
ನವದೆಹಲಿ(ಜ.05): ನೋಟುಗಳ ಅಮಾನ್ಯಗೊಂಡ ಬಳಿಕ ಎಷ್ಟು ಮೊತ್ತ ಬ್ಯಾಂಕಿಂಗ್ ವ್ಯವಸ್ಥೆಗೆ ವಾಪಸ್ ಬಂದಿದೆ ಎಂಬ ಕುತೂಹಲ ಹೆಚ್ಚಿರುವಂತೆಯೇ, ಆ ಬಗ್ಗೆ ಆದಷ್ಟು ಬೇಗ ಮಾಹಿತಿ ನೀಡಲಾಗುವುದು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದೆ.
ನೋಟುಗಳ ಎಣಿಕೆ ಪ್ರಕ್ರಿಯೆ ನಡೆಯುತ್ತಿದ್ದು, ಅದು ಪೂರ್ಣಗೊಂಡ ಕೂಡಲೇ ಮಾಹಿತಿ ಬಹಿರಂಗಪಡಿಸಲಾಗುವುದು ಎಂದು ಭಾರತದ ಕೇಂದ್ರ ಬ್ಯಾಂಕ್ ಹೇಳಿದೆ.
‘‘ದೇಶಾದ್ಯಂತ ಎಣಿಕೆ ನಡೆಯುತ್ತಿದ್ದು, ಆ ಪ್ರಕ್ರಿಯೆ ಮುಗಿಯದೇ ವಾಪಸಾದ ಮೊತ್ತವನ್ನು ಅಂದಾಜು ಮಾಡಲು ಸಾಧ್ಯವಿಲ್ಲ,’’ ಎಂದು ಹೇಳಿದೆ.
ನವೆಂಬರ್ 08ರಿಂದ ನೋಟು ಅಮಾನ್ಯವಾದ ಬಳಿಕ ಡಿಸೆಂಬರ್ 10ರಂದು ಆರ್'ಬಿಐ ಬಿಡುಗಡೆ ಮಾಡಿದ ಅಂಕಿ-ಅಂಶಗಳ ಪ್ರಕಾರ 12.4 ಲಕ್ಷಕೋಟಿ ಬ್ಯಾಂಕಿಗೆ ಬಂದಿದೆ ಎಂದು ಮಾಹಿತಿ ನೀಡಿತ್ತು. ಇದೀಗ ನೋಟು ಬದಲಾವಣೆಗೆ ನೀಡಿದ್ದ ಗಡವು ಮುಗಿದ ಬಳಿಕ ಬ್ಯಾಂಕ್'ಗಳಿಗೆ ಎಷ್ಟು ಹಣ ಮರುಪಾವತಿಯಾಗಿದೆ ಎಂದು ಆರ್'ಬಿಐ ಮಾಹಿತಿ ಬಹಿರಂಗ ಪಡಿಸಿಲ್ಲ.
ಏತನ್ಮಧ್ಯೆ, ಮಧ್ಯಪ್ರದೇಶದ ರೈತರೊಬ್ಬರಿಗೆ ಮಹಾತ್ಮ ಗಾಂಧಿಯ ಭಾವಚಿತ್ರ ಇಲ್ಲದೇ ಇರುವ ₹2 ಸಾವಿರದ ನೋಟು ಸಿಕ್ಕಿದ್ದು, ಅದು ನಕಲಿಯಲ್ಲ, ಮುದ್ರಣದಲ್ಲಾದ ದೋಷ ಎಂದು ಬ್ಯಾಂಕ್ ಸ್ಪಷ್ಟಪಡಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.