ಯಾವುದೇ ತನಿಖೆಗೆ ಸಿದ್ಧ: ಸು.ಕೋ ಮರುವಿಚಾರಣೆ ಆದೇಶ ಬಗ್ಗೆ  ಕುಮಾರಸ್ವಾಮಿ

Published : Sep 27, 2016, 03:25 PM ISTUpdated : Apr 11, 2018, 12:48 PM IST
ಯಾವುದೇ ತನಿಖೆಗೆ ಸಿದ್ಧ: ಸು.ಕೋ ಮರುವಿಚಾರಣೆ ಆದೇಶ ಬಗ್ಗೆ  ಕುಮಾರಸ್ವಾಮಿ

ಸಾರಾಂಶ

ಬೆಂಗಳೂರು (ಸೆ,27): ವಿಶ್ವ ಭಾರತಿ ಹೌಸಿಂಗ್ ಸೊಸೈಟಿ ಹಾಗೂ ಜಂತಕಲ್‌ ಮೈನಿಂಗ್‌ ಗುತ್ತಿಗೆ ಪ್ರಕರಣದ ಮರು ವಿಚಾರಣೆಗೆ  ಸುಪ್ರಿಂಕೋರ್ಟ್ ಆದೇಶ ನೀಡಿರುವ ಬಗ್ಗೆ ಎಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.

ಸುಪ್ರೀಂ ಕೋರ್ಟ್ ನನ್ನ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಿರುವುದು ಹಾಗೂ ತನಿಖೆ ನಡೆಸಲು ಆದೇಶ ನೀಡಿರುವುದು ಆಧಾರ ರಹಿತ ಎಂದು ಹೇಳಿರುವ ಕುಮಾರಸ್ವಾಮಿ ತಾನು ಯಾವುದೇ ತನಿಖೆಗೆ ಸಿದ್ಧವಿರುವುದಾಗಿ ಹೇಳಿದ್ದಾರೆ.

ಕಾವೇರಿ ನೀರು ಹಂಚಿಕೆ ವಿಚಾರದ ಬಗ್ಗೆ ಮುಖ್ಯಮಂತ್ರಿಗಳು ಕರೆದಿರುವ ಸರ್ವ ಪಕ್ಷಗಳ ಸಭೆಯಲ್ಲಿ ಭಾಗವಹಿಸಿದ ಬಳಿಕ ಪ್ರತಿಕ್ರಿಯೆ ನೀಡುವುದಾಗಿ ಹೇಳಿದ್ದಾರೆ.

ವಿಶ್ವ ಭಾರತಿ ಹೌಸಿಂಗ್ ಸೊಸೈಟಿ ಮತ್ತು ಜಂತಕಲ್‌ ಮೈನಿಂಗ್‌ ಗುತ್ತಿಗೆ ಪ್ರಕರಣದ ಮರು ವಿಚಾರಣೆಗೆ  ಸುಪ್ರಿಂಕೋರ್ಟ್ ಇಂದು ಆದೇಶ ನೀಡಿದೆ. ಜೊತೆಗೆ ಕ್ರಿಮಿನಲ್​ ವಿಚಾರಣೆ ಎದುರಿಸುವಂತೆಯೂ ಕುಮಾರಸ್ವಾಮಿಯವರಿಗೆ ತಾಕೀತು ಮಾಡಿದೆ. 

ಎಚ್​ಡಿಕೆ ದಂಪತಿ ವಿರುದ್ಧದ ಈ ಪ್ರಕರಣವನ್ನು ಹೈಕೋರ್ಟ್ ಈ ಹಿಂದೆ ರದ್ದುಪಡಿಸಿತ್ತು. ಕೆಳ ನ್ಯಾಯಾಲಯದ ಈ ಆದೇಶವನ್ನು ಸರ್ವೋಚ್ಚ ನ್ಯಾಯಾಲಯ ವಜಾಗೊಳಿಸಿದ್ದು, ಖುದ್ದು ಹಾಜರಾಗುವಂತೆ ಎಚ್'ಡಿಕೆ ದಂಪತಿಗೆ ಸೂಚಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಾಂಬೋಡಿಯಾದ 30 ಅಡಿಯ ವಿಷ್ಣು ಪ್ರತಿಮೆ ಥಾಯ್ಲೆಂಡಿಂದ ಧ್ವಂಸ
ನೈಸ್‌ ವಿರುದ್ಧ ಇಳಿವಯಸ್ಸಲ್ಲೂ ಕಾನೂನು ಹೋರಾಟ: ಗೌಡ