ಲೇ ನೆರವು ಪ್ರಕರಣ, ಮತ್ತೆ ಹೆಚ್ಚುವರಿ ಚಾರ್ಜ್‌ಶೀಟ್ ಸಲ್ಲಿಸಿದ ಎನ್‌ಐಎ!
ಉನ್ನತ ಶಿಕ್ಷಣಕ್ಕಾಗಿ ಜರ್ಮನಿಗೆ ಹೋಗಿದ್ದ ಭಾರತೀಯ ಯುವಕ ಕಟ್ಟಡದಿಂದ ಬಿದ್ದು ಸಾವು